ಭವಿತವ್ಯದ ಕವಲಿನಲಿ
ತುಂಬು ತಮವಿದೆ
ಬೆಳಕಾಗಿ ಬರಿ ನಿನ್ನನ್ನಷ್ಟೇ
ತುಂಬಿಕೊಂಡಿದ್ದೇನೆ ಗೆಳೆಯಾ…
ನೀನೊಂದು ಕಂದೀಲು
ಆವರಿಸಿದಂತೆಲ್ಲಾ ನನ್ನನ್ನು ನಾನೆ
ಕಾಣುತ್ತಿದ್ದೇನೆ…
#ಆತ್ಮೀಯ_ಗೆಳೆಯನಿಗೆ
ತೊರೆಯ ತೀರದ ಹುಡುಗನ ಜಾಡು …
ಭವಿತವ್ಯದ ಕವಲಿನಲಿ
ತುಂಬು ತಮವಿದೆ
ಬೆಳಕಾಗಿ ಬರಿ ನಿನ್ನನ್ನಷ್ಟೇ
ತುಂಬಿಕೊಂಡಿದ್ದೇನೆ ಗೆಳೆಯಾ…
ನೀನೊಂದು ಕಂದೀಲು
ಆವರಿಸಿದಂತೆಲ್ಲಾ ನನ್ನನ್ನು ನಾನೆ
ಕಾಣುತ್ತಿದ್ದೇನೆ…
#ಆತ್ಮೀಯ_ಗೆಳೆಯನಿಗೆ
1)
ಕಿವಿಗೊಟ್ಟೆಯಾ…?
ಆ ಕಾನನದಿ ಮುದಿ ಮರದ ಕೊನೆಯ ತರಗೆಲೆ ಉದುರಿದ ಶಬ್ದ..
ಕಿವಿಗೊಟ್ಟೆಯಾ…?
ನನ್ನ ಎದೆ ಬಿರಿದ ಶಬ್ದ..
2)
ಅಬ್ಬಾ !
ಇನ್ನೆಷ್ಟು ಮಾತನಾಡಲಿ,
ಒಳಗುದಿ ನೀ ತಿಳಿಯಲೇ
ಇಲ್ಲ,
ಇನ್ನು ‘ಮೌನ’
ಪರ್ವ..
3)
ಬಾಲ್ಯದಲ್ಲಿ
ಮತ್ತೆ ಮತ್ತೆ ನನ್ನ ಎಡವಿ
ಬೀಳಿಸುತ್ತಿದ್ದ ಕಾಲು ದಾರಿ
ಕಲಿಸಿಕೊಟ್ಟದ್ದು
ಬಿದ್ದರೆ ಎದ್ದೇಳುವ ಛಲದ ಪಾಠ..
4)
ಇದು ನೀರಿಂಗದ ಒಣ
ಮರುಭೂಮಿ, ಸುಮ್ಮನೆ
ಹನಿಯದಿರು ಮಳೆಯೇ
ಪಾಚಿಗಟ್ಟಿ ಕೊಳೆತು ನಾರಬಹುದು!
5)
ಮುಗ್ಧವಾಗಿ ತಬ್ಬದಿರು
ಹೂವೇ
ನಾನು ಮುಳ್ಳು ಬೇಲಿ..
ಹುಸೇನಿ ~
ನಿಯ್ಯತ್ತು ಸುತ್ತಿಕೊಂಡಿದೆ,
ಉಸಿರಿಗೊಂದಿಷ್ಟು
ಗಾಳಿ
ಕೊಡಿ
~
ನಿಯ್ಯತ್ತು ಅಂದರೆ
ಪಾದ ಮತ್ತು
ಚಪ್ಪಲಿ;
ಅಷ್ಟೂ ಸನಿಹವಿರುವ
ಸಾವು..
~
ನಿಯ್ಯತ್ತು ಎಂದರೆ
ನಡೆದ ಕಾಲುದಾರಿ
ನಡುವೆ
ತೊಟ್ಟಿಕ್ಕಿದ
ನೆತ್ತರು,
ಮತ್ತದರ
ಕಮಟು ..
~
ಮತ್ತೆ
ನಿಯತ್ತಿಗೇ
ಸುತ್ತಿಕೊಳ್ಳುತ್ತೇನೆ,
ಪರಿಧಿಯಾಚೆಗಿನ ಅವಕಾಶ ತುಂಬಾ
ಜೇಡರ ಬಲೆ
ನಡುವೆ ಸಿಕ್ಕಿ ಹಾಕಿಕೊಂಡ
ಚಿಟ್ಟೆ !
ಹುಸೇನಿ ~
~
ನಾನು ಜನರಿಗೆ ಮೋಸ ಮಾಡೋದಿಲ್ಲ
ಅಂತ ಹೇಳಿದ್ದ ದಿನ
ಅಪರಾತ್ರಿ ಎದ್ದು ಬಿಕ್ಕಿ ಬಿಕ್ಕಿ
ಅತ್ತಿದ್ದೆ ದೊರೆಯೇ…
ಈ ಕಾಲವೆಲ್ಲ ನಿನಗೆ
ವಂಚಿಸಿದುದನ್ನು ನೆನೆನೆನೆದು…
ಹುಸೇನಿ ~
ಎಲ್ಲರನ್ನೂ
ಅವರಿರುವಂತೆಯೇ ಒಪ್ಪಿಕೊಳ್ಳುವ
ಧಾರಾಳತನ ಪಡೆದ ದಿನ
ನನ್ನ ಭಾರತಕ್ಕೆ ಅಚ್ಛೇ ದಿನ!
ಹುಸೇನಿ ~
ಕೂಡಿಕೊಂಡ ಬಳಿಕ
ಕಳಚಿಕೊಳ್ಳಲೇಬೇಕಾದ
ನಿಯ್ಯತ್ತಿನ ಕವಲುಗಳ
ಹಾದಿಯಲಿ
ದಾರಿಯ ಬದಲು ಪಯಣವನ್ನು
ನೆಚ್ಚಿಕೊಂಡ
ಮುಸಾಫಿರ ನಾನು…
ಹುಸೇನಿ ~
ಗಾಳಿ, ನೀರು, ಬೆಳಕು
ಉಚಿತವಾಗಿರುವ ಜಗತ್ತಿನಲ್ಲಿ
ಬದುಕುವುದನ್ನು ದುಸ್ತರ ಮಾಡಿಕೊಂಡ
ಮನುಷ್ಯ
ಇನ್ನೊಬ್ಬರಿಗೆ ಬದುಕುವ
ಪಾಠವನ್ನೂ ಹೇಳಿಕೊಡುತ್ತಾನೆ..
ಹುಸೇನಿ ~
ಮುಂಜಾವಿಗೆ ಒಮ್ಮೆ ಎದ್ದು ಆಮೇಲೆ ಮಲಗಿದರೆ ಮತ್ತೆ ಎದ್ದೇಳಲು ಅಮ್ಮ ಬಂದು ಫ್ಯಾನ್ ಆಫ್ ಮಾಡಿ ಒಂದು ಒದಿಬೇಕು ಇಲ್ಲಾ ರಗ್ಗನ್ನೆತ್ತಿ ಬಿಸಾಡಬೇಕು.. ದಿನವೆಲ್ಲಾ ಅಮ್ಮನ ಹಿಂದೆ ಮುಂದೆ ಅಲೆಮಾರಿಯಾಗುವುದು, ಮನಸ್ಸಾದರೆ ತೋಟಕ್ಕೆ ಹೋಗಿ ಅಡಿಕೆ ಹೆಕ್ಕುವುದು.. ಮನೆಯಿಂದ ಹೊರಬಿದ್ದರೆ ನನ್ನ ಹೆಜ್ಜೆಯನ್ನು ಇನ್ನೂ ಜೀವಂತವಾಗಿರಿಸಿದ ಕಾಲುದಾರಿಗಳು, ಆ ತೊರೆ, ಮನೆಯ ಹಿಂದಿನ ಗುಡ್ಡದಲ್ಲೆಲಲ್ಲಾ ಅಲೆದಾಟ, ಸಂಜೆ ಆಟ, ಊರಿನ ಪ್ರತೀ ಕಾರ್ಯಕ್ರಮದಲ್ಲಿ ಸಜೀವ ಸಾನಿಧ್ಯ!, ಎರಡನೇ ಮಹಡಿಯ ಒಂದು ಮೂಲೆಯಲ್ಲಷ್ಟೇ ಸಿಗುವ ಏರ್ಟೆಲ್ ನೆಟ್ವರ್ಕ್ ನಿಂದಾಗಿ ನಿಮ್ಮ ‘ಅಂತರ’ಜಾಲ ಪ್ರಪಂಚದಿಂದ ಸ್ವಲ್ಪ ದೂರ ದೂರ.. ಜೊತೆಗೆ ಒಂದಿಷ್ಟು ಹೆಗಲೇರಿಸಿಕೊಂಡ ಜವಾಬ್ದಾರಿಗಳು.. ಇದು ಸದ್ಯದ ನನ್ನ ದಿನಚರಿ … ಬದುಕು ಮತ್ತೆ ಹರಳುಗಟ್ಟಲು ಇನ್ನೇನು ಬೇಕು ಹೇಳಿ ?
ಅದರಲ್ಲೂ ನಿನ್ನೆಯ ದಿನ ನನ್ನ ಪಾಲಿಗೆ ಅತೀವ ಖುಷಿ ಕೊಟ್ಟಿತು. 7ನೇ ತರಗತಿವರೆಗೆ ಊರ ಗುಡ್ಡದ ಸರಕಾರೀ ಶಾಲೆಯಲ್ಲಿ ಅವಿನಾಭಾವವಾಗಿ ಬೆಸೆದುಕೊಂಡ 8 ಮಂದಿ ಗೆಳೆಯರಲ್ಲಿ ಒಬ್ಬನ ಮದುವೆಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದೆ. 6 ಮಂದಿಗೆ ಈಗಾಗಲೇ ಮದುವೆಯಾಗಿದ್ದಾರೂ ಕೇವಲ ಒಬ್ಬನ ಮದುವೆಗಷ್ಟೇ ಹೋಗಲು ಸಾಧ್ಯವಾಗಿತ್ತು. ಸೇರಿದ್ದ ಮಿಕ್ಕ ಗೆಳೆಯರೊಡನೆ ‘ಪುರಾತನ’ ಕಾಲದ ಮೆಲುಕುಗಳು ಮತ್ತಷ್ಟು ಮಗುತನವನ್ನು ನನ್ನೊಳಗೆ ತುಂಬಿ ಅನಿರ್ವಚನೀಯ ಖುಷಿಯನ್ನು ಮೊಗೆದು ಕೊಟ್ಟಿತು..
ದೂರದೂರಿನ ಸಾಫ್ಟ್ವೇರ್ ಬದುಕು ಮತ್ತೆ ಕರೆಯುವವರೆಗೆ ಅಮ್ಮನ ಮಡಿಲ ಮಗುವಾಗಬೇಕು… ಅಲ್ಲಿವರೆಗೆ ನಿಮ್ಮ ‘ಅಂತರ’ ‘ಜಾಲ’ದಿಂದ ಸ್ವಲ್ಪ ದೂರವೇ ..
ಹುಸೇನಿ ~
ಜೀವ ಭಾವಗಳ ಸಮ್ಮಿಲನ
ತೊರೆಯ ತೀರದ ಹುಡುಗನ ಜಾಡು …
The world of words
ನನ್ನ ಜೀವದ ಗೆಳೆಯ
ಮನದಿಂಗಿತಗಳ ಅವಿರತ ಸ್ವಗತ, ಆಗುವುದೆಂತೊ ನಿರಂತರ ಅಗಣಿತ ? ಲೀಲೆಯವನ ಕೈಗೊಂಬೆ ಆದರೂ ವಿಸ್ಮಯವಿದ ನಂಬೇ !
ಭಾವನೆಗಳ ವೀಣೆ ಮಿಡಿದಾಗ . . ಪದವಾಯ್ತು ಬರೆಯವ ಕನಸು. . .
ಮನವೆಂಬ ಸಾಗರದಲ್ಲಿ ಭಾವನೆಗಳ ಅಲೆಗಳು.....
ಮೌನಾಂ'ತರಂಗ'.... ಮೀಟಿದ ಭಾವ'ತರಂಗ'
ಕನ್ನಡದ ತಾಣ ಕನ್ನಡವೇ ಪ್ರಾಣ
ಎಂಟು ಜ್ಞಾನಪೀಠಗಳ ಹೆಮ್ಮೆ ನಮ್ಮ ಕನ್ನಡ ಸಾಹಿತ್ಯ ಲೋಕ..
Recipes... Articles... Crafts...
ಭಾವನೆಗಳು ಅಕ್ಷರವಾದಾಗ
journey down memory lane..
ಬದುಕಿನ ನೋಟ. ಬದುಕಿನೊಂದಿಗಿನ ಓಟ
ನೆನಪು ಭಾವನೆಗಳೊಂದಿಗೆ ಸಂಘಷ೯ ಬರೆಯುತಿರುವೆ ಚಿತ್ತಾಕಷ೯ಕವಾಗಿ, ಇದು ನಿರಂತರ.........
ನನ್ನ ಭಾವನೆಗಳ ಲಹರಿ
Just another WordPress.com site
ಶೂನ್ಯದಿಂದ-ಶೂನ್ಯದೆಡೆಗೆ
ಎಳೆ ಮನಸಿನ ಭಾವ ತೇರು..
ಸು೦ದರ ಸಾಹಿತ್ಯ ಲೋಖ.!
ನನ್ನ ಮನದ ಮಾತುಗಳು
ಮನದಾಳದ ಮಾತುಗಳು ...
ಮಾತಿಗೆ ಸಿಗದ ಶಬ್ಧಗಳು ಮಳೆಹನಿಗಳಾದಾಗ...
as it is..!
Welcome to musafir
ಭಾವ ಲೋಕದ ರಾಯಭಾರಿ. . . .
ಬರುಡಾಗಿರುವೀ ಹಸಿರಿನ ಚಿಗುರಿಗೆ!
This WordPress.com site is the cat’s pajamas
Just another WordPress.com weblog
ಜಬ್ಬಾರ್ ಪೊನ್ನೋಡಿ ಗೀಚಿದ್ದು ಅಂತರ್ಜಾಲದಲ್ಲೀಗ...
ಅಲೆಮಾರಿಯ ರೆಕ್ಕೆ ಬೀಸು....
ನೋಡಿದ, ಕೇಳಿದ, ಅನುಭವಿಸಿದ, ಆಲೋಚಿಸಿದ, ಅವಲೋಕಿಸಿದ ವಿಷಯವನ್ನು ಕಾವ್ಯ ರೂಪಕ್ಕೆ ತರುವ ನನ್ನ ಪ್ರಯತ್ನ ...
ಮನದ ಮಾತು ಹೇಳೋಕಲ್ಲ ಬರೆಯೋಕ್ ಮಾತ್ರ...
ಜಾಲ ಚರಿ
ನನ್ನ ಸವಿನೆನಪುಗಳ,ಹೊಸಕನಸುಗಳ,ಅನುಭವಗಳ ಅಬುಧಿ