ಹುಸೇನಿ ಪದ್ಯಗಳು – 39 · ಹುಸೇನಿ_ಪದ್ಯಗಳು

ಸ್ವಗತಗಳ ಸಾಂತ್ವನ (ಹುಸೇನಿ ಪದ್ಯಗಳು – 39)


​ಹಸಿವಾಗಲು ಮಾತ್ರೆಯಿದೆ;
ಕೇರಿಯ ಅನಾಥ ಹುಡುಗ
ಕಾಯುತ್ತಿದ್ದಾನೆ,
ಹಸಿವಾಗದಿರಲು ಔಷಧಿ ಬೇಕಂತೆ..

ಅಲ್ಲಿ ಅವರು
ಶಾಂತಿ ಸ್ಥಾಪನೆಗಾಗಿ
ಯುದ್ಧ ನಿರತರಾಗಿದ್ದಾರೆ;

ಒಡೆದ ಗಾಜು
ಮರು-ಜೋಡಿಸಲಾರದಂತೆ;
ಮತ್ತೆ ಬದುಕು ?

ಎಲ್ಲವನ್ನೂ ಸಹಿಸಬಲ್ಲೆ;
ಜಗದಗಲ ಹರಡಿದ ಶೂನ್ಯತೆ ಒಂದನು
ಬಿಟ್ಟು


ಅವಸರಬೇಡ,
ಸಾವು
ನಿನ್ನ ಪಾದಕ್ಕಂಟಿದ ಚಪ್ಪಲಿ;

ಹಾಳೂರಿನ
ಹಾದಿಯಲ್ಲೊಂದು
ಮದುವೆ ದಿಬ್ಬಣಕೆ
ಎದುರಾದ ಶವಯಾತ್ರೆ;
ಮುದಿಯನೊಬ್ಬ ಗೊಂದಲದಲ್ಲಿದ್ದಾನೆ

ಸ್ವಗತಗಳಲಿ
ಸಾಂತ್ವನವಿದೆ;
ಹೊರಸಾಯುವ
ಪದಗಳಿಗಿಂತ,
ಇರಿದ ನಿನ್ನೆಗಿಂತ, ಸಾವ ಕರೆವ ನಾಳೆಗಿಂತ..

ಹುಸೇನಿ ~

ಹೇಗಿದೆ ಹೇಳಿ

8 thoughts on “ಸ್ವಗತಗಳ ಸಾಂತ್ವನ (ಹುಸೇನಿ ಪದ್ಯಗಳು – 39)

Leave a comment