ಹನಿ ಕಥನ

ಹನಿ ಕಥನ

ಯುದ್ಧ ಬೇಕು ಯುದ್ದ ಬೇಕು
ಅಟ್ಟಹಾಸಗೈದವನ ಮಗ ಅಮೆರಿಕಾದಲ್ಲಿ
ಸಾಫ್ಟ್ವೇರ್ ಇಂಜಿನಿಯರ್;
ಶಾಂತಿ, ಶಾಂತಿ, ಯುದ್ದ ಬೇಡ
ಗೋಗರೆಯುತ್ತಿದ್ದವನ ಮಗ
ಗಡಿ ಕಾಯುವ ಯೋಧ..

__

ವೃದ್ದಾಶ್ರಮ ಸೇರಿರುವ ರಾಯರು
ಹೊತ್ತು ಕಳೆಯಲು
“ಪೋಷಕರ ಪೋಷಣೆ ಮಕ್ಕಳ ಕರ್ತವ್ಯ”
ವಿಷಯದ ಮೇಲೆ ಹೊಸ ತಲೆಮಾರಿನ ಯುವಕರಿಗೆ
ಆದರ್ಶ ಪಾಠ ಹೇಳಿಕೊಡುತ್ತಿದ್ದಾರೆ.

__

“ಯತ್ರ ನಾರ್ಯಸ್ತು ಪೂಜ್ಯಂತೆ,
ರಮಂತೆ ತತ್ರ ದೇವತಾ” ಎಂದು
ಮೊನ್ನೆ ಪ್ರವಚನ ಕೊಟ್ಟ ಅಧ್ಯಾತ್ಮಿಕ
ಗುರುವನ್ನು , ನಿನ್ನೆ ಅತ್ಯಾಚಾರ
ಪ್ರಕರಣದಲ್ಲಿ ಬಂದಿಸಲಾಗಿದೆ.

Add Comments