ಹುಸೇನಿ ಪದ್ಯಗಳು – 37 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 37

nenapinasanchi-manwoman

ಅಬ್ಬರದ ಭಾಷಣದಿಂದ
ದೇಶದ ದಿಶೆ ಬದಲಿಸಬಹುದು
ಹಸಿವಿಗೆ ಅನ್ನವೇ ಬೇಕು ..

ಅವನು ಮಸೀದಿಯೊಳಗೆ,
ಇವನು ಮಂದಿರದೊಳಗೆ,
ಮತ್ತಿಬ್ಬರು ಅವುಗಳ ಗೇಟಿನ ಹೊರಗಡೆ
ಬೇಡುತ್ತಲೇ ಇದ್ದರು..
— 

ಮಗ ಬೈಕಿನ ಮೊದಲನೇ
ರೈಡಿಗೆ ಕೂಗಿ ಕರೆಯುತ್ತಿದ್ದ;
ಅಪ್ಪ ಅದರ ಸಾಲದ ಮೊದಲಿನ
ಕಂತಿನ ಲೆಕ್ಕಾಚಾರದಲ್ಲಿ ಮೈಮರೆತಿದ್ದ;


ಮೊದಲ ರಾತ್ರಿಯ ಮರುದಿನ
ಈರುಳ್ಳಿಯ ಒಂದೊಂದೇ
ಸಿಪ್ಪೆ ತೆಗೆಯುತ್ತಿದ್ದ ಹುಡುಗಿ
ಒಳಗೊಳಗೇ ಲಜ್ಜೆಯಿಂದ ಕಂಪಿಸುತ್ತಿದ್ದಳು;


ಬಟ್ಟೆ ತೊಟ್ಟು ಸಭ್ಯ
ಎನಿಸಿಕೊಂಡ ಮನುಷ್ಯನ
ಪರಮಾನಂದಗಳು
ಬೆತ್ತಲೆ ದೇಹವನ್ನು ಬೇಡುತ್ತದೆ;

ಹುಸೇನಿ ~

Leave a comment