ಕಾಡುವ ಹನಿಗಳು · ತೊರೆಯ ತೀರದ ನೆನಪುಗಳು · ಬಿಂದು · ಬಿರಿಯದ ಮೊಗ್ಗು · ಮತ್ತೆ ಸಂಜೆಯಾಗುತ್ತಿದೆ.. · ಮನಸಿನ ಹಾ(ಪಾ)ಡು · ವಿಜಯ ಕರ್ನಾಟದಲ್ಲಿ ನನ್ನದೊಂದು ಪದ್ಯ · ಹುಸೇನಿ_ಪದ್ಯಗಳು

ವಿಜಯ ಕರ್ನಾಟದಲ್ಲಿ ನನ್ನದೊಂದು ಪದ್ಯ

ಕಳೆದ ಭಾನುವಾರದ [6/11/2016] ವಿಜಯ ಕರ್ನಾಟಕ – ಲವಲvk ಪುರವಣಿಯಲ್ಲಿ ಪ್ರಕಟವಾದ ನನ್ನದೊಂದು ಪದ್ಯ

kavana

Leave a comment

ಆತ್ಮ ಸಂಗಾತದೊಂದಿಗೆ ಅತ್ಮೀಯ ಬಾಲ್ಯ ... · ತೊರೆಯ ತೀರದ ನೆನಪುಗಳು · ಮತ್ತೆ ಸಂಜೆಯಾಗುತ್ತಿದೆ.. · ಸಣ್ಣ ಕತೆ

ಆತ್ಮ ಸಂಗಾತದೊಂದಿಗೆ ಅತ್ಮೀಯ ಬಾಲ್ಯ …

“ನಿನ್ನ ಒಂದಿಷ್ಟು ಶೂನ್ಯ ತಾ.. ನನ್ನೊಂದಿಷ್ಟು ಏಕಾಂತ ತರುವೆ.. ಮೌನದಿಂದಲೇ ಈ ಸ್ನೇಹಕ್ಕೊಂದು ಸೂರು ಕಟ್ಟೋಣ ಆಗದೇ… ?”

ನಿನ್ನ ಈ ಸಾಲು ಓದಿದಾಗೆಲ್ಲ ಈ ಜಗದ ಮಾನಸಿಕ ಅಪರಿಚಿತತೆಯ ಮೆಟ್ಟಿ ನಿಂತು ಎದ್ದು ಬಿದ್ದು ಅಂಬೆಗಾಲಿಕ್ಕುವ ಮಗುವಿನ ಜೀವನೋತ್ಸಾಹದಂತೆ, ಹೊಸ ಕವನಕ್ಕೆ ಕಾವು ಕೊಟ್ಟ ಕವಿಯಂತೆ ಸಂಭ್ರಮಿಸುತ್ತೇನೆ. ಅಲ್ಲೆಲ್ಲೊ ಭೋರ್ಗರೆವ ಶರಧಿಯ ನಡುವೆ ನಿರ್ಲಿಪ್ತ ಏಕಾಂಗಿ ದ್ವೀಪವಾಗಿದ್ದೆ ನಾನು. ನನ್ನೊಳಗೆ ನಾನೇ ಕಟ್ಟಿಕೊಡ ಜಗತ್ತು ಅದು. ಯಾವ ಹಂಗೂ ಇಲ್ಲ, ಮುಂಜಾನೆಯ ವಿಭಾಕಿರಣಗಳು, ಮುಸ್ಸಂಜೆಯ ಮೆಲುಗಾಳಿ, ಅಮವಾಸ್ಯೆಗಳೂ ಹುಣ್ಣಿಮೆಗಳೂ ನನ್ನೊಳಗೆ ಯಾವುದೇ ವಿಶೇಷ ತರಂಗವನ್ನು ಸೃಷ್ಟಿಸುತ್ತಿರಲಿಲ್ಲ. ಕಿನಾರೆಯಲ್ಲಿ ನಿಂತು ಶರಧಿಯನ್ನು ಮುತ್ತಿಕ್ಕುವ ಆಗಸದ ಆ ಅನಂತ ಬಿಂದುವನ್ನು ತದೇಕಚಿತ್ತದಿಂದ ವೀಕ್ಷಿಸುತ್ತಿದ್ದೆ. ಹಾಗೆ ದಿಟ್ಟಿಸುವಾಗೆಲ್ಲ ಭಾವ ಬಂಧಗಳಿಗೆ ತೆರೆದುಕೊಂಡು ಬದುಕಿAlone-Boy-In-Love-Wallpaperನ ಅರ್ಥ ಕಂಡುಕೊಳ್ಳಬೇಕೆಂಬ ತಹತಹಿಕೆ ನನ್ನೊಳಗೆ ಒತ್ತರಿಸಿ ಬರುತ್ತಿತ್ತು.. ಅದು ಅಷ್ಟು ಸುಲಭವಲ್ಲ… ನಾನೆಂಬುದು ಬರಿಯ ಗೋಜಲಿನ ಮೂಟೆ, ನಾನೇನು..? ನನ್ನ ಅಸಿತ್ವವೇನು..? ಎಲ್ಲವೂ ದ್ವಂದ್ವ. ಪೂರ್ವವೂ ಅಲ್ಲದ, ಪಶ್ಚಿಮವೂ ಅಲ್ಲದ ರಾತ್ರಿಯೂ ಅಲ್ಲದ, ಹಗಲೂ ಅಲ್ಲದ, ನಿದಿರೆಯೂ ಅಲ್ಲದ, ಎಚ್ಚರವೂ ಅಲ್ಲದ, ಅದೊಂದು ತ್ರಿಶಂಕು ಮನಸ್ಥಿತಿ. ನನ್ನ ತವಕ ತಲ್ಲಣಗಳು, ಅನುಮಾನಗಳು, ಆತಂಕಗಳು, ಅತಿರೇಕಗಳು, ಅನುಭವಗಳು, ಅನುಭಾವಗಳು ಇದೆಲ್ಲವನ್ನೂ ನನ್ನನ್ನು ಮತ್ತಷ್ಟು ಅಯೋಮಯವಾಗುಸುತ್ತದೆ. ನನ್ನ ಹಾಗೆ ಯೋಚಿಸುವ, ನನ್ನದೇ ಬಡಿತದ ಲಯದಲ್ಲಿ, ತಾಳದಲ್ಲಿ ಹೃದಯ ಬಡಿತವಿರುವ ಯಾರಾದರೂ ಇರಬಹುದೇ ಎಂಬ ನನ್ನ ಜಿಜ್ಞಾಸೆಗೆ ಉತ್ತರ ಸಿಗಲಾರದೆ ಪರಿತಪಿಸುತ್ತಿದ್ದೆ.

TOPSHOTS Pakistani children play near the Ravi river in Lahore on April 6, 2015. AFP PHOTO / Arif ALIArif Ali/AFP/Getty Images

ಕಾಲ ಎಲ್ಲದಕ್ಕೂ ಉತ್ತರವಾಗಿ ಬಂತು. ನೀ ನನಗೆ ಸಿಕ್ಕಿದೆ, ಅಲ್ಲ ನನಗೆ ನಾ ದಕ್ಕಿದೆ. ನಿನ್ನದೇ ಮಾತಿನಲ್ಲಿ ಹೇಳಬೇಕಾದರೆ ಒಂದಿನಿತು ಸ್ನೇಹದಾಸೆ ನಮಗಾಗಿ ಹೊಸ ಜಗತ್ತನ್ನೇ ತೆರೆದಿಟ್ಟಿತು, ಮೆಚ್ಚುಗೆ, ಪ್ರೀತಿ, ಮಮಕಾರ, ಹವ್ಯಾಸ, ಇಷ್ಟಗಳು ಎಷ್ಟೊಂದು ಸಾಮ್ಯತೆ.. !. ಇನ್ನಿಲ್ಲದಂತಹಾ ಆತ್ಮೀಯತೆ, ಹಿಂದೆಂದೂ ಕಂಡರಿಯದ ನನ್ನೊಂದಿಗೇ ನನ್ನ ನಂಟು, ಭಾವನಾ ಲೋಕದಲ್ಲಿ ವಿಹರಿಸುತ್ತಿದ್ದರೂ ವಾಸ್ತವದಲ್ಲಿ ಒಂದಾಗುವ ಹೃದಯದ ಮಿಡಿತ, ಮಾತುಗಳಲ್ಲಿರದ ಆಕರ್ಷಣೆ ಆ ಮೌನ ಆರ್ದ್ರ ನೋಟಗಳಲ್ಲಿ ಕಂಡುಬರುವುದೇನು ಸಾಮಾನ್ಯವೇ ವಿಷಯವೇ..?. ಕೆಲವೊಂದು ಸಲ ನಿನ್ನ ಮಾತುಗಳು ನನ್ನ ಕರ್ಣ ಪಟಲವನ್ನು ದಾಟಿ, ಭಾವ ತಂತುಗಳ ವರೆಗೂ ಮುಟ್ಟಿ ಅಲ್ಲಿ ಸೂಕ್ಷ್ಮ ತರಂಗ ಗಳನ್ನೇ ಉಂಟುಮಾಡುತ್ತದೆ. ಹೀಗೆ ನಿನ್ನ ಮಾತಿಗೆ ಒಮ್ಮೆ ಆಶ್ಚರ್ಯ ಪಡುತ್ತ, ಬೆರಗಾಗುತ್ತ, ಮತ್ತೊಮ್ಮೆ ಆ ಮಾತು ನನಗೆ ಪ್ರಶ್ನೆಯಾಗುತ್ತ ಮಗದೊಮ್ಮೆ ಉತ್ತರವಾಗುತ್ತ ಎಷ್ಟೋ ಸಲ ಆ ಮಾತಿಗೆ ನಾನೇ ಭಾವವಾಗುತ್ತಾ ನನ್ನ ಮುಗ್ಧ ಪ್ರಪಂಚ ವಿಸ್ತಾರವಾಗುತ್ತಿದೆ. ಕೆಲವಕ್ಷರಗಳ ಸಂದೇಶಕ್ಕೆ ಇಡೀ ಜೀವಿತವನ್ನೇ ತೆರೆದಿಡುವ ಶಕ್ತಿ, ಹೃದಯದೊಂದರ್ಧ ಚಡಪಡಿಸಿದಾಗ ಮತ್ತೊಂದರ್ಧ ದಲ್ಲಿ ಏನೋ ತಳಮಳ, ಒಂದರ ನೋವು ಮತ್ತೊಂದು ಕಣ್ಣಲ್ಲಿ ನೀರು ತರಿಸುವುದೇಕೋ, ಇಲ್ಲಿ ಬಾಹ್ಯ ಮಿಲನವೇ ಇಲ್ಲ ಅದರ ವಾಂಛೆಯೂ ಇಲ್ಲ,ಆತ್ಮಗಳ ವಿರಹದ ಬೇಗೆ ಮಾತ್ರ ಸುಡುವಂತಿದೆ, ಇಹದ ಮಿಲನದ ಹಂಗಿಲ್ಲದವರ ಸಾಲಲ್ಲಿ ಶೂನ್ಯ ಏಕಾಂತದ ಜೊತೆಯಾಗಿದೆ, ಭಾವನೆಗಳ ಮಿಲನ ಹೃದಯಕ್ಕೆ ನಿಷ್ಕಳಂಕ ಸ್ನೇಹದ ಗರ್ಭದಾನ ಮಾಡಿ, ಭಾವಲೋಕದಲ್ಲೊಂದು ಮುಗ್ಧ ಶಿಶು ಜನಿಸಿದೆ…!

atma-sangatha-criket

ಆ ಶಿಶು ನಮ್ಮೊಳಗಿನ ಅನೂರವಾದ ಸ್ನೇಹ. ನಿನಗೆ ಗೊತ್ತಾ… ? ನನ್ನನ್ನು ನಿನ್ನನ್ನೂ ಹುಟ್ಟಿನಿಂದಲೇ ಬೆಸೆಯಲಾಗಿತ್ತು. ನಿನ್ನದೇ ಮುಂದುವರಿಕೆ ನಾನು ಅಥವಾ ನನ್ನದೇ ಮುಂದುವರಿಕೆ ನೀನು.. ಅಂದು ನಿಮ್ಮೂರಲ್ಲಿ ಸಿಹಿ ಹಂಚಲಾಗಿತ್ತು. ನಿನ್ನಪ್ಪ ರಾಜಗಾಂಭೀರ್ಯದಿಂದ ರಾಜಕುಮಾರಿಯನ್ನು ದಿಟ್ಟಿಸಿ ಸಂಭ್ರಮಪಟ್ಟಿದ್ದ. ನಮ್ಮನೆಯಲ್ಲೂ ಅಷ್ಟೇ, ಅಜ್ಜಿಗೆ ಮೊದಲ ಮೊಮ್ಮಗ, ಸಿಹಿ ಹಂಚಿದ ಅಪ್ಪನ ಮೊಗದ ಮಂದಹಾಸದಲ್ಲೊಂದು ಅನುಶ್ವರವಾದ ಸಂತಸವೊಂದಿತ್ತು. ನೀನು ನನಗಿಂತಲೂ ಮುಂಚೆ ಅಂಬೆಗಾಲಿಡಲು, ದೇಕಲು, ಕುಳಿತುಕೊಳ್ಳಲು, ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ನಡೆಯಲು ಆರಂಭಿಸಿದ್ದೆ. ಆಮೇಲೆ ಶಾಲೆ ಮದ್ರಸಾ.. ನಮ್ಮೆಲ್ಲ ಮಗುತನವ ಕೊಂಚ ಕೊಂಚವೇ ಕಳೆದುಕೊಳ್ಳಲು ಆರಂಭವಾಯ್ತು. ನಾನು ಸ್ಕೂಲ್ ಕಳ್ಳ, ಊರ ಗುಡ್ಡದ ಮೇಲಿನ ಸರ್ಕಾರಿ ಶಾಲೆ ನಂಗೆ ಅವಾಗ ಭೂತ ಬಂಗಲೆ. ಒಂದನೇ ತರಗತಿಗೆ ಹೋದದ್ದೇ ಕಮ್ಮಿ. ಅಮ್ಮ ಎಷ್ಟು ಸಲ ಅಟ್ಟಾಡಿಸ್ಕೊಂಡು ಹೋಗಿದ್ರು ಗೊತ್ತ?. ಹಾಗೆ ಓಡಿಸುವಾಗ ದಾರಿ ಬದಿಯ ಬಳ್ಳಿ ಗಿಡದ ಬೆತ್ತದ ರುಚಿ ತೀರ ರುಚಿಸುತ್ತಿರಲಿಲ್ಲ. ನೀನು ಅಷ್ಟೇ ಪೆಚ್ಚು ಮೊರೆ ಹಾಕಿ ಇಷ್ಟಗಲ ಬೊಚ್ಚುಬಾಯಿ ಅಳು, ಅಮ್ಮನಿಂದ ಬೆನ್ನಿಗೆರಡು ಸಿಕ್ರೇನೆ ಶಾಲೆ ದಾರಿ ನೆನಪಾಗೋದು.

atma-sangatha-scooterನಿನ್ನ ಮದ್ರಸಾ ಉಸ್ತಾದರ ಕೈಯಲ್ಲಿ ನಿಮ್ಮಪ್ಪ ಕೊಟ್ಟ ನಾಗರ ಬೆತ್ತ ನಿನಗೆ ದಿಗಿಲು ಹುಟ್ಟಿಸುತ್ತಿತ್ತು. ಅರ್ದ ಉರು ಹೊಡೆದ ಪಾಠಗಳನ್ನೂ ಕನವರಿಸುತ್ತಿದ್ದೆ ಅಂತ ನಿನ್ನಮ್ಮ ಹೇಳ್ಕೊಳ್ತಾ ಇದ್ರು. ಶಾಲೆಯಿಂದ ಬರುವಾಗ ಇದ್ದ ಸಿಟ್ಟೆಲ್ಲ ದಾರಿಯಲ್ಲಿರುವ ಕಮ್ಮ್ಯುನಿಷ್ಟ್ ಗಿಡದ ಮೇಲೆ ತೀರಿಸ್ಕೊಳ್ತಿದ್ವಿ. ಒಂದು ಬೆತ್ತ ಹಿಡಿದು ಓದಿದ್ಯಾ..? ಉತ್ತರಕೊಡು.. ಅಂತ ಪ್ರಶ್ನೆ ಕೇಳಿ ಅದರ ತಲೆ ಹಾರಿಸ್ತಿದ್ದೆವು. ಕೋಪ ಹೆಚ್ಚಿದರೆ ಅದು ನುಚ್ಚು ನೂರು. ಮನೆಗೆ ತಲುಪಿದವಳೇ ಆಡು ಮರಿಯನ್ನೆತ್ತಿ ಮುದ್ದು ಮಾಡಿ ಮಡಿಲಲ್ಲಿ ಕುಳ್ಳಿರಿಸಿ ತಲೆ ನೇವರ್ಸ್ತಿದ್ದೆ. ನಾನಿಲ್ಲಿ ನನ್ನ ಮುದ್ದು ಬೆಕ್ಕು ಮರಿಗೆ ಹಾಲೆರಿತಿದ್ದೆ. ಅದು ಕಣ್ಣು ಮುಚ್ಚಿ ಕುಡಿಯೋದನ್ನ ನೋಡುವುದೇ ಸಂಭ್ರಮ. ಆಮೇಲೆ ಚಿಣ್ಣಿ – ದಾಂಡು, ಲಗೋರಿ, ಕ್ರಿಕೆಟ್, ನಿನ್ನ ಕುಂಟೆ ಬಿಲ್ಲೆ, ಜೋಕಾಲಿ, ಹೆಸರು ಗೊತ್ತಿಲ್ಲದ ಆ ಕೈಯಲ್ಲೇ ಕಲ್ಲನ್ನು ಆಡಿಸುವ ಆಟ, ಸ್ಟಾಚ್ಯೂ, ಕಲರ್ ಕಲರ್ ವಾಟರ್ ಕಲರ್, ಕಳ್ಳ ಪೋಲಿಸ್, ಮನೆಯಿಂದ ಕದ್ದು ತಿಂದ ಮಿಲ್ಕ್ ಪೌಡರ್, ಬೆಲ್ಲ, ಹಾರ್ಲಿಕ್ಸ್ … ಇನ್ನೇನೋ. ಪಕ್ಕದ ಮನೆಯ ಇಕ್ಕುನೊಂದಿಗೆ ಸೇರಿ ಬೀಡಿ ಎಳೆದದ್ದು, ಮೂಗಲ್ಲಿ ಹೊಗೆ ಬಿಡಲು ಹೋಗಿ ಕೆಮ್ಮು ಬಂದು ಅರ್ಧಕ್ಕೆ ಬಿಸಾಡಿದ್ದು, ರಾತ್ರಿ ಪೂರ ಹೊಟ್ಟೆಯಿಂದ ಹೊಗೆಯ ವಾಸನೆಗೆ ಕೆಮ್ಮಿ ಕೆಮ್ಮಿ ಸುಸ್ತಾದ್ದು. ಅದೆಲ್ಲ ಗೊತ್ತಾಗಿ ಅಲ್ಲಿಂದಲೇ ಗೊಳ್ಳೆಂದು ನಕ್ಕಿದ್ದೆ ನೀನು. ನನಗಿಲ್ಲಿ ಸಂಜೆ ತೋಟದ ಬದಿಯ ತೊರೆಯ ಸ್ನಾನದ ಮಜಾನೆ ಬೇರೆ ಇತ್ತು. ನಿನಗಲ್ಲಿ ಅಮ್ಮ ಹತ್ತು ಬಾರಿ ಕೂಗ್ಬೇಕು ನಿನ್ನ ಸ್ನಾನಕ್ಕೆ. ಅದರಲ್ಲೂ ಸೋಂಬೇರಿ ನೀನು!. pithooರಾತ್ರಿಯ ಅಜ್ಜಿ ಕತೆಯ ರಕ್ಕಸರು ನಿನಗೆ ಕೊಟ್ಟಷ್ಟೇ ಹೆದರಿಕೆ ನಂಗೂ ಕೊಟ್ಟಿತ್ತು. ಅದ ಕೇಳಿ ಬಚ್ಚಲು ಮನೆಗೆ ಹೋಗಲು ಭಯ ಅಲ್ವಾ … ?. ಬಾಲಮಂಗಳದ ಡಿಂಗ ಲಂಬೋದರ ನಿನಗೆಷ್ಟು ಇಷ್ಟವೋ ನಂಗೂ ಅಷ್ಟೇ ಇಷ್ಟ ಆಗಿದ್ರು. ನೀನಲ್ಲಿ ಮಾವಿನ ಮಿಡಿಯನ್ನು ಕದ್ದು ತಂದ ಉಪ್ಪಿನೊಂದಿಗೆ ತಿನ್ನುವಾಗ ಇಲ್ಲಿ ನನ್ನ ಬಾಯಲ್ಲಿ ನಿರೂರಿತ್ತು. ಅಪ್ಪನ ಸ್ಕೂಟರ್ ಮೇಲೆ ಕೂತ್ಕೊಂಡು ಅಂಬಾರಿ ಮೇಲೆ ಕೂತಂತೆ ಆದ್ಕೊತ್ತಿದ್ದೆ ನೀನು. ನಂಗೆ ಸಿರಾಜನ ಕೈಯಲ್ಲಿದ್ದ ಸೈಕಲ್ ನೋಡುವುದೇ ಕುಶಿ. ಶಾಲಾ ಟೂರ್-ಗೆ ನೀನು ನಿಮ್ಮ ಶಾಲೆಯ ಹೆಸರು ಹಾಕಿ ಪ್ರವಾಸಕ್ಕೆ ಶುಭವಾಗಲಿ ಅಂತ ಬರೆದು ಬಸ್ಸಿಂದಲೇ ಹಾರಿಸಿದ ಚೀಟಿ ನಮ್ಮೂರಿನ ರಸ್ತೆಯಲ್ಲಿ ಸಿಕ್ಕಿತ್ತು. ನಿನ್ನ ದುಂಡು ಅಕ್ಷರ ಎಷ್ಟು ಚೆಂದ ಗೊತ್ತಾ..?. ನೀನಲ್ಲಿ ನಿನ್ನಬ್ಬನ ಜೊತೆ ಸೇರಿ ಊಟ ಮಾಡುವಾಗ ನಾನು ಕೂಡಾ ಉಪ್ಪನೊಟ್ಟಿಗೇ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದೆ. ದೂರದರ್ಶನ ಬಂದ ಮೇಲಂತು ಶಕ್ತಿಮಾನ್ ನಮಗೆ ಹೀರೋ ಆಗಿದ್ದ. ದಿ ಗ್ರೇಟ್ ಡಾಕ್ಟರ್ ತಮ್ರಾಜ್ ಕಿಲ್ವಿಶ್ ಕರ್ಕಶವಾಗಿ “ಅಂಧೇರಾ ಖಾಯಂ ರಹೇ ..” ಅನ್ನುವಾಗ ನೀನಲ್ಲಿ ಕಂಪಿಸುತ್ತಿದ್ದೆ. ನಾನಿಲ್ಲಿ ಅದನ್ನು ನೋಡಿ ಮುಸಿ ಮುಸಿ ನಗುತ್ತಿದ್ದೆ. ಆಮೇಲೆ ರಾತ್ರಿಯ ಚಿತ್ರಗೀತ್ ‘ಸುರಾಗ್’ ಇಬ್ರು ಬಿಡದೆ ನೋಡ್ತಿದ್ದೆವು. ಬದುಕು ಸಾಗುತ್ತಿತ್ತು. ನಮ್ಮೆಲ್ಲ ಮಗುತನವನ್ನು ಅಳಿಸಿ … ನಂತರ ಹೈಸ್ಕೂಲು, ಪಿಯೂಸಿ, ಡಿಗ್ರಿ…. ಇಲ್ಲೇಲ್ಲವೂ ನಮ್ಮಿಬ್ಬರ ಅಭಿರುಚಿಗಳು kabaddiಸಮಾನವಾಗಿತ್ತು. ದೂರದೂರವಿದ್ದರೂ ಯಾವುದೊ ಅಗೋಚರ ಶಕ್ತಿ ನಮ್ಮನ್ನು ಅವಿನಾಭಾವವಾಗಿ ಬೆಸೆದಿತ್ತು. ಬೆಳೆಯುತ್ತ ಬೆಳೆಯುತ್ತಾ ಇಂದಿನ ನಾವಾಗಿದ್ದೇವೆ. ಎರಡು ದೇಹ ಎರಡು ಹೃದಯ, ಅದರ ತುಡಿತ ಮಿಡಿತ ಒಂದೇ… ಒಂದೇ ಮನಸ್ಸು. ನಾನು ಏನಾಗಿತ್ತೋ ನೀನೂ ಅದೇ ಆಗಿದ್ದೆ. ಮೌನ ಕಣಿವೆಯಲ್ಲಷ್ಟೇ ನನ್ನ ಭಾವನೆಗಳು ಗುಪ್ತಗಾಮಿನಿಯಾಗಿ ಹರಿಯುತ್ತದೆ. ಬೇರೆಲ್ಲೂ ಅದು ತೆರೆದುಕೊಳ್ಳುವುದಿಲ್ಲ. ನಿರ್ದಿಷ್ಟ ಗಡಿಯೊಳಗಷ್ಟೇ ಅದು ಚಲಾವಣೆಗೊಳ್ಳುತ್ತದೆ. ಬಹುಶಃ ಈ ತರದ್ದೊಂದು ಗಡಿಯಿಟ್ಟು ಕೊಂಡವರಿಗಷ್ಟೇ ಪರಸ್ಪರ ತುಡಿತ, ಆತಂಕ, ಅಭೀಪ್ಸೆಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿ ಇರಬಹುದು. ಹಾಗಾಗಿಯೇ ಇವತ್ತಿನ ಈ ಕ್ಷಣದವರೆಗಿನ ನಮ್ಮ ಆತ್ಮೀಯತೆ ಈ ಮಟ್ಟಕ್ಕೆ ಬಂದು ನಿಂತದ್ದು.

ನೀನು ಅಂತರಾತ್ಮದಲ್ಲಿ ಸೃಜಿಸುವ ಜೀವಕಲೆ.. ನನ್ನ ಮುಂಜಾನೆಯಲ್ಲೂ ಮುಸ್ಸಂಜೆಯಲ್ಲೂ ಉಸಿರಿಗೆ ಜೀವನ್ಮುಖೀ ಭಾವತುಂಬಿ ಎದೆಯ ಶೂನ್ಯ ಬಟ್ಟಲ ತುಂಬಿಕೊಡುವ ಆವರ್ತ ಮಳೆ. ಎದೆ ಬಯಲಲಿ ಹೂ ಬಿಡುವ ಮಧುರ ಭಾವಗಳ ಒರತೆಯ ಮೂಲ ಸೆಲೆ. ಇನ್ನು ಯಾವ ಪರದೆಯೂ ಪರಿಧಿಯೂ ಇಲ್ಲ(ಬೇಡ).. ಆತ್ಮ ಸಂಗಾತ ನೀನು… ಆತ್ಮದೊಳಗಿಂದ ಭರವಸೆಯ ಕಿಡಿಗೆ ನಿನ್ನದೇ ಹೆಸರಿದೆ, ಉಸಿರಿದೆ.. ಬಾ.. ನೀನೊಮ್ಮೆ ಸಾಗರವಾಗು… ನದಿಯಾಗಿ ಹರಿದು ನಿನ್ನಲ್ಲೇ ಲೀನವಾಗಬೇಕು.. ನನ್ನ ಅಸ್ತಿತ್ವವೇ ಇಲ್ಲದ ಹಾಗೆ… ಅದರಲ್ಲೇ ಹೆಚ್ಚು ಖುಷಿ ನನಗೆ.

~ಹುಸೇನಿ

Leave a comment

ಕಾಡುವ ಹನಿಗಳು · ನೆನಪಿನ ಸಂಚಿ - ಹತ್ತು ಲಕ್ಷ ದಾಟಿದ ಓದುಗರು · ನೆನಪಿನ ಹನಿ · ನ್ಯಾನೋ ಕಥೆಗಳು · ಬಿಂದು · ಬಿರಿಯದ ಮೊಗ್ಗು · ಮತ್ತೆ ಸಂಜೆಯಾಗುತ್ತಿದೆ.. · ಮನಸಿನ ಹಾ(ಪಾ)ಡು · ಸಣ್ಣ ಕತೆ · ಹುಸೇನಿ_ಪದ್ಯಗಳು

ನೆನಪಿನ ಸಂಚಿ – ಹತ್ತು ಲಕ್ಷ ದಾಟಿದ ಓದುಗರು !!

nenapinasanchi 10 lacks readres
ಒಂದು ಖುಷಿಯ ವಿಚಾರ ನಿಮಗೆ ಹೇಳೋದೇ ಮರೆತು ಹೋಯ್ತು.. ಅದೇನೆಂದರೆ ನನ್ನ ಅಸಂಬದ್ಧ ಅಲಾಪಗಳ “ನೆನಪಿನ ಸಂಚಿ” ಬ್ಲಾಗ್ ಓದುಗರ ಸಂಖ್ಯೆ ಬರೋಬ್ಬರಿ 1 0 0 0 0 0 0 [ಹತ್ತು ಲಕ್ಷ] ದಾಟಿದೆ. ನನ್ನೆಲ್ಲಾ ಖುಷಿ, ಆದ್ವಾನ, ಸಂಕಟ , ತಳಮಳ, ಕ್ಷುಲ್ಲಕತನ, ಒಂಟಿತನ, ಸೋಲಿನ ಅಂಚಿನ ಗೆಲುವು, ಪ್ರೇಮ ಮುಂತಾದ ಮನುಷ್ಯ ಸಹಜ ಅವಸ್ಥೆಗಳಲ್ಲಿ ಮೂಡಿದ ಭಾವವನ್ನು ಅಕ್ಷರವಾಗಿಸಿ ಗುಡ್ಡ ಹಾಕಿರುವ ನನ್ನದೇ ಮನಸ್ಸಿನ ಪ್ರತಿಫ಼ಲನದ ಪುಟಗಳವು . ಬಹುಶಃ ನಿಮ್ಮ ಎದೆಯ ಹಾಡು ಕೂಡ ಅದೇ ಆಗಿದ್ದರಿಂದ ಏನೋ ನಾಲ್ಕೈದು ವರ್ಷಗಳ ಹಿಂದೆ ನಾನು ಆರಂಭಿಸಿದ್ದ ಬ್ಲಾಗ್ ಈ ಮಟ್ಟಕ್ಕೆ ಬೆಳೆದಿರುವುದು. ಮುಂಚೆಲ್ಲಾ ಕವಿತೆಗಳಲ್ಲಿ ಮುಳುಗಿ ಹೋಗುವ ಜಾಯಮಾನ ನನ್ನದು. ಬದುಕಿನ ಆದ್ಯತೆಗಳು ಬದಲಾದಂತೆಲ್ಲಾ ನನ್ನನ್ನು ನಾನೇ ಕಳೆದುಕೊಂಡಿದ್ದೀನಿ ಅನಿಸಿತ್ತದೆ.
ಅನಿಸಿಕೆಗಳಿಗಿಂತ ಹೆಚ್ಚಾಗಿ ಆ ದಿನ , ಆಕ್ಷಣ ಆ ಘಟನೆ, ಆ ವಸ್ತುವಿನ ಬಗ್ಗೆ ನನ್ನ ಬರಹಗಳು ಹೆಚ್ಚಾಗಿ ಮಾತನಾಡುವುದರಿಂದ ಏನೋ ಕಾವ್ಯಾತ್ಮಕ ಅಲ್ಲದ ಹಲವು ಬರಹಗಳು ನೀವಲ್ಲಿ ಕಾಣಬಹುದು. ಎಲ್ಲದಕ್ಕೂ ಅತೀತವಾಗಿ ಕಾಡುವ ಬದುಕು, ಬಾಲ್ಯ, ಆ ತೊರೆ ತೀರದ ನೆನಪುಗಳು, ಸಮುದ್ರ, ತೀರ ಹೆಚ್ಚಾಗಿ ಬಂದು ಹೋಗುತ್ತದೆ. ಒಂದಷ್ಟು ಹನಿಗಳು, ಕವಿತೆಗಳು(?), ನ್ಯಾನೋ ಕಥೆಗಳು, ಸಂಧ್ಯಾಲಾಪಗಳು… ಮತ್ತೊಂದಿಷ್ಟು ಕಾಡುವ ಬದುಕು.. ಇದು ನಿಮ್ಮದೇ “ನೆನಪಿನ ಸಂಚಿ”.
ಪ್ರೀತಿಯ ಓದುಗರಿಗೆ ಮನದಾಳದ ಅನಂತ ಧನ್ಯವಾದಗಳು

ನಿಮ್ಮವನೇ,
ಹುಸೇನಿ ~

ನಿಮ್ಮ ನಲ್ನುಡಿ

... ಮತ್ತದೇ ಖಾಲಿತನ.. · ಮತ್ತೆ ಸಂಜೆಯಾಗುತ್ತಿದೆ..

… ಮತ್ತದೇ ಖಾಲಿತನ..

evening-window

ಕಪ್ಪುಗಟ್ಟಿದ ಭಾನು,
ರೆಕ್ಕೆ ಮುರಿದುಕೊಂಡ ಕಾಗೆ,
ಕಂಡವರಿಗೆ ಕೈ ಚಾಚುವ ಹರಕಲು ಹುಡುಗಿ,
ಸಂತೆ ಮುಗಿದ ನೀರವ ರಸ್ತೆ,
ಬೊಚ್ಚು ಬಾಯಿ ಅಜ್ಜಿಯ ನಿರಿ ಚಹರೆ
ಕಿಟಕಿಯಾಚೆಗೆ ಏನೂ ಹೊಸದಿಲ್ಲ…
ಈಚೆಗೂ ಅಷ್ಟೇ…
ನಿನ್ನ ನೆನಪುಗಳು… ಮತ್ತದೇ ಖಾಲಿತನ…
ಹುಸೇನಿ ~
ಮತ್ತೆ ಸಂಜೆಯಾಗುತ್ತಿದೆ.. · ಸಂಜೆ ಕಳೆದು ಕತ್ತಲಾಗುತ್ತಿದೆ ..

ಸಂಜೆ ಕಳೆದು ಕತ್ತಲಾಗುತ್ತಿದೆ …

sanje-1
ಮತ್ತೆ ಕತ್ತಲಾಗಿದೆ..
ನೆನಹುಗಳು ಬೆತ್ತಲಾಗಬಹುದು…

ಹೌದು .. ಪಡುವಣ ಅಂಬರ ಹೊಂಬಣ್ಣವನ್ನು ಪಡೆದು ಜಗಮಗಿಸುತ್ತಿದೆ. ಇನ್ನೇನು ಕತ್ತಲಾಗುವ ಹೊತ್ತು.. ನೆರಳೂ ಜೊತೆಯಿರದ ಕತ್ತಲು!
ನಿನಗಿನ್ನೂ ನೆನಪಿರಬಹುದು.. “ನಾನಿನ್ನ ನೆರಳು ಕಣೋ.. ” ಎಂದು ಪೆಚ್ಚಾಗಿ ನೀನುಲಿದ ಆ ಸಂಧ್ಯಾ ತೀರ.. ನೇಸರ ತೋಯಿಸಿದ ಹೊಂಬಣ್ಣದ ಮರಳಿನಲ್ಲಿ ನಿನ್ನ ಹೆಸರಿನೊಂದಿಗೆ ನನ್ನ ಹೆಸರನ್ನು ತಾಳೆಹಾಕಿ ನೀನಂದು ಸಂಭ್ರಮಪಟ್ಟಿದ್ದ ನೆನಪು! ಇರಲಿ ಬಿಡು.. ಕತ್ತಲೆಂದರೆ ‘ನೆರಳು’ ಅಸ್ತಿತ್ವ ಕಳೆದುಕೊಳ್ಳುವ ಸಮಯ ತಾನೆ..

ಸೌ ದರ್ದ್ ಹೇ , ಸೌ ರಾಹತೇ
ಸಬ್ ಮಿಲಾ ದಿಲ್ ನಶೀ
ಎಕ್ ತೂಹೀ ನಹೀ… !

ಈ ದೂರದೂರಿನ ಸಂಜೆಯೂ ಕೆಲವೊಮ್ಮೆ ಮಂಕಾಗಿ ಬಿಡುತ್ತದೆ. ಊರಿನ ಹಳದಿಗೆಂಪು ಹರವಿ ಬಾನಿನೂರಿನಲ್ಲಿ ಚಿತ್ತಾರ ಹೊಯ್ಯುವ, ಬಾನತುಂಬಾ ಕತ್ತು ಹೊರಳಿಸುವ ಕೀಲುಗುದುರೆಯ ಆಕಾರಗಳ ಕೆಂಬಣ್ಣ ಮೇಘಗಳು.. ಪಟಪಟನೆ ರೆಕ್ಕೆ ಬಿಚ್ಚಿ ಚೀರಿ ಹಾರುವ ಹಕ್ಕಿಯ ಹಿಂಡು, ದಿನಚರಿಯನ್ನು ಮುಗಿಸಿ ಬರುವ ಜನರ ಜೊತೆಗೇ ಹೆಜ್ಜೆಯಿಡುವ ಹಸುಗಳ ಹಿಂಡು.. ಶಾಲೆಯ ಹಾದಿಯಲ್ಲಿ ಸಂಭ್ರಮ ಮೈಗೆತ್ತಿಕೊಂಡು ಓಡೋಡಿ ಬರುವ ಪುಟ್ಟ ಪುಟ್ಟ ಮಕ್ಕಳು,ಹೊಂಡಗಳ ನಡುವೆ ಅಲ್ಲಲ್ಲಿ ಡಾಮರಿನ ಪಳೆಯುಳಿಕೆ ಕಾಣುವ ರಸ್ತೆಯಲ್ಲಿ ಧೂಳೆಬ್ಬಿಸುತ್ತಾ ಬರುವ ಬಸ್ಸುಗಳು, ಕರ್ತನೆಡೆಗೆ ಬಾಗುವಂತೆ ಮೆದುಗಾಳಿಗೆ ತಲೆದೂಗುವ ಪೈರುಗಳು.. .. ಆಹಾ ನಮ್ಮೂರಿನ ಸೊಬಗೇ ಅಂಥದ್ದು… ಅದನ್ನು ಆಸ್ವಾದಿಸಿ ನಡೆಯುವುದೆಂದರೆ ಕೋಟಿ ಬಣ್ಣದ ಕಲ್ಪನೆಯಲ್ಲಿ ರಾಗವೊಂದನ್ನು ಕಟ್ಟಿ ಎದೆ ಬಿರಿಯುವಂತೆ ಹಾಡುವುದು!.

ಯೇ ಶೆಹರೇ ತಮನ್ನಾ ಅಮೀರೊಂಕಿ ದುನಿಯಾ
ಏ ಖುದ್ಗರ್ಝ್ಹ್ ಔರ್ ಬೆಝಮೀರೋಂಕಿ ದುನಿಯಾ
ಯಹಾನ್ ಸುಖ್ ಮುಜೆ ದೋ ಜಹಾನ್ ಕ ಮಿಲಾ ಹೈ
ಮೇರಾ ಗಾವೋ ಜಾನೆ ಕಹಾ ಖೊ ಗಯಾ ಹೈ

ಅದೆಷ್ಟು ಕಾಲವಾಯಿತು!. ಸಂಜೆಯ ಜಿಟಿಪಿಟಿ ಮಳೆಗೆ ಊರಿನ ದಾರಿಯ ಪ್ರತೀ ಕವಲಿನ ಮಣ್ಣಿನ ಗಂಧವನ್ನು ಆಘ್ರಾಣಿಸಿ, ಎದೆಬಿರಿಯುವ ರಾಗಕೆ ಹುಚ್ಚೆದ್ದು ಕುಣಿದು ಸಂಭ್ರಮಪಟ್ಟು ಅದೆಷ್ಟು ಕಾಲ ಸರಿದು ಹೋಯಿತು. ಒಂದು ಹಿಡಿ ಒಲವು, ಒಂದು ಹಿತವಾದ ಕವಿತೆ… ಬದುಕು ಇನ್ನೂ ಬೇಯಬೇಕಿದೆ, ಬಾಡಿದ ಹೂವಿನಿಂದ ಎಸಳು ಉದುರುವಂತೆ ಒಂದೊಂದೇ ಕನಸನ್ನೂ ಅವಳ ಸಿಗದ ಪ್ರೀತಿಯ ಹೆಸರಿನಲ್ಲಿ ಸಮಾಧಿ ಮಾಡುವಾಗ ನನಗೆ ನಷ್ಟವಾದದ್ದು ‘ನಾನು’ ಅಲ್ಲವೇ ?

ದಿಲ್-ಇ-ನಾದಾನ್ ತುಜೆ ಹುವಾ ಕ್ಯಾ ಹೈ?
ಆಖಿರ್ ಇಸ್ ದರ್ದ್ ಕಿ ದವಾ ಕ್ಯಾ ಹೈ ?
ಹಮ್ಕೋ ಉನ್ಸೇ ವಫಾ ಕಿ ಹೈ ಉಮೀದ್
ಜೋ ನಹೀ ಜಾನತೇ ವಫಾ ಕ್ಯಾ ಹೈ ?

ಮನಸ್ಸು ತಾಳ ತಪ್ಪಿದಾಗ ಅಪರಿಮಿತವಾಗಿ ಚಡಪಡಿಸುತ್ತದೆ. ಕೆಲವೊಮ್ಮೆ ಹೀಗೆ ಯೋಚಿಸುವುದು ಕೂಡ ತಪ್ಪೆನಿಸುತ್ತದೆ. ಭೂತದ ಗೋರಿಯನ್ನು ಬಗೆದು ಬೇತಾಳವನ್ನು ಹೊರುವುದು ನನ್ನೊಳಗಿನ ಸೂಕ್ಷ್ಮತೆಯ ಸೋಲೆನಿಸುತ್ತದೆ. ಕಳಕೊಂಡದ್ದು ಬೃಹದಾಕಾರವಾಗಿ ಕಣ್ಣೆದುರಿಗೆ ನಿಲ್ಲುವಾಗ ಪಡೆದುಕೊಂಡದ್ದು ಅಣಕವಾಡುತ್ತದೆ. ಆ ದಿನಗಳು.. ಯಾರೂ ಸಾಗದ ಹಾದಿಯಲ್ಲಿ ಪಯಣ ಆರಂಭಿಸಿ ಯಾರೂ ಮುಟ್ಟದ ಗುರಿಯೊಂದನ್ನು ನಾನು ತಲುಪಿದ್ದೆ. ಮಿಕ್ಕೆಲ್ಲರೂ ಬದುಕಿನ ಪಾಠವನ್ನು ಉರು ಹೊಡೆಯುವ ಹೊತ್ತಿಗೆ ನಾನು ನನ್ನದೇ ಆದ ಅಸ್ಮಿತೆ ಪಡೆದುಕೊಂಡಿದ್ದೆ.. ಹೀಗೆ ಬದುಕಿನೊಂದಿಗಿನ ಅವಿನಾಭಾವತೆಯನ್ನು ದಾರಿಯುದ್ದಕ್ಕೂ ಕಾಪಿಟ್ಟು ಇಂದಿನ ನಾನಾದೆ.

ನೆನಪುಗಳು ಹೀಗೆ, ಅಕ್ಷಯ ಸಂಚಿಯದು..ಕೈ ಹಾಕಿದರೆ ಮುಗಿಯದಷ್ಟು ಬಿಂಬಗಳು… ಇನ್ನೇನು ಪೂರ್ಣವಾಗಿ ಕತ್ತಲಾವರಿಸುವ ಸಮಯ .. ತೀರ ತುಂಬಾ ನಿಯಾನ್ ದೀಪಗಳು ಹೊಳೆಯಳು ಶುರುವಿಟ್ಟಿದೆ.

ಕತ್ತಲೆಂದರೆ ನಿರಾಳತೆ. ಸದ್ದೆಲ್ಲ ಅಡಗಿ, ಮೌನ ಮೊದಲಾಗಿ ಮನಸು ಖಾಲಿ ಖಾಲಿ.. ಕತ್ತಲೆಂದರೆ ಕಾಯುವಿಕೆ ಕೂಡ.. ಹೊರಬಾಗಿಲ ಹಾಕದೆ ಮಕ್ಕಳಿಗಾಗಿ ಕಾಯುವ ಅಮ್ಮಂದಿರು, .. ಮತ್ತು ಅಲೆಯ ನಿಯ್ಯತ್ತಿನೊಂದಿಗೆ ಮತ್ತೆ ಮತ್ತೆ ತೀರದಲಿ ಪ್ರೇಮಿಗಾಗಿ ಕಾಯುವ ಹುಡುಗರು, ಥೇಟ್ ನನ್ನಂತೆ!.

ಯೇ ಶಾಮ್ ಮಸ್ತಾನಿ .. ಮಧ್ಹೋಶ್ ಕಿಯ ಜಾಯೇ
ಮುಜೆ ಡೋರ್ ಕೊಯಿ ಕೀಂಚೆ ತೇರೆ ಔರ್ ಲಿಯೆ ಜಾಯೇ ..

ಹುಸೇನಿ ~

Leave a comment

ಪ್ರತೀ ಸಂಜೆ...! · ಮತ್ತೆ ಸಂಜೆಯಾಗುತ್ತಿದೆ.. · ಯಾ ರೂಹಿ .... · ರೂಹೀ

kannada Love Letter – kannada Quotes

ಪ್ರತೀ ಸಂಜೆ…!

ಹೇಯ್ ಹುಡುಗಿ.. !
ಈ ಕೊಳದ ದಂಡೆಯಲ್ಲಿ ಇಂದೂ ಕಾದು ಕುಳಿತಿದ್ದೇನೆ. ಎದೆಯ ನೋವು ನಲಿವು,ಆರ್ದ್ರತೆ, ಸಂತಸ, ಸಂಭ್ರಮವನ್ನೆಲ್ಲ ನಿನ್ನಲ್ಲಿ ಹರವಿ ಈ ಕ್ಷಣ ‘ಜೀವಿಸಲು’ಕಾಯುವ ಘಳಿಗೆ ಇದು.ಕೈಯೊಳಗೆ ಕೈ ಪೋಣಿಸಿ ಬೆರಳುಗಳ ಮಧ್ಯದ ಖಾಲಿತನವನ್ನೂ ತುಂಬುವ ಆ ಹೊತ್ತನ್ನು ನೆನೆಯುವಾಗೆಲ್ಲ ನನ್ನೆದೆಯ ನಗಾರಿಯ ಜೀವ ಹುಚ್ಚೆದ್ದು ಕುಣಿ ಕುಣಿದು ಖುಶಿ ಪಡುತ್ತಿದೆ. ಆ ಕ್ಷಣ….ಆ ಕ್ಷಣಗಳಷ್ಟೇ ನಾನು ಜೀವಿಸುತ್ತೇನೆ. ಈ ಅಲ್ಪನ ಮನಸಿನ ಒಳ ಪದರದ ಅಂಚಂಚಲ್ಲು ಅಳಿಸಲಾಗದ ಭಾವದುಂಧುಬಿ ತುಂಬುವ ಅಮೂರ್ತ ಕ್ಷಣವದು. ಕಣ್ಣಂಚಿನ ಆ ನೋಟದ ಒಂದು ಕ್ಷಣಕ್ಕಾಗಿ ನನ್ನ ಕಣ್ಣ ಕೂಪದಲಿ ಕನಸುಗಳ ಬಣ್ಣ ತುಂಬಿ ಕನಸ ನೋಟದ ಅನುಭಾವಕೆ ಕನಲಿ ನಾ ಕಾತರಿಸಿಹೆನು. ಅಲ್ಲೇ ಆ ನಿನ್ನ ಕಣ್ಣ ಕೊಳದಲ್ಲಿ ಇಳಿದು ಬಿಡುವಾಸೆ. ಮತ್ತೊಮ್ಮೆಯೂ ಮೆಲೇರಲಾಗದಂತೆ.. ನಿನ್ನ ಆರ್ದ್ರ ನೋಟದಂಚಲಿ ಮೂಡುವ ಮಂದಸ್ಮಿಥ ನನ್ನೊಳಗೆ ತುಂಬುವ ಸ್ಥಾಯೀ ಭಾವ ನನ್ನ ಜೀವಧಾತು.. ಆ ಒಂದು ಕಿರು ನಗೆ ನನ್ನೊಳಗೆ ಮುತ್ತಾಗಿ ಹೊಳೆಯುವಾಗೆಲ್ಲ ನನ್ನನ್ನೇ ನಾನು ಕಂಡುಕೊಳ್ಳುತ್ತೇನೆ… ಹೀಗೆ ನಿನ್ನ ಕಾಯುತ್ತಾ ಕಾಯುತ್ತಾ ವಿಷಣ್ಣ ಭಾವದ ಶೃಂಗದಲ್ಲಿ ಕುಳಿತು ನನ್ನೊಂದಿಗೆ ನನ್ನ ಸ್ವಗತ ಸಾಗುತ್ತದೆ… ಪ್ರತೀ ಸಂಜೆ…!

~ಹುಸೇನಿ

ಮತ್ತೆ ನೀನಿಲ್ಲದ ಸಂಜೆ.. · ಮತ್ತೆ ಸಂಜೆಯಾಗುತ್ತಿದೆ.. · ಸಣ್ಣ ಕತೆ

ಮತ್ತೆ ನೀನಿಲ್ಲದ ಸಂಜೆ..

matte sanje

ಈ ಸಂಜೆ ಬಂತೆಂದರೆ ಸಾಕು… ರಾತ್ರಿ ಕನವರಿಸಿದ ನಿನ್ನ ಸಕ್ಕರೆ ನೆನಪುಗಳು ಗರಿಗೆದರಿ ಮತ್ತೆ ಕುಣಿಯಲು ಶುರುಮಾಡುತ್ತವೆ. ನಿನ್ನ ಬಂಗಾರದ ಬೆರಳ ಕಚಗುಳಿಯಿಟ್ಟಂತಾಗಿ ಮೈತುಂಬಾ ಒಂದು ತೆರನಾದ ಜೀವಂತಿಕೆಯ ಹೂವು ಅರಳುತ್ತವೆ. ಬಿರಿದ ಆ ಹೂವಿಗೂ ನಿನ್ನದೇ ಘಮಲಿರುತ್ತದೆ. ಮೊದಲು ನಿನ್ನ ನಿಶ್ವಾಸವನ್ನು ಬೊಗಸೆ ತುಂಬಿ ನನ್ನ ಕಣ್ಣಿಗಿಡುತ್ತೇನೆ. ನಂತರ ಒಂದಿಚೂ ಅಂತರವಿಲ್ಲದಂತೆ ಬರಸೆಳೆದು ಮುಖಕ್ಕೆ ಮುಖವಿಟ್ಟು ನಿನ್ನ ನಿಶ್ವಾಸವನ್ನು ಉಚ್ವಾಸವಾಗಿ ನನ್ನೊಳಗೆ ತುಂಬಿಕೊಳ್ಳುತ್ತೇನೆ. ಆ ಕ್ಷಣ ಆಹ್ಲಾದತೆಯ ಉನ್ಮಾದ ಅಲೆಯಲ್ಲಿ ತೇಲುತ್ತೇನೆ, ನಿನ್ನೆದೆಯೊಳಗಿನ ಬಿಸಿಯುಸಿರ ಕುಡಿದ ನನ್ನಲ್ಲಿ, ನಿನ್ನದೇ ಎದೆ ಬಡಿತದ ನಿನಾದ… ನಿನ್ನಸ್ಮಿಥೆಯನ್ನು ಮೊಗೆದು ಕುಡಿದು ನಿನ್ನ ಧರಿಸಿದ ನಾನು ನನಗೇ ಅಪರಿಚಿತನಾಗುತ್ತೇನೆ.. ನನ್ನೊಳಗಿನ ಸೀಮೆ ವಿಸ್ತ್ರುತಗೊಂಡು, ದೃಷ್ಟಿ, ದಿಕ್ಕು ಹೊಸ ವ್ಯಾಪ್ತಿಯನ್ನು ಪಡೆದುಕೊಳ್ಳುತ್ತವೆ. ಆ ಅರಳಿದ ಹೂವನ್ನು ಪ್ರೀತಿಯಿಂದ ಎದೆಗೊತ್ತಿ, ನಿನ್ನೆದೆಯ ಬಡಿತದ ಸ್ವಾದದಿಂದ ಸುಸ್ಪುಷ್ಟಗೊಳಿಸಿ ಬದುಕಿಗೆ ಹೊಸ ಅರ್ಥ, ಸೌಂದರ್ಯ ಮತ್ತು ಬೆಳಕನ್ನು ಕೊಡುತ್ತೇನೆ.. ನನ್ನೊಳಗೆ ಪ್ರತಿಷ್ಟಾಪಿಸಿದ ನಿನ್ನತ್ಮದ ಪ್ರಭೆಯೊಂದಿಗೆ, ನಿನ್ನ ಆ ಮಲ್ಲಿಗೆ ಕಂಪಿನೊಂದಿಗೆ ಜೀವ-ಜೀವ ಸೇರಿ ಬೆಸೆಯುವ ಆ ಅಮೂರ್ತ ಬಂಧನದ ತೆಕ್ಕೆಯಲ್ಲಿ ನಾನು ಮತ್ತಷ್ಟು ಜೀವಿಸುತ್ತೇನೆ…

~ಹುಸೇನಿ

ಮತ್ತೆ ಸಂಜೆಯಾಗುತ್ತಿದೆ..

ಮತ್ತೆ ಸಂಜೆಯಾಗುತ್ತಿದೆ..

moon-sunset
… ಮತ್ತೆ ಸಂಜೆಯಾಗುತ್ತಿದೆ… ಪಡುವಣದ ಮೂಲೆಯಲ್ಲಿ ಸಂಧ್ಯಾ ಸೂರ್ಯನ ಸಾವಿನ ಬಣ್ಣದ ಪಡಿಯಚ್ಚು ಈ ಕೊಳದ ಮೇಲೆ ಇಂದೂ ಮೂಡಿದೆ. ಮುಂಜಾವಿಗೆ ಇದೇ ರವಿಯ ಹೊಂಗಿರಣದ ಸ್ಪರ್ಶದಿ ನವಿರಾಗಿ ಅರಳಿದ್ದ ನೈದಿಲೆ ಈಗ ಅವನ ಒಂಟಿ ವಿರಹದ ಸಾವಿಗೆ ಶೋಕಗೀತೆ ಹಾಡುತ್ತಿದೆ. ಪಾರಿವಾಳದ ಹಿಂಡು ಗೂಡಿಗೆ ಮರಳುತ್ತಿದೆ. ನಾನು ಮನದ ವಿಸ್ಮಯಲೋಕವನ್ನು ಆಗಷ್ಟೇ ತೆರೆದು ನಿನ್ನಯ ನೆನಪಿನರಮನೆಗೆ ಮೆಲ್ಲ ಮೆಲ್ಲನೆ ಹೆಜ್ಜೆಯಿಡುತ್ತಿದ್ದೇನೆ. ನಿನ್ನ ನೆನಹುಗಳು ನನ್ನೊಳಗೆ ವರ್ಣ ಕಾರಂಜಿಯ ಚಿತ್ರೋಧ್ಯಾನ ಧೇನಿಸಿ ಕಾಮನ ಬಿಲ್ಲಿನ ಅಚ್ಚುಗಳ ಹುಚ್ಚೆಬ್ಬಿಸುವ ಸಂಭ್ರಮದಲ್ಲಿದೆ. ಅದು ನನ್ನ ಕಣ ಕಣದಲಿ ಮೆಲುವಾಗಿ ಪಸರಿಸುತ, ವಿಹರಿಸುತಾ ವಿಹಂಗಮವಾಗಿ ನನ್ನನ್ನು ಆವರಿಸಿಕೊಳ್ಳುತ್ತದೆ. ನನ್ನೊಳಗಿನ ಕನವರಿಕೆಗಳಿಗೆ ರೆಕ್ಕೆ ಪುಕ್ಕ ಮೂಡಿ ಗಗನವೇರಿ ತೇಲುತ್ತವೆ. ಕೇವಲ ಕಲ್ಪನೆಯಲ್ಲಿಯೇ ಬದುಕು ಕ್ಷಿಪಣಿಯ ವೇಗ ಪಡೆದು ಹಾರುವಾಗ ನನ್ನೆಲ್ಲ ನೋವು ಹತಾಶೆಗಳು ಕಕ್ಕಾಬಿಕ್ಕಿಯಾಗಿ ಹತಗೊಂದು ಹರಡಿ ಬೀಳುತ್ತವೆ. ಆ ಕ್ಷಣ ನಾನು ಸ್ಥಬ್ದ.. !. ಕ್ಷಣ ಮಾತ್ರದಲ್ಲಿ ವಿಷಣ್ಣ ನಗುವೊಂದನ್ನು ತುಟಿಗೆ ಎಳೆದು ತರುತ್ತೇನೆ. ಅದು ನನ್ನ ಅಸ್ತಿತ್ವಕ್ಕೆ ಸವಾಲೊಡ್ಡುವ ಮುಂಚೆಯೇ ವಿರುದ್ದ ದಿಕ್ಕಿನಲ್ಲಿ ಮೆಲ್ಲನೆ ಕವಲೊಡೆದು ಮೂಡುವ ಚಂದ್ರಮನ ಬೆಳಕಿನ ಮೊದಲ ಕಣದ ಆಹ್ಲಾದಕರ ಸೊಂಪನ್ನು ಕಣ್ತುಂಬ ತುಂಬಿಕೊಂಡು ಜಾರಿಬಿದ್ದ ಕಣ್ಣೀರ ಹನಿಗೆ ಅದೇ ಚಂದ್ರಮನನ್ನು ಹಕ್ಕುದಾರನನ್ನಾಗಿ ಮಾಡಿ ಅವನ ಮೇಲೆ ಕಲ್ಲೆಸೆಯುವ ಪ್ರಯೋಗಕ್ಕೆ ಮುಂದಾಗುತ್ತೇನೆ….

~ಹುಸೇನಿ

Leave a comment