ತೊರೆಯ ತೀರದ ನೆನಪುಗಳು

ವೊಹ್ ಕಾಗಝ್ ಕಿ ಕಷ್ತಿ ವೊಹ್ ಬಾರಿಶ್ ಕಾ ಪಾನೀ..

kagaj-1

ಕೆಲವೊಮ್ಮೆ ಎಲ್ಲದಕ್ಕೂ ಅತೀತವಾಗಿ ಬದುಕು ಕಾಡುತ್ತದೆ. ಅಪರಾತ್ರಿಗಳಲ್ಲಿ ಎದ್ದು ಕೂರುತ್ತೇನೆ, ಸಾಂತ್ವನಕ್ಕೆ ಮತ್ತದೇ ಹೆಂಚಿನ ಮನೆ, ಅಡಿಕೆ ತೋಟ, ಅದರಾಚೆಗಿನ ತೋಡು, ತೋಡು ಬದಿಯ ಪೇರಳೆ ಮರಗಳು, ಮಾವಿನ ಮರ, ಹಲಸಿನ ಮರ , ಕೊಕ್ಕೋ ಮರ, ಸೀತಾಫಲ, ನೇರಳೆ… ಪಕ್ಕದಲ್ಲೇ ಇರುವ ಆಟದ ಬಯಲು, ಅಡಿಕೆ ಗರಿಯ ಬ್ಯಾಟು, ರಬ್ಬರ್ ಚೆಂಡು, ಕೊಡ ತುಂಬಾ ನೀರು, ಆ ಉರಿ ಬಿಸಿಲು… ಆ ಹರಿದ ಬ್ಯಾಗು, ಬಟನ್ ಇರದ ಬಿಳಿ ಅಂಗಿ, ಕಲರ್ ಮಾಸಿ ಹೋದ ನೀಲಿ ಚಡ್ಡಿ, ಕಂಠಪಾಠದ ಮಗ್ಗಿ… ಇವೆಲ್ಲ ಬೇಕೆನಿಸುತ್ತದೆ. ದೊಡ್ದವನಾದಂತೆ ಬಾಲ್ಯಕ್ಕೆ ಮರಳುವ ಅಧಮ್ಯ ತುಡಿತ, ಇಷ್ಟು ವರ್ಷದ ಒಡನಾಟದ ನಂತರವೂ ಈ ಮೆಟ್ರೋ ಸಿಟಿಯು ನನಗೆ ಆಪ್ತವಾಗಲಿಲ್ಲ. ಇಲ್ಲಿರುವುದೆಲ್ಲವೂ ನನ್ನದಲ್ಲ ಎಂಬ ಕೊರಗು, ಅಥವಾ ಈ ಅತಿವೇಗಕ್ಕೆ ಒಗ್ಗಿಕೊಂಡ ಬದುಕಿನೊಂದಿಗಿರುವ ಅಸಮಾಧಾನ. ಇಲ್ಲಿಗೆ ಸಲ್ಲುವುದೇ ಇಲ್ಲ ನಾನು. ಒಂಟಿಯಾದಂತೆಲ್ಲ ಮತ್ತಷ್ಟು ಆಳದ ಪಾತಾಳಕ್ಕೆ ಇಳಿಯುತ್ತೇನೆ. ಅಲ್ಲಿ ಮೌನದ ಕಿವಿಗುಚ್ಚುವ ಕರಾಡತನ ಮತ್ತಷ್ಟು ಅಸಹನೀಯವೆನಿಸುತ್ತದೆ. ವ್ಯಾಕುಲಚಿತ್ತ ಮನಸ್ಸು ಮತ್ತೆ ಹಂಬಲಿಸುವುದೊಂದೇ .. ವೊಹ್ ಕಾಗಝ್ ಕಿ ಕಷ್ತಿ.. ವೊಹ್ ಬಾರೀಶ್ ಕ ಪಾನಿ.

kagaj-2



ಖುಷಿ ತಾನಾಗಿ ಒಲಿಯುವ ಬಾಲ್ಯಕ್ಕೂ, ಖುಷಿಯನ್ನು ಹುಡುಕಿ ಹೋಗಬೇಕಾದ ಅನಿವಾರ್ಯತೆಯ ಈ ಕಾಲಕ್ಕೂ ತುಂಬಾ ವ್ಯತ್ಯಾಸವಿದೆ. ಬಾಲ್ಯವೆಂದರೆ ಬದುಕು ಹರಳುಗಟ್ಟುವ ಕಾಲ. ಅಲ್ಲಿನ ಆಟ, ಪಾಠ, ಮುಗ್ದತೆ, ಕುತೂಹಲ, ಭಯ, ತುಂಟಾಟ, ಮೋಜು, ಮಸ್ತಿಗಳೆಲ್ಲಾ ಖುಷಿಯನ್ನು ಮೊಗೆಮೊಗೆದು ಕೊಡುತ್ತವೆ. ಅಲ್ಲಿ ಖುಶಿಯಾಗಲು ನಿರ್ದಿಷ್ಟ ಕಾರಣ ಬೇಕಿಲ್ಲ. ಬೇಲಿ ಹಾರಿ ಗೇರು ಬೀಜ ಕದಿಯುವಾಗ ತೋಟದಾಳು ಬಂದು ಓಡಿಸಿದರೂ ಖುಷಿ, ನೆಲ್ಲಿಕಾಯಿ ಹುಡುಕಿ ಕಾಡೇರಿದಾಗ ಜಾರಿ ಬಿದ್ದು ಕಾಲಿಗೆ ಪೆಟ್ಟಾದರೂ ಖುಷಿ, ತಮ್ಮನಿಗೆ ಕೀಟಲೆ ಮಾಡಿ ಅಮ್ಮನಿಂದ ಬೆನ್ನಿಗೆರೆಡು ಸಿಕ್ಕರೂ ಖುಷಿ, ಊಟ ಮಾಡದ ಹಠದಲ್ಲಿ ಬರಸೆಳೆದು ಮುತ್ತುಗೆರೆದು ಅಮ್ಮನ ಕೈತುತ್ತಿನಲ್ಲಿ ಎಂಥಾ ಖುಷಿ, ಮನೆಲೆಕ್ಕ ಮಾಡದೆ ಟೀಚರ್ ಬೆತ್ತ ತೆಗ್ಯೋ ಮುನ್ನವೇ ಕೈ ಚಾಚುವಾಗ್ಲೂ ಖುಷಿ, ಸಂಜೆ ತೋಡಲ್ಲಿ ಹುಟ್ಟುಡುಗೆಯಲ್ಲಿ ಈಜಾಡುವಾಗಲೂ ಖುಷಿ, ಅಲ್ಲಿ ಪ್ರತೀ ಒಂದು ಕ್ಷಣವು ಖುಷಿಯ ವಾಗ್ದಾನದೊಂದಿಗೆ ಬರುತ್ತದೆ. ಆ ಖುಶಿಗಳನ್ನೆಲ್ಲ ಇಲ್ಲಿ ಎಲ್ಲಿ ಹುಡುಕಲಿ?. ಹಬ್ಬದ ಹೊಸ ಉಡುಗೆಯನ್ನು ಮತ್ತೆ ಮತ್ತೆ ನೋಡಿ, ಮೂಸಿ, ಮೈ ಮೇಲೆ ಇಟ್ಟು ಕನ್ನಡಿ ನೋಡುವಾಗಿನ ಖುಷಿ ತಿಂಗಳಿಗೊಂದು ಖರೀದಿಸುವ ಬ್ರಾಂಡೆಡ್ ಡ್ರೆಸ್-ಗಳಲ್ಲಿ ಹೇಗೆ ಹುಡುಕಲಿ?, ಸ್ಕೂಲಿನ ಖಾಲಿ ಬೆಂಚಿನ ತುದಿಯಲ್ಲಿ ಕೂತು ಬೆಂಚನ್ನು ಮೇಲೆಕ್ಕೆತ್ತುವ ಖುಷಿ ಸಾಫ್ಟ್ವೇರ್ ಕಂಪೆನಿಗಳ ಅರಾಮಿ ಚೆಯರ್ಗಳಲ್ಲಿ ಹೇಗೆ ಹುಡುಕಲಿ?, ಗೇರು ಬೀಜದ ಮರ, ಮಾವಿನ ಮರಗಳಿಗೆ ಚಕಚಕನೆ ಹತ್ತಿ ಹಣ್ಣು ಕೊಯ್ಯುವ ಖುಷಿಯನ್ನು, ಹಿತ್ತಿಲಿನ ಮರಕ್ಕೆ ಹತ್ತಿ ಮಂಗನಾಟವಾಡಿದ ಖುಷಿಯನ್ನು, ಕರೆಂಟಿರದ ನಮ್ಮೂರ ಸರ್ಕಾರಿ ಶಾಲೆಯ ಮರದ ಕೆಳಗಿನ ಕನ್ನಡ ಪಾಠದ ಖುಷಿಯನ್ನು ಈ ಕಾಂಕ್ರೀಟ್ ಕಾಡಲ್ಲಿ ಎಲ್ಲಿ ಹುಡುಕಲಿ?, ಕ್ರಿಕೆಟ್ ಆಟದಲ್ಲಿ, ಬೆಟ್ಟ ಹತ್ತುವಾಗ, ಮಳೆನೀರಿನ ಪಾಚಿಗೆ ಜಾರಿ ಬಿದ್ದು ಏಟು ಮಾಡಿಕೊಳ್ಳುವ ಖುಶಿಯನ್ನು ಈ ಫುಟ್ಬಾತ್ ಮತ್ತು ಆಫೀಸ್ ಕಾರಿಡಾರ್ಸಲ್ಲಿ ಹೇಗೆ ಹುಡುಕಲಿ?, ಹೊಸ ಆಟಿಕೆಯ ಆಟದ ಮಧ್ಯೆ ಅದರೊಳಗೇನಿದೆ ಎಂಬ ಕುತೂಹಲಕ್ಕೆ ಜೋತು ಬಿದ್ದು ಬಿಚ್ಚಿಡುವ, ಮತ್ತೆ ಪೋಣಿಸಲಾಗದ ಖುಶಿಯನ್ನು ಈ ಲ್ಯಾಪ್ಟಾಪ್, ಡೆಸ್ಕ್ಟಾಪ್ ಮತ್ತು ಮ್ಯಾಕ್ ಗಳಲ್ಲಿ ಹೇಗೆ ಹುಡುಕಲಿ?, ಶಾಲೆಗೆ ಚಕ್ಕರ್ ಹಾಕುವ ನೆಪದ ಹೊಟ್ಟೆನೋವಿನ, ಅಮ್ಮನ ಕಹಿ ಕಷಾಯದ ಖುಷಿಯನ್ನು ರಜಕ್ಕೆ ಒಂದು ತಿಂಗಳು ಮುಂಚೆ ಹೇಳಬೇಕಾದ ಐಟಿ ಕಂಪೆನಿಯ ಹಾಲಿಡೇ ಮಾನೇಜ್ಮೆಂಟ್ಗಳಲ್ಲಿ ಹೇಗೆ ಹುಡುಕಲಿ?, ಸೈಕಲ್ ಚಕ್ರವೊಂದನ್ನು ಕೋಲಿನಲ್ಲಿ ಬಡಿಯುತ್ತಾ ರಸ್ತೆಯಲ್ಲಿ ಓಡಿಸಿದ್ದ ಖುಷಿಯನ್ನು, ಉಜಾಲದ ಬಾಟಲಿಗೆ ಚಪ್ಪಲಿಯ ಚಕ್ರ ಮಾಡಿ ಊರಿನ ಗಲ್ಲಿಗಳಲ್ಲಿ ಮೆರವಣಿಗೆ ಹೋದ ಖುಷಿಯನ್ನು ಕಂಪೆನಿ ಕ್ಯಾಬ್-ಗಳಲ್ಲಿ ಹೇಗೆ ಹುಡುಕಲಿ?, ಮನೆ ಮುಂದಿನ ಹುಳಿ ಮರದಲ್ಲಿ ಉಯ್ಯಾಲೆಯಾಡಿದ ಖುಷಿಯನ್ನು, ಮಣ್ಣಲ್ಲೇ ಜಾರುಬಂಡಿಯ ಖುಷಿಯನ್ನು ಈ ಮೆಟ್ರೋದ ಪಾರ್ಕುಗಳಲ್ಲಿ ಹೇಗೆ ಹುಡುಕಲಿ?, ಮಕ್ಕಳ ದಿನಾಚರಣೆಗೆ ಹಾಕಿದ ಬಣ್ಣ ಬಣ್ಣದ ವೇಷದ ಖುಷಿಯನ್ನು, ಈದ್ ಮಿಲಾದಿಗೆ ಊರ ಜನರ ಮುಂದೆ ಹಾಡಿದ ಖುಷಿಯನ್ನು ಇಲ್ಲಿನ ಇವೆಂಟ್ಸ್-ಗಳಲ್ಲಿ, ಫೌಂಡೇಷನ್ ಡೇಗಳಲ್ಲಿ ಹೇಗೆ ಹುಡುಕಲಿ?, ಜೇನು ಕೊಪ್ಪೆಗೆ ಕಲ್ಲು ಹೊಡೆದದ್ದು, ಗಿಳಿ ಗೂಡಿಗೆ ಇಣುಕಿ ನೋಡಿದ್ದು, ಪಾರಿವಾಳದ ಗೂಡಿಂದ ಮೊಟ್ಟೆ ಕದ್ದದ್ದು, ನಾಟಿ ಕೋಳಿಯ ಹಸಿ ಮೊಟ್ಟೆಯನ್ನು ಕುಡಿದದ್ದು, ಅಮ್ಮ ಕೆರೆದಿಟ್ಟ ಬಿಸಿ ಹಸು ಹಾಲನ್ನು ಕುಡಿದದ್ದು, ಅಂಗಳದಲ್ಲಿ ಮನೆ ಮಾಡಿದ್ದು, ಮದುವೆ ಮಾಡಿ ಆಡಿದ್ದು, ಮಣ್ಣುಂಡೆ ಮಾಡಿ ಹಂಚಿದ್ದು, ಮಾವಿನ ಮಿಡಿಯನ್ನು ಉಪ್ಪಿನೊಂದಿಗೆ ಮುಕ್ಕಿ ತಿಂದದ್ದು, ಬೆಕ್ಕಿನ ಮರಿಗೆ ರಟ್ಟಿನ ಮನೆ ಮಾಡಿ ಕೊಟ್ಟದ್ದು, ಕಳ್ಳ ಪೋಲೀಸ್ ಆಟದಲ್ಲಿ ಮೋಸ ಮಾಡಿದ್ದು, ಮಕ್ಕಳನ್ನೆಲ್ಲ ಸಾಲಾಗಿ ಅಂಗಿಯ ತುದಿಗೆ ಹಿಡಿಯಲು ಹೇಳಿ ಬಸ್ ಆಟದಲ್ಲಿ ಡ್ರೈವರ್ ಆದದ್ದು, ಮಳೆಗಾಲದಲ್ಲಿ ನೀರಲ್ಲಿ ಮಜಾ ಮಾಡಿದ್ದು, ರಾತ್ರಿ ಕಾಲು ಹುಳ ತಿಂದ ನೋವಿಗೆ ಅತ್ತಿದ್ದು, ಜೋರು ಗಾಳಿಗೆ ಕೊಡೆ ಹಿಮ್ಮುಖವಾದಾಗ ಅದರಲ್ಲಿ ನೀರು ತುಂಬಿದ್ದು… ಈ ಖುಶಿಗಳನ್ನೆಲ್ಲ ಇಲ್ಲಿ ಹೇಗೆ ಹುಡುಕಲಿ ?. ಅದೆಲ್ಲಕ್ಕಿಂತ ಹೆಚ್ಚಾಗಿ ಅಮ್ಮನ ಎದೆಗೂಡಿನ ಕಾವಿನ ಖುಶಿಯನ್ನೂ, ಮಡಿಲ ಸಾಂತ್ವನದ ಖುಶಿಯನ್ನೂ ಇಲ್ಲಿ ಹೇಗೆ ಹುಡುಕಲಿ?.

kagaj-3

ಮನ ಬಾಲ್ಯದ ಓಣಿಯೇರಿದಾಗ ಎಲ್ಲೆ ಮೀರಿ ಚಡಪಡಿಸುತ್ತದೆ. ಯಾವ ಚಿಂತೆ,ನಿರೀಕ್ಷೆ ,ಅಸೆ ಏನೂ ಇಲ್ಲದೆ ಬಂಧನ ವಿಲ್ಲದೆ ಹಾರಾಡುತ್ತ ಕಳೆದ ಆ ದಿನಗಳು…
ನಾ ದುನಿಯಾಂಕ ಗಮ್ ಥಾ.. ನಾ ರಿಶ್ತೊಂಕೆ ಬಂಧನ್ ಬಡೀ ಖೂಬ್ ಸೂರತ್ ಥಿ ವೋ ಝಿಂದಗಾನಿ…
ಈಗಿನ ಸುಂದರ ಮುಖವಾಡದ, ಕೃತಕ ನಗುವಿನ, ಜವಾಬ್ದಾರಿಗಳ ಕುಲುಮೆಯಲ್ಲಿ ಪ್ರತೀದಿನ ನರಳಬೇಕಾದ, ನನಸಾಗದ ಕನಸುಗಳ ಬೆನ್ನೇರಿ ಓಡುವ ಹುಂಬತನದ ಯವ್ವನ ಉಸಿರುಗಟ್ಟಿಸುವಾಗ ಮತ್ತೆ ಕವಿವಾಣಿ ನೆನಪಾಗುತ್ತದೆ…
ಯೆ ದೌಲತ್ ಭಿ ಲೇಲೋ, ಯೆ ಶುಹ್ರತ್ ಭಿ ಲೇಲೋ, ಭಲೇ ಛೀನ್ ಲೋ ಮುಜ್ಹ್ ಸೇ ಮೇರೀ ಜವಾನೀ , ಮಗರ್ ಮುಜ್ಹ್ ಕು ಲೌಟಾದೋ ಬಚ್ಪನ್ ಕಾ ಸಾವನ್, ವೊಹ್ ಕಾಗಜ್ ಕಿ ಕಶ್ತೀ ವೊಹ್ ಬಾರಿಶ್ ಕಾ ಪಾನೀ”

ಹುಸೇನಿ ~

Leave a comment

ಕಾಡುವ ಹನಿಗಳು · ತೊರೆಯ ತೀರದ ನೆನಪುಗಳು · ಬಿಂದು · ಬಿರಿಯದ ಮೊಗ್ಗು · ಮತ್ತೆ ಸಂಜೆಯಾಗುತ್ತಿದೆ.. · ಮನಸಿನ ಹಾ(ಪಾ)ಡು · ವಿಜಯ ಕರ್ನಾಟದಲ್ಲಿ ನನ್ನದೊಂದು ಪದ್ಯ · ಹುಸೇನಿ_ಪದ್ಯಗಳು

ವಿಜಯ ಕರ್ನಾಟದಲ್ಲಿ ನನ್ನದೊಂದು ಪದ್ಯ

ಕಳೆದ ಭಾನುವಾರದ [6/11/2016] ವಿಜಯ ಕರ್ನಾಟಕ – ಲವಲvk ಪುರವಣಿಯಲ್ಲಿ ಪ್ರಕಟವಾದ ನನ್ನದೊಂದು ಪದ್ಯ

kavana

Leave a comment

ತೊರೆಯ ತೀರದ ನೆನಪುಗಳು · ನಾನೆಂಬ ಅಹಂ

ನಾನೆಂಬ ಅಹಂ

ನಾನೆಂಬ ಅಹಂ ಎಂಬ ತಲೆ ಬರಹದಲ್ಲಿ ನೆನಪಿನ ಸಂಚಿಯ ‘ನನ್ನ ಬಗ್ಗೆ’ ಎಂಬ ಪುಟವನ್ನು ಸುಮಾರು ೫ ವರ್ಷಗಳ ಮುಂಚೆ ಬ್ಲಾಗ್ ಆರಂಭಿಸಿದಾಗ ಬರೆದಿದ್ದೆ. ಅಂದಿನ ನಂಗೂ ೫ ವರ್ಷ ವಯಸ್ಸೇರಿದ ಇಂದಿನ ನಂಗೂ ಯೋಚನಾ ಲಹರಿಯಲ್ಲೂ ಅಥವಾ ಇನ್ಯಾವುದೇ ‘ಸ್ಥಿತ್ಯಂತರದ ಸ್ಥಿತಿ’ಯಲ್ಲಿ ಹಲವು ವ್ಯತ್ಯಾಸವಿದೆ, ಅದು ಬಹು ಸೂಕ್ಶ್ಮ, ಮತ್ತು ಮನುಷ್ಯ ಪ್ರಕೃತಿಯ ಸಹಜವಾದುದು. ಆದುದರಿಂದ ಅಂದಿನ “ನನ್ನ ಬಗ್ಗೆ” ಇಂದಿನ “ನನ್ನ ಬಗ್ಗೆ”ಯಾಗದು. ಹಾಗೆಂದು ಯೋಚಿಸುತ್ತಾ ಬೆರೆಯಲು ಕೂತೆ.  ಸದಾ ಗೊಂದಲದ ಗೂಡಾದ, ನನಗೆ ನಾನೇ, ತುಂಬಾ ಆಪ್ತನೆನಿಸುವ, ಮತ್ತೊಮ್ಮೆ ಪರಕೀಯನೆನಿಸುವ  ನಾನೆಂಬ ನನ್ನನ್ನು ಹಾಗೆಲ್ಲಾ ಕಟ್ಟಿಕೊಡುವುದು ಅಷ್ಟು ಸುಲಭವಲ್ಲ. ಅಪೂರ್ಣವೆನಿಸಿದರೂ ಆ ಹೊತ್ತಿಗೆ ನನಗೆ ನಿಲುಕಿದಷ್ಟು ನನ್ನನ್ನು ನಿಮ್ಮ ಓದಿಗೆ ಇಲ್ಲಿ ಹಾಕಿದ್ದೇನೆ.

ನಾನೆಂಬ ಅಹಂ
14237699_1155557847839456_8547636511193526244_nನನ್ನ ನಾಳೆಯ ಕುರಿತು ನನಗಲ್ಲ, ಈ ಭೂಮಿ ಯಾವುದೇ ಜೀವಿಗೂ ಪ್ರವಚಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ಯಾವತ್ತೂ ಬಾರದ ನಾಳೆಯ ಬಗ್ಗೆ ನಂಗೇನು ಅಷ್ಟು ಕುತೂಹಲವಿಲ್ಲ. ಈ ಬದುಕು ಈ ಕ್ಷಣದ್ದು ಅಷ್ಟೇ ಎಂದು ನಂಬುವವನು ನಾನು. ನಾ ಈ ಪದವನ್ನು ಬರೆಯುವ ವೇಳೆ ‘ಈ ಕ್ಷಣ’ ಆಗಿದ್ದ ಈ ಹೊತ್ತನ್ನು ಇನ್ನೈದು ನಿಮಿಷದ ಬಳಿಕ ನಾ ತಿರುಗಿ ನೋಡಬಹುದು. ಅಂಥಹ ನನ್ನ ದೃಷ್ಟಿ ಪರದೆಯಲ್ಲಿ ಶಾಶ್ವತವಾಗಿ ಉಳಿಯುವ, ನನ್ನನ್ನು ಸದಾ ಜೀವಂತವಿರಿಸುವ ಪ್ರೇರಣೆಯಾಗಿ, ಒಂಟಿಯಾದಾಗ ದಿಕ್ಕಾಗಿ, ದುಃಖಕ್ಕೆ ಸಾಂತ್ವನವಾಗಿ, ಭಾರಕ್ಕೊಂದು ಹೆಗಲಾಗಿ, ಅತ್ತ ಕ್ಷಣವ ನಗುವಾಗಿ, ನಕ್ಕ ಕ್ಷಣ ಅಳುವಾಗಿ, ಮಳೆಯ ನಂತರ ತೊಟ್ಟಿಕ್ಕುವ ಹನಿಯಾಗಿ, ಬದುಕು ಇಷ್ಟೆಯಾ ಎಂದೆನಿಸುವ ವೇಳೆ ನೀಲಾಗಸದ ತುಂಬಾ ಕಾಮನಬಿಲ್ಲಾಗಿ ಮೂಡುವ ನನ್ನ ನೆನಪುಗಳು, ಅಂತಹ ನೆನಪುಗಳ ವ್ಯಸನಿ ನಾನು. ಆ ಕಾರಣಕ್ಕೇ ಇರಬಹುದು ನಿನ್ನೆಗಳಲ್ಲೇ ಹೆಚ್ಚು ಬದುಕುತ್ತೇನೆ. ಅಂತಹ ಒಂದಿಷ್ಟು ಬೊಗಸೆ ನೆನಪುಗಳನ್ನು ಈ ಸಂಚಿಯೊಳಗೆ ತುಂಬಿದ್ದೇನೆ..

ನನ್ನ ಬಗ್ಗೆ ನನ್ನ ಬರಹಗಳೇ ಹೆಚ್ಚು ಮಾತನಾಡುವುದರಿಂದ ಇಲ್ಲಿ ಹೇಳಲು ಹೆಚ್ಚು ಉಳಿದಿಲ್ಲ. ಇಳಿಸಂಜೆಯಲ್ಲಿ ಕಾಡುಮಧ್ಯೆಯೋ, ಕಡಲ ತೀರದಲ್ಲೋ ಕಳೆದುಹೋಗಲು ಸದಾ ಹಂಬಲಿಸುವ ಮನ, ಬಾನ ಮಡಿಲಿನಿಂದ ಒಂದಿಷ್ಟು ವರ್ಷಧಾರೆಯೂ ಸೇರಿಕೊಂಡರೆ ಕಥೆ ಮುಗಿಯುತು;ನೆನಪುಗಳನ್ನೆಲ್ಲ ನೇವರಿಸಿ ಮಾತಿಗೆ ಕೂತು, ಮನಸ್ಸು ಮೌನವಾಗಿ ಅದ್ಯಾವುದೋ ಲೋಕದ ವಾಸಿಯಾಗುತ್ತದೆ. ಅಲ್ಲಿ ಬದುಕಿನ ಜಂಜಡವಿಲ್ಲ. ಗಾಳಿ, ನೀರು, ಬೆಳಕು ಉಚಿತವಾಗಿ ಸಿಗೋ ಜಗದಲಿ ಬದುಕನ್ನು ದುಸ್ತರ ಮಾಡಿಕೊಂಡ ನಿಮ್ಮಗಳ ಸಿನಿಕ ಜಗದಾಚೆಯ ಅನೂಹ್ಯ ಲೋಕವದು. ಹಕ್ಕಿಗಳ ಕಲರವಕ್ಕೆ ಸಾಥಿಯಾದ ಜೀರುಂಡೆಗಳ ನಾದ. ಪಕ್ಕದಲ್ಲೇ ಹರಿವ ತೋಡಿನ ಝುಳು-ಝುಳು. ರಾತ್ರಿಯ ನಿಶೀಥತೆ, ದೂರದಲ್ಲಿ ಒದರುವ ಗೂಬೆ, ಊಳಿಡುವ ನರಿ. ನನ್ನದೇ ಲೋಕವದು. ಕತ್ತಲಿಗೂ ಬೆಳಕನ್ನು ತೊಡಿಸಿ ಉನ್ಮಾದವನ್ನು ಉಣ್ಣುವ ಬೆಳಕಿನ ಜನರ ವಿಕ್ಷಿಪ್ತತೆಗೆ ಅಲ್ಲಿ ಜಾಗವಿಲ್ಲ. ಕತ್ತಲನ್ನು ಕತ್ತಲಾಗಿಯೂ ಬೆಳಕನ್ನು ಬೆಳಕಾಗಿಯೂ ಆಸ್ವಾದಿಸುತ್ತೇನೆ, ಅಲ್ಲಷ್ಟೇ ನಾನು ನಾನಾಗಿ ಹೆಚ್ಚು ಬದುಕುತ್ತೇನೆ. ಅದರಿಂದಲೋ ಏನೋ ನಾನು ಎಂದೂ ಸಲ್ಲದ ಈ ಬೆಳಕಿನ ಜಗದ ಬಗ್ಗೆ ತೀರದ ಅಸಹ್ಯತನವಿದೆ. ಕೋಪವಿದೆ, ಪರಿತಾಪವಿದೆ. ಆದರೇನು ? ಒಲ್ಲದೆಯೂ ನಾನು ಕೂಡ ಈ ಜಗದ ಕ್ಷುಲ್ಲಕತೆಯ ಭಾಗವಾಗಿದ್ದೇನೆ. ಅದರಿಂದಾಚೆ ಹೊರಬರಲು ಪ್ರಯತ್ನಿಸಿದಷ್ಟೂ ತೀವ್ರವಾಗಿ ನನ್ನನ್ನು ಸೆಳೆಯುತ್ತದೆ ಅದು. ಮನುಷ್ಯನೊಂದಿಗೆ ಹುಟ್ಟಿದ ಅಥವಾ ಹೇರಲ್ಪಟ್ಟ ಒಂದಷ್ಟು ಜವಾಬ್ದಾರಿಗಳೆಂಬ ಕಟ್ಟುಪಾಡುಗಳು, ಸಂಭಂದಗಳೆಂಬ ಬೇಲಿ. ಖುಷಿಯನ್ನು ವಸ್ತುಗಳ ಗಾತ್ರಕ್ಕೂ ಬೆಲೆಗೂ ನಿಗುದಿಗೊಳಿಸಿ, ಆ ವಸ್ತು ಸಿಕ್ಕರೆಷ್ಟೇ ಖುಷಿ ಎಂದು ಬದುಕಿಗೆ ನಿಯಮ ಹಾಕಲಾಗಿದೆ ಇಲ್ಲಿ. ಭೌತ ವಸ್ತುಗಳ ವ್ಯಾಮೋಹದಲ್ಲಿ ಬಾಲ್ಯವನ್ನೂ, ಕೌಮಾರವನ್ನೂ, ಯವ್ವನವನ್ನೂ ಅನುಭವಿಸಲು ಸಾಧ್ಯವಿಲ್ಲವಾಗಿದೆ. ಇದೆಲ್ಲದರಿಂದ ಮುಕ್ತಿಗಾಗಿ ಸದಾ ಹಂಬಲಿಸುತ್ತೇನೆ. ನೀ ಕಟ್ಟಿಕೊಂಡ ಸೌಧವೋ, ಕೋಟೆವೋ, ನೀನುಡುವ ವಸ್ತ್ರದ ಬೆಲೆಯೋ, ಸಂಚರಿಸುವ ವಾಹನದ ಮೌಲ್ಯವೋ, ಬ್ಯಾಂಕಿನ ಲಾಕರಿನಲ್ಲಿಟ್ಟಿರುವ ಒಡವೆಯೊ, ನಿನ್ನ ಹಿಂಬಾಲಕ ಪಡೆಯೋ ನಿನ್ನ ಮನಸಿನ ಸಂತೃಪ್ತಿಯನ್ನೂ ಖುಷಿಯನ್ನೂ ಅಲೆಯುವ ಮಾಪಕವಲ್ಲ. ಇದ್ಯಾವುದರಲ್ಲೂ ಪೂರ್ಣ ಸಂತೋಷವನ್ನು ಪಡೆದವರ್ಯಾರು ನಾನು ಕಂಡದ್ದಿಲ್ಲ, ಕೇಳಿದ್ದಿಲ್ಲ. “ಮನಃಶಾಂತಿಯೇ ಅತ್ಯುನ್ನತ ಶ್ರೀಮಂತಿಕೆ”, ಈ ಬೆಳಕಿನ ಜಗದ ತುಂಬೆಲ್ಲಾ ಯಾವುದೊ ಕರ್ಕಶ ಸಂಗೀತಕ್ಕೆ ಕಿವುಡಾದ ಮಂದಿಯ ಮಧ್ಯೆ ಈ ಸತ್ಯವನ್ನು ಕೂಗಿ ಕೂಗಿ ಹೇಳುವ ಪ್ರಯತ್ನದಲ್ಲಿದ್ದೇನೆ..

ಇಂತೀ ನಿಮ್ಮ,
ಹುಸೇನಿ ~

Leave a comment

ಜೀವದ ಗೆಳೆಯನ ಹುಟ್ಟುಹಬ್ಬದ ಸಂದೇಶ · ತೊರೆಯ ತೀರದ ನೆನಪುಗಳು

ಜೀವದ ಗೆಳೆಯನ ಹುಟ್ಟುಹಬ್ಬದ ಸಂದೇಶ

ಅಂದ ಹಾಗೆ ಇಂದು ನಾ ಅತ್ತಾಗ ಅಮ್ಮ ನಕ್ಕ ಒಂದೇ ಒಂದು ದಿನ .. ನಾನು ಹುಟ್ಟಿದ ದಿನ .. ಎಂದಿನಂತೆ ಸೋಂಬೇರಿಯಾಗಿ ೮ ಗಂಟೆಗೆ ಎದ್ದು ನಿದ್ದೆಗಣ್ಣಲ್ಲಿ ಮೊಬೈಲ್ ಎತ್ತಿದ ನಂಗೆ ಅನೂಹ್ಯ ಅನುಭೂತಿಯನ್ನು ಕೊಟ್ಟ ಜೀವದ ಗೆಳೆಯನ ಹೃದಯದ ಮಾತುಗಳಿವು.. ನೀವೂ ಓದಿ ….

ಹುಸೇನ್..
ಬಾಲ್ಯದಲ್ಲೇ ನನ್ನ ಹೃದಯವ
ಗೆದ್ದವನು.
ಸ್ನೇಹಕ್ಕೆ ಹೊಸ ಅರ್ಥವ ನೀಡಿದ
ಶ್ರೇಷ್ಠನಿವನು.
ವಿಭಿನ್ನವಾದ ನನ್ನ ಇವನ ಗೆಳೆತನಕ್ಕೆ
ಸರಿಸಾಟಿ ಯಾರೆಂದು ನಾ
ತಿಳಿಯೆನು.

ಹೌದು ನಮ್ಮ ಗೆಳೆತನದಲ್ಲಿ ಪ್ರೀತಿ ಇದೆ, ಕೋಪವಿದೆ, ಹಾಸ್ಯವಿದೆ, ಭಾವುಕತೆ ಇದೆ. ಗೆಳೆತನದ ಮಧ್ಯೆ ಬಿರುಕು ಬಿಟ್ಟಿದ್ದು ಇದೆ, ಮತ್ತೆ ಮೊದಲಿಗಿಂತ ಹತ್ತಿರವಾಗಿದ್ದು ಇದೆ.
ನನ್ನ ನೆನಪಿನ ಪ್ರಕಾರ ನಮ್ಮಿಬ್ಬರ ಸ್ನೇಹ ಎರಡನೇ ತರಗತಿಯಿಂದಲೇ ಶುರುವಾಗಿದ್ದು. ಅಂದಿನಿಂದಲೇ ಅವನಿಗೆ ನನ್ನಲ್ಲಿ ಅದೇನು ಪ್ರೀತಯೋ ಆ ದೇವನೊಬ್ಬನೇ ಬಲ್ಲ. ಅಂದು ಶಾಲೆಗೆ ಬರುವಾಗ ಪ್ರತಿದಿನವೂ ಅಂಗಡಿಯಲ್ಲಿ ಅಪ್ಪ ಇಲ್ಲದ ಸಮಯವನ್ನು ನೋಡಿ ನನಗೆಂದೇ ನಾಲ್ಕಾರು ಚಾಕಲೇಟುಗಳನ್ನು ತೆಗೆದುಕೊಂಡು ಬಂದು ಯಾರೂ ಕಾಣದ ಹಾಗೆ ನನಗೆ ಕೊಡುತ್ತಿದ್ದ. ಶಾಲಾ ರಜಾ ದಿನಗಳಲ್ಲಿ ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಚಿಲ್ಲರೆ ದುಡ್ಡನ್ನು ಕೈ ಬಿಟ್ಟರೆ ಕೆಳಗೆ ಜಾರಿ ಬೀಳುವ ಚಡ್ಡಿಯ ಕಿಸೆಯಲ್ಲಿ ಹಾಕಿಕೊಂಡು, ಅಂಗಡಿಗೆ ಹೋಗುವ ದಾರಿ ಮಧ್ಯೆ ಸಿಗುವ ನನ್ನ ಮನೆಗೆ ಬಂದು ನನ್ನನ್ನೂ ಅಂಗಡಿಗೆ ಕರೆದುಕೊಂಡು ಹೋಗಿ ಅವನಿಷ್ಟದ ಮಿಲ್ಕ್ ಪೌಡರ್ ಪ್ಯಾಕೆಟ್ ಖರೀದಿಸಿ ನಂಗೂ ತಿನ್ನಿಸ್ತಿದ್ದ. ಅದೇನಾಯ್ತೋ ಗೊತ್ತಿಲ್ಲ, ಐದನೆಯ ತರಗತಿಯಲ್ಲಿರುವಾಗ ಕ್ರಿಕೆಟ್ ಆಟವಾಡುತ್ತಿದ್ದಾಗ ಒಂದು ಬ್ಯಾಟ್ ವಿಷಯವಾಗಿ ಗಲಾಟೆ ಮಾಡಿ ಕ್ರಿಕೆಟ್ ಮೈದಾನದಿಂದ ಮುಖ ತಿರುಗಿಸಿ ನಡೆದವರು ಮತ್ತೆ ಒಂದಾಗೋಕೆ ಬರೋಬ್ಬರಿ ಏಳು ವರ್ಷಗಳ ಕಾಲ ಕಾಯಬೇಕಾಯಿತು. ಹಾಗಂತ ಅಷ್ಟೊಂದು ದ್ವೇಷ ನಮ್ಮ ನಡುವೆ ಇತ್ತು ಅಂತ ನೀವು ತಿಳಿದುಕೊಂಡರೆ ಅದು ತಪ್ಪು, ಇಬ್ಬರಿಗೂ ಮಾತನಾಡಬೇಕೆನ್ನುವ ಆಸೆ ಬೆಟ್ಟದಷ್ಟಿದ್ದರು ಕೂಡ “ಅವನು” ಮೊದಲು ಮಾತನಾಡಿಸಲೆಂಬ ಸಣ್ಣ ಸ್ವಾರ್ಥವೊಂದು ನಮ್ಮಿಬ್ಬರಲ್ಲೂ ಇತ್ತು.

ವರ್ಷಗಳು ಉರುಳಿದವು, ನಾನು ಕೆಲಸಕ್ಕೆಂದು ಬೆಂಗಳೂರು ಹೋಗಿ ಸೆಟ್ಲ್ ಆದೆ. ನಾವಿಬ್ಬರೂ ಮತ್ತೆ ಒಂದಾಗಲೆಂದಲೇನೋ ಗೊತ್ತಿಲ್ಲ, ಸೃಷ್ಟಿಕರ್ತನ ನಿರ್ಧಾರದಂತೆ ಇವನೂ ಕೂಡ ಸೆಕೆಂಡ್ ಪಿಯುಸಿ ಮುಗಿಸಿ ಮುಂದಿನ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದು ಬಿಟ್ಟ.
ಅದೊಂದು ದಿನ ನನ್ನನ್ನು ಹುಡುಕಿಕೊಂಡು ನಾನಿರುವಲ್ಲಿಗೆ ಮತ್ತೊಬ್ಬ ಗೆಳೆಯ ಹಕೀಮನೊಂದಿಗೆ ದೂರದಿಂದ ಬರುತ್ತಿರುವುದನ್ನು ಗಮನಿಸಿದ ನನಗೆ ಇದೇನು ಕನಸಾ ಅಲ್ಲ ನನಸಾ ಅನ್ನುವಂತೆ ಮಾಡಿಸಿದ್ದು ಸುಳ್ಳಲ್ಲ. ಅನಿರೀಕ್ಷಿತವಾಗಿ ನೇರ ನನ್ನ ಮುಂದೆ ಬಂದು ನಿಂತು ಕೈ ಕೊಟ್ಟು “ಅಸ್ಸಲಾಮು ಅಲೈಕುಮ್” ಅಂದಾಗ ಗೊತ್ತಿಲ್ಲದೆ ನನ್ನ ಕಣ್ಣುಗಳು ತುಂಬಿ ಹೋಗಿತ್ತು, ನಮ್ಮಿಬ್ಬರ ಕಣ್ಣುಗಳು ಪರಸ್ಪರ ಏನೋ ಹೇಳುತ್ತಿತ್ತು, ಭಾವನೆಗಳನ್ನು ಹೊರ ಹಾಕಿ ಏನಾದರೂ ಮಾತನಾಡುವ ಅಂದರೆ ಇಬ್ಬರಿಗೂ ಮಾತುಗಳು ಹೊರಡ್ತಾ ಇರಲಿಲ್ಲ.

ಅದೇನೋ ಹೇಳ್ತಾರಲ್ಲ ಸಂಬಂಧಗಳು ಮತ್ತು ಕನ್ನಡಿ ಬಿರುಕು ಬಿಟ್ಟರೆ ಮೊದಲಿನ ಹಾಗೆ ಜೋಡಿಸಲು ಸಾಧ್ಯವಿಲ್ಲ ಅಂತ.. ಇದು ನಮ್ಮ ಗೆಳತನಕ್ಕೆ ತಧ್ವಿರುದ್ದವಾಗಿತ್ತು. ಮತ್ತೆ ಜೊತೆಯಾದ ನಮ್ಮ ಗೆಳೆತನ ಮೊದಲಿಗಿಂತಲೂ ಗಟ್ಟಿಯಾಗಿ ಸಾಗಿತ್ತು. ಅಷ್ಟರಲ್ಲೇ ನಾವಿಬ್ಬರೂ ಪ್ರೀತಿಯೆಂಬ ಮಾಯಾ ಲೋಕದಲ್ಲಿ ತೇಲುತ್ತಿದ್ದೆವು. ನನ್ನ ಪ್ರೀತಿ ಕೈಕೊಟ್ಟಾಗ ನನ್ನ ನೋವಿನಲ್ಲಿ ಜೋತೆಯಾಗುತ್ತಿದ್ದ, ಅವನ ಹುಡುಗಿ ಏನಾದರೂ ಗಿಫ್ಟ್ ಕಳಿಸಿಕೊಟ್ಟರೆ ನಾನಿರುವಲ್ಲಿಗೆ ಬಂದು ನನ್ನ ಮುಂದೆಯೇ ಅದನ್ನು ತೆರೆದು ನೋಡದಿದ್ದರೆ ಅವನಿಗೆ ಸಮಾಧಾನ ಆಗುತ್ತಿರಲಿಲ್ಲ, ಆಲಿಚ್ಚನ ಅಂಗಡಿ ಮುಂದೆ ತಮಾಷೆಗೆ ನನ್ನ ಪ್ಯಾಂಟ್ ಎಳೆದಾಗ ಪ್ಯಾಂಟ್ ಕೆಳಗಡೆ ಜಾರಿ ನಾಲ್ಕು ಜನರ ಮುಂದೆ ನನ್ನನ್ನು ಪೇಚಾಟಕ್ಕೆ ಸಿಲುಕಿಸಿದ್ದ, ನಾನು ಮೊದಲ ಬಾರಿಗೆ ಸೌದಿಯಿಂದ ಊರಿಗೆ ಹೊರಟಾಗ ನನ್ನನ್ನು ಸ್ವೀಕರಿಸಲು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುವ ಕೆಲವೇ ಗಂಟೆಗಳ ಮೊದಲು ತನ್ನ ಬೆಲೆಬಾಳುವ ಮೊಬೈಲ್ ಕಳೆದು ಹೋಗಿದ್ದರು ಕೂಡ, ಊರಿಗೆ ಬರುವ ಸಂಭ್ರಮದಲ್ಲಿರುವ ನನಗೆ ನಿರಾಸೆ ಮಾಡಬಾರದೆಂದು ತನ್ನ ನೋವನ್ನು ನನಗೆ ತೋರಿಸದೆ ಮೊಬೈಲ್ ಕಳೆದುಕೊಂಡ ವಿಷಯವನ್ನು ಮುಚ್ಚಿಟ್ಟಿದ್ದ, ಬದುಕಿನ ದಾರಿಯಲ್ಲಿ ಎಡವಿ ಬೀಳದಂತೆ ನನ್ನನ್ನು ಎಚ್ಚರಿಸುತ್ತಾನೆ, ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ನನ್ನೊಂದಿಗೆ ಚರ್ಚಿಸುತ್ತಾನೆ, ಒಂಟಿತನ ಕಾಡುವಾಗ ಅವನಿಗೆ ಕಾಲ್ ಮಾಡಿ ಗಂಟೆಗಟ್ಟಲೆ ಮಾತಾಡುತ್ತೇನೆ.. ಹೀಗೇ ನಮ್ಮ ಗೆಳೆತನದ ಕುರಿತು ಬರೆಯುತ್ತಾ ಹೋದರೆ ಅದೊಂದು ಮುಗಿಯದ ಅದ್ಯಾಯ. ನಮ್ಮ ಈ ಸ್ನೇಹವು ನಿರಂತರವಾಗಿ ಹೀಗೆ ಸಾಗಲಿ ಎಂದು ನಿಮ್ಮೆಲ್ಲರ ಪ್ರಾರ್ಥನೆ ನಮ್ಮ ಮೇಲೆ ಇರಲಿ.

ಇಂದು ಹುಸೇನಿಯ ಹುಟ್ಟಿದ ದಿನ, ನಮ್ಮ ಬಾಲ್ಯದ ನೆನಪುಗಳೆಂಬ ಮುತ್ತಿನ ಹಾರವನ್ನೇ ಉಡುಗೊರೆಯಾಗಿ ನೀಡಿ ಅವನಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸುತ್ತೇನೆ. ಅವನು ಧೀರ್ಘ ಕಾಲ ಖುಷಿ ಖುಷಿಯಾಗಿ ಬಾಳಲಿ ಎಂಬ ಪ್ರಾರ್ಥನೆ ಸದಾ ಇದೆ.

ಇಂತೀ ನಿನ್ನ ಜೀವದ ಗೆಳೆಯ
ಎಸ್ಸಾರ್ಜೆ ಮಾಡನ್ನೂರ್

Leave a comment

ಆತ್ಮ ಸಂಗಾತದೊಂದಿಗೆ ಅತ್ಮೀಯ ಬಾಲ್ಯ ... · ತೊರೆಯ ತೀರದ ನೆನಪುಗಳು · ಮತ್ತೆ ಸಂಜೆಯಾಗುತ್ತಿದೆ.. · ಸಣ್ಣ ಕತೆ

ಆತ್ಮ ಸಂಗಾತದೊಂದಿಗೆ ಅತ್ಮೀಯ ಬಾಲ್ಯ …

“ನಿನ್ನ ಒಂದಿಷ್ಟು ಶೂನ್ಯ ತಾ.. ನನ್ನೊಂದಿಷ್ಟು ಏಕಾಂತ ತರುವೆ.. ಮೌನದಿಂದಲೇ ಈ ಸ್ನೇಹಕ್ಕೊಂದು ಸೂರು ಕಟ್ಟೋಣ ಆಗದೇ… ?”

ನಿನ್ನ ಈ ಸಾಲು ಓದಿದಾಗೆಲ್ಲ ಈ ಜಗದ ಮಾನಸಿಕ ಅಪರಿಚಿತತೆಯ ಮೆಟ್ಟಿ ನಿಂತು ಎದ್ದು ಬಿದ್ದು ಅಂಬೆಗಾಲಿಕ್ಕುವ ಮಗುವಿನ ಜೀವನೋತ್ಸಾಹದಂತೆ, ಹೊಸ ಕವನಕ್ಕೆ ಕಾವು ಕೊಟ್ಟ ಕವಿಯಂತೆ ಸಂಭ್ರಮಿಸುತ್ತೇನೆ. ಅಲ್ಲೆಲ್ಲೊ ಭೋರ್ಗರೆವ ಶರಧಿಯ ನಡುವೆ ನಿರ್ಲಿಪ್ತ ಏಕಾಂಗಿ ದ್ವೀಪವಾಗಿದ್ದೆ ನಾನು. ನನ್ನೊಳಗೆ ನಾನೇ ಕಟ್ಟಿಕೊಡ ಜಗತ್ತು ಅದು. ಯಾವ ಹಂಗೂ ಇಲ್ಲ, ಮುಂಜಾನೆಯ ವಿಭಾಕಿರಣಗಳು, ಮುಸ್ಸಂಜೆಯ ಮೆಲುಗಾಳಿ, ಅಮವಾಸ್ಯೆಗಳೂ ಹುಣ್ಣಿಮೆಗಳೂ ನನ್ನೊಳಗೆ ಯಾವುದೇ ವಿಶೇಷ ತರಂಗವನ್ನು ಸೃಷ್ಟಿಸುತ್ತಿರಲಿಲ್ಲ. ಕಿನಾರೆಯಲ್ಲಿ ನಿಂತು ಶರಧಿಯನ್ನು ಮುತ್ತಿಕ್ಕುವ ಆಗಸದ ಆ ಅನಂತ ಬಿಂದುವನ್ನು ತದೇಕಚಿತ್ತದಿಂದ ವೀಕ್ಷಿಸುತ್ತಿದ್ದೆ. ಹಾಗೆ ದಿಟ್ಟಿಸುವಾಗೆಲ್ಲ ಭಾವ ಬಂಧಗಳಿಗೆ ತೆರೆದುಕೊಂಡು ಬದುಕಿAlone-Boy-In-Love-Wallpaperನ ಅರ್ಥ ಕಂಡುಕೊಳ್ಳಬೇಕೆಂಬ ತಹತಹಿಕೆ ನನ್ನೊಳಗೆ ಒತ್ತರಿಸಿ ಬರುತ್ತಿತ್ತು.. ಅದು ಅಷ್ಟು ಸುಲಭವಲ್ಲ… ನಾನೆಂಬುದು ಬರಿಯ ಗೋಜಲಿನ ಮೂಟೆ, ನಾನೇನು..? ನನ್ನ ಅಸಿತ್ವವೇನು..? ಎಲ್ಲವೂ ದ್ವಂದ್ವ. ಪೂರ್ವವೂ ಅಲ್ಲದ, ಪಶ್ಚಿಮವೂ ಅಲ್ಲದ ರಾತ್ರಿಯೂ ಅಲ್ಲದ, ಹಗಲೂ ಅಲ್ಲದ, ನಿದಿರೆಯೂ ಅಲ್ಲದ, ಎಚ್ಚರವೂ ಅಲ್ಲದ, ಅದೊಂದು ತ್ರಿಶಂಕು ಮನಸ್ಥಿತಿ. ನನ್ನ ತವಕ ತಲ್ಲಣಗಳು, ಅನುಮಾನಗಳು, ಆತಂಕಗಳು, ಅತಿರೇಕಗಳು, ಅನುಭವಗಳು, ಅನುಭಾವಗಳು ಇದೆಲ್ಲವನ್ನೂ ನನ್ನನ್ನು ಮತ್ತಷ್ಟು ಅಯೋಮಯವಾಗುಸುತ್ತದೆ. ನನ್ನ ಹಾಗೆ ಯೋಚಿಸುವ, ನನ್ನದೇ ಬಡಿತದ ಲಯದಲ್ಲಿ, ತಾಳದಲ್ಲಿ ಹೃದಯ ಬಡಿತವಿರುವ ಯಾರಾದರೂ ಇರಬಹುದೇ ಎಂಬ ನನ್ನ ಜಿಜ್ಞಾಸೆಗೆ ಉತ್ತರ ಸಿಗಲಾರದೆ ಪರಿತಪಿಸುತ್ತಿದ್ದೆ.

TOPSHOTS Pakistani children play near the Ravi river in Lahore on April 6, 2015. AFP PHOTO / Arif ALIArif Ali/AFP/Getty Images

ಕಾಲ ಎಲ್ಲದಕ್ಕೂ ಉತ್ತರವಾಗಿ ಬಂತು. ನೀ ನನಗೆ ಸಿಕ್ಕಿದೆ, ಅಲ್ಲ ನನಗೆ ನಾ ದಕ್ಕಿದೆ. ನಿನ್ನದೇ ಮಾತಿನಲ್ಲಿ ಹೇಳಬೇಕಾದರೆ ಒಂದಿನಿತು ಸ್ನೇಹದಾಸೆ ನಮಗಾಗಿ ಹೊಸ ಜಗತ್ತನ್ನೇ ತೆರೆದಿಟ್ಟಿತು, ಮೆಚ್ಚುಗೆ, ಪ್ರೀತಿ, ಮಮಕಾರ, ಹವ್ಯಾಸ, ಇಷ್ಟಗಳು ಎಷ್ಟೊಂದು ಸಾಮ್ಯತೆ.. !. ಇನ್ನಿಲ್ಲದಂತಹಾ ಆತ್ಮೀಯತೆ, ಹಿಂದೆಂದೂ ಕಂಡರಿಯದ ನನ್ನೊಂದಿಗೇ ನನ್ನ ನಂಟು, ಭಾವನಾ ಲೋಕದಲ್ಲಿ ವಿಹರಿಸುತ್ತಿದ್ದರೂ ವಾಸ್ತವದಲ್ಲಿ ಒಂದಾಗುವ ಹೃದಯದ ಮಿಡಿತ, ಮಾತುಗಳಲ್ಲಿರದ ಆಕರ್ಷಣೆ ಆ ಮೌನ ಆರ್ದ್ರ ನೋಟಗಳಲ್ಲಿ ಕಂಡುಬರುವುದೇನು ಸಾಮಾನ್ಯವೇ ವಿಷಯವೇ..?. ಕೆಲವೊಂದು ಸಲ ನಿನ್ನ ಮಾತುಗಳು ನನ್ನ ಕರ್ಣ ಪಟಲವನ್ನು ದಾಟಿ, ಭಾವ ತಂತುಗಳ ವರೆಗೂ ಮುಟ್ಟಿ ಅಲ್ಲಿ ಸೂಕ್ಷ್ಮ ತರಂಗ ಗಳನ್ನೇ ಉಂಟುಮಾಡುತ್ತದೆ. ಹೀಗೆ ನಿನ್ನ ಮಾತಿಗೆ ಒಮ್ಮೆ ಆಶ್ಚರ್ಯ ಪಡುತ್ತ, ಬೆರಗಾಗುತ್ತ, ಮತ್ತೊಮ್ಮೆ ಆ ಮಾತು ನನಗೆ ಪ್ರಶ್ನೆಯಾಗುತ್ತ ಮಗದೊಮ್ಮೆ ಉತ್ತರವಾಗುತ್ತ ಎಷ್ಟೋ ಸಲ ಆ ಮಾತಿಗೆ ನಾನೇ ಭಾವವಾಗುತ್ತಾ ನನ್ನ ಮುಗ್ಧ ಪ್ರಪಂಚ ವಿಸ್ತಾರವಾಗುತ್ತಿದೆ. ಕೆಲವಕ್ಷರಗಳ ಸಂದೇಶಕ್ಕೆ ಇಡೀ ಜೀವಿತವನ್ನೇ ತೆರೆದಿಡುವ ಶಕ್ತಿ, ಹೃದಯದೊಂದರ್ಧ ಚಡಪಡಿಸಿದಾಗ ಮತ್ತೊಂದರ್ಧ ದಲ್ಲಿ ಏನೋ ತಳಮಳ, ಒಂದರ ನೋವು ಮತ್ತೊಂದು ಕಣ್ಣಲ್ಲಿ ನೀರು ತರಿಸುವುದೇಕೋ, ಇಲ್ಲಿ ಬಾಹ್ಯ ಮಿಲನವೇ ಇಲ್ಲ ಅದರ ವಾಂಛೆಯೂ ಇಲ್ಲ,ಆತ್ಮಗಳ ವಿರಹದ ಬೇಗೆ ಮಾತ್ರ ಸುಡುವಂತಿದೆ, ಇಹದ ಮಿಲನದ ಹಂಗಿಲ್ಲದವರ ಸಾಲಲ್ಲಿ ಶೂನ್ಯ ಏಕಾಂತದ ಜೊತೆಯಾಗಿದೆ, ಭಾವನೆಗಳ ಮಿಲನ ಹೃದಯಕ್ಕೆ ನಿಷ್ಕಳಂಕ ಸ್ನೇಹದ ಗರ್ಭದಾನ ಮಾಡಿ, ಭಾವಲೋಕದಲ್ಲೊಂದು ಮುಗ್ಧ ಶಿಶು ಜನಿಸಿದೆ…!

atma-sangatha-criket

ಆ ಶಿಶು ನಮ್ಮೊಳಗಿನ ಅನೂರವಾದ ಸ್ನೇಹ. ನಿನಗೆ ಗೊತ್ತಾ… ? ನನ್ನನ್ನು ನಿನ್ನನ್ನೂ ಹುಟ್ಟಿನಿಂದಲೇ ಬೆಸೆಯಲಾಗಿತ್ತು. ನಿನ್ನದೇ ಮುಂದುವರಿಕೆ ನಾನು ಅಥವಾ ನನ್ನದೇ ಮುಂದುವರಿಕೆ ನೀನು.. ಅಂದು ನಿಮ್ಮೂರಲ್ಲಿ ಸಿಹಿ ಹಂಚಲಾಗಿತ್ತು. ನಿನ್ನಪ್ಪ ರಾಜಗಾಂಭೀರ್ಯದಿಂದ ರಾಜಕುಮಾರಿಯನ್ನು ದಿಟ್ಟಿಸಿ ಸಂಭ್ರಮಪಟ್ಟಿದ್ದ. ನಮ್ಮನೆಯಲ್ಲೂ ಅಷ್ಟೇ, ಅಜ್ಜಿಗೆ ಮೊದಲ ಮೊಮ್ಮಗ, ಸಿಹಿ ಹಂಚಿದ ಅಪ್ಪನ ಮೊಗದ ಮಂದಹಾಸದಲ್ಲೊಂದು ಅನುಶ್ವರವಾದ ಸಂತಸವೊಂದಿತ್ತು. ನೀನು ನನಗಿಂತಲೂ ಮುಂಚೆ ಅಂಬೆಗಾಲಿಡಲು, ದೇಕಲು, ಕುಳಿತುಕೊಳ್ಳಲು, ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ನಡೆಯಲು ಆರಂಭಿಸಿದ್ದೆ. ಆಮೇಲೆ ಶಾಲೆ ಮದ್ರಸಾ.. ನಮ್ಮೆಲ್ಲ ಮಗುತನವ ಕೊಂಚ ಕೊಂಚವೇ ಕಳೆದುಕೊಳ್ಳಲು ಆರಂಭವಾಯ್ತು. ನಾನು ಸ್ಕೂಲ್ ಕಳ್ಳ, ಊರ ಗುಡ್ಡದ ಮೇಲಿನ ಸರ್ಕಾರಿ ಶಾಲೆ ನಂಗೆ ಅವಾಗ ಭೂತ ಬಂಗಲೆ. ಒಂದನೇ ತರಗತಿಗೆ ಹೋದದ್ದೇ ಕಮ್ಮಿ. ಅಮ್ಮ ಎಷ್ಟು ಸಲ ಅಟ್ಟಾಡಿಸ್ಕೊಂಡು ಹೋಗಿದ್ರು ಗೊತ್ತ?. ಹಾಗೆ ಓಡಿಸುವಾಗ ದಾರಿ ಬದಿಯ ಬಳ್ಳಿ ಗಿಡದ ಬೆತ್ತದ ರುಚಿ ತೀರ ರುಚಿಸುತ್ತಿರಲಿಲ್ಲ. ನೀನು ಅಷ್ಟೇ ಪೆಚ್ಚು ಮೊರೆ ಹಾಕಿ ಇಷ್ಟಗಲ ಬೊಚ್ಚುಬಾಯಿ ಅಳು, ಅಮ್ಮನಿಂದ ಬೆನ್ನಿಗೆರಡು ಸಿಕ್ರೇನೆ ಶಾಲೆ ದಾರಿ ನೆನಪಾಗೋದು.

atma-sangatha-scooterನಿನ್ನ ಮದ್ರಸಾ ಉಸ್ತಾದರ ಕೈಯಲ್ಲಿ ನಿಮ್ಮಪ್ಪ ಕೊಟ್ಟ ನಾಗರ ಬೆತ್ತ ನಿನಗೆ ದಿಗಿಲು ಹುಟ್ಟಿಸುತ್ತಿತ್ತು. ಅರ್ದ ಉರು ಹೊಡೆದ ಪಾಠಗಳನ್ನೂ ಕನವರಿಸುತ್ತಿದ್ದೆ ಅಂತ ನಿನ್ನಮ್ಮ ಹೇಳ್ಕೊಳ್ತಾ ಇದ್ರು. ಶಾಲೆಯಿಂದ ಬರುವಾಗ ಇದ್ದ ಸಿಟ್ಟೆಲ್ಲ ದಾರಿಯಲ್ಲಿರುವ ಕಮ್ಮ್ಯುನಿಷ್ಟ್ ಗಿಡದ ಮೇಲೆ ತೀರಿಸ್ಕೊಳ್ತಿದ್ವಿ. ಒಂದು ಬೆತ್ತ ಹಿಡಿದು ಓದಿದ್ಯಾ..? ಉತ್ತರಕೊಡು.. ಅಂತ ಪ್ರಶ್ನೆ ಕೇಳಿ ಅದರ ತಲೆ ಹಾರಿಸ್ತಿದ್ದೆವು. ಕೋಪ ಹೆಚ್ಚಿದರೆ ಅದು ನುಚ್ಚು ನೂರು. ಮನೆಗೆ ತಲುಪಿದವಳೇ ಆಡು ಮರಿಯನ್ನೆತ್ತಿ ಮುದ್ದು ಮಾಡಿ ಮಡಿಲಲ್ಲಿ ಕುಳ್ಳಿರಿಸಿ ತಲೆ ನೇವರ್ಸ್ತಿದ್ದೆ. ನಾನಿಲ್ಲಿ ನನ್ನ ಮುದ್ದು ಬೆಕ್ಕು ಮರಿಗೆ ಹಾಲೆರಿತಿದ್ದೆ. ಅದು ಕಣ್ಣು ಮುಚ್ಚಿ ಕುಡಿಯೋದನ್ನ ನೋಡುವುದೇ ಸಂಭ್ರಮ. ಆಮೇಲೆ ಚಿಣ್ಣಿ – ದಾಂಡು, ಲಗೋರಿ, ಕ್ರಿಕೆಟ್, ನಿನ್ನ ಕುಂಟೆ ಬಿಲ್ಲೆ, ಜೋಕಾಲಿ, ಹೆಸರು ಗೊತ್ತಿಲ್ಲದ ಆ ಕೈಯಲ್ಲೇ ಕಲ್ಲನ್ನು ಆಡಿಸುವ ಆಟ, ಸ್ಟಾಚ್ಯೂ, ಕಲರ್ ಕಲರ್ ವಾಟರ್ ಕಲರ್, ಕಳ್ಳ ಪೋಲಿಸ್, ಮನೆಯಿಂದ ಕದ್ದು ತಿಂದ ಮಿಲ್ಕ್ ಪೌಡರ್, ಬೆಲ್ಲ, ಹಾರ್ಲಿಕ್ಸ್ … ಇನ್ನೇನೋ. ಪಕ್ಕದ ಮನೆಯ ಇಕ್ಕುನೊಂದಿಗೆ ಸೇರಿ ಬೀಡಿ ಎಳೆದದ್ದು, ಮೂಗಲ್ಲಿ ಹೊಗೆ ಬಿಡಲು ಹೋಗಿ ಕೆಮ್ಮು ಬಂದು ಅರ್ಧಕ್ಕೆ ಬಿಸಾಡಿದ್ದು, ರಾತ್ರಿ ಪೂರ ಹೊಟ್ಟೆಯಿಂದ ಹೊಗೆಯ ವಾಸನೆಗೆ ಕೆಮ್ಮಿ ಕೆಮ್ಮಿ ಸುಸ್ತಾದ್ದು. ಅದೆಲ್ಲ ಗೊತ್ತಾಗಿ ಅಲ್ಲಿಂದಲೇ ಗೊಳ್ಳೆಂದು ನಕ್ಕಿದ್ದೆ ನೀನು. ನನಗಿಲ್ಲಿ ಸಂಜೆ ತೋಟದ ಬದಿಯ ತೊರೆಯ ಸ್ನಾನದ ಮಜಾನೆ ಬೇರೆ ಇತ್ತು. ನಿನಗಲ್ಲಿ ಅಮ್ಮ ಹತ್ತು ಬಾರಿ ಕೂಗ್ಬೇಕು ನಿನ್ನ ಸ್ನಾನಕ್ಕೆ. ಅದರಲ್ಲೂ ಸೋಂಬೇರಿ ನೀನು!. pithooರಾತ್ರಿಯ ಅಜ್ಜಿ ಕತೆಯ ರಕ್ಕಸರು ನಿನಗೆ ಕೊಟ್ಟಷ್ಟೇ ಹೆದರಿಕೆ ನಂಗೂ ಕೊಟ್ಟಿತ್ತು. ಅದ ಕೇಳಿ ಬಚ್ಚಲು ಮನೆಗೆ ಹೋಗಲು ಭಯ ಅಲ್ವಾ … ?. ಬಾಲಮಂಗಳದ ಡಿಂಗ ಲಂಬೋದರ ನಿನಗೆಷ್ಟು ಇಷ್ಟವೋ ನಂಗೂ ಅಷ್ಟೇ ಇಷ್ಟ ಆಗಿದ್ರು. ನೀನಲ್ಲಿ ಮಾವಿನ ಮಿಡಿಯನ್ನು ಕದ್ದು ತಂದ ಉಪ್ಪಿನೊಂದಿಗೆ ತಿನ್ನುವಾಗ ಇಲ್ಲಿ ನನ್ನ ಬಾಯಲ್ಲಿ ನಿರೂರಿತ್ತು. ಅಪ್ಪನ ಸ್ಕೂಟರ್ ಮೇಲೆ ಕೂತ್ಕೊಂಡು ಅಂಬಾರಿ ಮೇಲೆ ಕೂತಂತೆ ಆದ್ಕೊತ್ತಿದ್ದೆ ನೀನು. ನಂಗೆ ಸಿರಾಜನ ಕೈಯಲ್ಲಿದ್ದ ಸೈಕಲ್ ನೋಡುವುದೇ ಕುಶಿ. ಶಾಲಾ ಟೂರ್-ಗೆ ನೀನು ನಿಮ್ಮ ಶಾಲೆಯ ಹೆಸರು ಹಾಕಿ ಪ್ರವಾಸಕ್ಕೆ ಶುಭವಾಗಲಿ ಅಂತ ಬರೆದು ಬಸ್ಸಿಂದಲೇ ಹಾರಿಸಿದ ಚೀಟಿ ನಮ್ಮೂರಿನ ರಸ್ತೆಯಲ್ಲಿ ಸಿಕ್ಕಿತ್ತು. ನಿನ್ನ ದುಂಡು ಅಕ್ಷರ ಎಷ್ಟು ಚೆಂದ ಗೊತ್ತಾ..?. ನೀನಲ್ಲಿ ನಿನ್ನಬ್ಬನ ಜೊತೆ ಸೇರಿ ಊಟ ಮಾಡುವಾಗ ನಾನು ಕೂಡಾ ಉಪ್ಪನೊಟ್ಟಿಗೇ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದೆ. ದೂರದರ್ಶನ ಬಂದ ಮೇಲಂತು ಶಕ್ತಿಮಾನ್ ನಮಗೆ ಹೀರೋ ಆಗಿದ್ದ. ದಿ ಗ್ರೇಟ್ ಡಾಕ್ಟರ್ ತಮ್ರಾಜ್ ಕಿಲ್ವಿಶ್ ಕರ್ಕಶವಾಗಿ “ಅಂಧೇರಾ ಖಾಯಂ ರಹೇ ..” ಅನ್ನುವಾಗ ನೀನಲ್ಲಿ ಕಂಪಿಸುತ್ತಿದ್ದೆ. ನಾನಿಲ್ಲಿ ಅದನ್ನು ನೋಡಿ ಮುಸಿ ಮುಸಿ ನಗುತ್ತಿದ್ದೆ. ಆಮೇಲೆ ರಾತ್ರಿಯ ಚಿತ್ರಗೀತ್ ‘ಸುರಾಗ್’ ಇಬ್ರು ಬಿಡದೆ ನೋಡ್ತಿದ್ದೆವು. ಬದುಕು ಸಾಗುತ್ತಿತ್ತು. ನಮ್ಮೆಲ್ಲ ಮಗುತನವನ್ನು ಅಳಿಸಿ … ನಂತರ ಹೈಸ್ಕೂಲು, ಪಿಯೂಸಿ, ಡಿಗ್ರಿ…. ಇಲ್ಲೇಲ್ಲವೂ ನಮ್ಮಿಬ್ಬರ ಅಭಿರುಚಿಗಳು kabaddiಸಮಾನವಾಗಿತ್ತು. ದೂರದೂರವಿದ್ದರೂ ಯಾವುದೊ ಅಗೋಚರ ಶಕ್ತಿ ನಮ್ಮನ್ನು ಅವಿನಾಭಾವವಾಗಿ ಬೆಸೆದಿತ್ತು. ಬೆಳೆಯುತ್ತ ಬೆಳೆಯುತ್ತಾ ಇಂದಿನ ನಾವಾಗಿದ್ದೇವೆ. ಎರಡು ದೇಹ ಎರಡು ಹೃದಯ, ಅದರ ತುಡಿತ ಮಿಡಿತ ಒಂದೇ… ಒಂದೇ ಮನಸ್ಸು. ನಾನು ಏನಾಗಿತ್ತೋ ನೀನೂ ಅದೇ ಆಗಿದ್ದೆ. ಮೌನ ಕಣಿವೆಯಲ್ಲಷ್ಟೇ ನನ್ನ ಭಾವನೆಗಳು ಗುಪ್ತಗಾಮಿನಿಯಾಗಿ ಹರಿಯುತ್ತದೆ. ಬೇರೆಲ್ಲೂ ಅದು ತೆರೆದುಕೊಳ್ಳುವುದಿಲ್ಲ. ನಿರ್ದಿಷ್ಟ ಗಡಿಯೊಳಗಷ್ಟೇ ಅದು ಚಲಾವಣೆಗೊಳ್ಳುತ್ತದೆ. ಬಹುಶಃ ಈ ತರದ್ದೊಂದು ಗಡಿಯಿಟ್ಟು ಕೊಂಡವರಿಗಷ್ಟೇ ಪರಸ್ಪರ ತುಡಿತ, ಆತಂಕ, ಅಭೀಪ್ಸೆಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿ ಇರಬಹುದು. ಹಾಗಾಗಿಯೇ ಇವತ್ತಿನ ಈ ಕ್ಷಣದವರೆಗಿನ ನಮ್ಮ ಆತ್ಮೀಯತೆ ಈ ಮಟ್ಟಕ್ಕೆ ಬಂದು ನಿಂತದ್ದು.

ನೀನು ಅಂತರಾತ್ಮದಲ್ಲಿ ಸೃಜಿಸುವ ಜೀವಕಲೆ.. ನನ್ನ ಮುಂಜಾನೆಯಲ್ಲೂ ಮುಸ್ಸಂಜೆಯಲ್ಲೂ ಉಸಿರಿಗೆ ಜೀವನ್ಮುಖೀ ಭಾವತುಂಬಿ ಎದೆಯ ಶೂನ್ಯ ಬಟ್ಟಲ ತುಂಬಿಕೊಡುವ ಆವರ್ತ ಮಳೆ. ಎದೆ ಬಯಲಲಿ ಹೂ ಬಿಡುವ ಮಧುರ ಭಾವಗಳ ಒರತೆಯ ಮೂಲ ಸೆಲೆ. ಇನ್ನು ಯಾವ ಪರದೆಯೂ ಪರಿಧಿಯೂ ಇಲ್ಲ(ಬೇಡ).. ಆತ್ಮ ಸಂಗಾತ ನೀನು… ಆತ್ಮದೊಳಗಿಂದ ಭರವಸೆಯ ಕಿಡಿಗೆ ನಿನ್ನದೇ ಹೆಸರಿದೆ, ಉಸಿರಿದೆ.. ಬಾ.. ನೀನೊಮ್ಮೆ ಸಾಗರವಾಗು… ನದಿಯಾಗಿ ಹರಿದು ನಿನ್ನಲ್ಲೇ ಲೀನವಾಗಬೇಕು.. ನನ್ನ ಅಸ್ತಿತ್ವವೇ ಇಲ್ಲದ ಹಾಗೆ… ಅದರಲ್ಲೇ ಹೆಚ್ಚು ಖುಷಿ ನನಗೆ.

~ಹುಸೇನಿ

Leave a comment

ಅಚ್ಛೇ ದಿನ್ · ತೊರೆಯ ತೀರದ ನೆನಪುಗಳು

ಅಚ್ಛೇ ದಿನ್

hakeem'

ಮುಂಜಾವಿಗೆ ಒಮ್ಮೆ ಎದ್ದು ಆಮೇಲೆ ಮಲಗಿದರೆ ಮತ್ತೆ ಎದ್ದೇಳಲು ಅಮ್ಮ ಬಂದು ಫ್ಯಾನ್ ಆಫ್ ಮಾಡಿ ಒಂದು ಒದಿಬೇಕು ಇಲ್ಲಾ ರಗ್ಗನ್ನೆತ್ತಿ ಬಿಸಾಡಬೇಕು.. ದಿನವೆಲ್ಲಾ ಅಮ್ಮನ ಹಿಂದೆ ಮುಂದೆ ಅಲೆಮಾರಿಯಾಗುವುದು, ಮನಸ್ಸಾದರೆ ತೋಟಕ್ಕೆ ಹೋಗಿ ಅಡಿಕೆ ಹೆಕ್ಕುವುದು.. ಮನೆಯಿಂದ ಹೊರಬಿದ್ದರೆ ನನ್ನ ಹೆಜ್ಜೆಯನ್ನು ಇನ್ನೂ ಜೀವಂತವಾಗಿರಿಸಿದ ಕಾಲುದಾರಿಗಳು, ಆ ತೊರೆ, ಮನೆಯ ಹಿಂದಿನ ಗುಡ್ಡದಲ್ಲೆಲnanuಲ್ಲಾ ಅಲೆದಾಟ, ಸಂಜೆ ಆಟ, ಊರಿನ ಪ್ರತೀ ಕಾರ್ಯಕ್ರಮದಲ್ಲಿ ಸಜೀವ ಸಾನಿಧ್ಯ!, ಎರಡನೇ ಮಹಡಿಯ ಒಂದು ಮೂಲೆಯಲ್ಲಷ್ಟೇ ಸಿಗುವ ಏರ್ಟೆಲ್ ನೆಟ್ವರ್ಕ್ ನಿಂದಾಗಿ ನಿಮ್ಮ ‘ಅಂತರ’ಜಾಲ ಪ್ರಪಂಚದಿಂದ ಸ್ವಲ್ಪ ದೂರ ದೂರ.. ಜೊತೆಗೆ ಒಂದಿಷ್ಟು ಹೆಗಲೇರಿಸಿಕೊಂಡ ಜವಾಬ್ದಾರಿಗಳು.. ಇದು ಸದ್ಯದ ನನ್ನ ದಿನಚರಿ … ಬದುಕು ಮತ್ತೆ ಹರಳುಗಟ್ಟಲು ಇನ್ನೇನು ಬೇಕು ಹೇಳಿ ?

ಅದರಲ್ಲೂ ನಿನ್ನೆಯ ದಿನ ನನ್ನ ಪಾಲಿಗೆ ಅತೀವ ಖುಷಿ ಕೊಟ್ಟಿತು. 7ನೇ ತರಗತಿವರೆಗೆ ಊರ ಗುಡ್ಡದ ಸರಕಾರೀ ಶಾಲೆಯಲ್ಲಿ ಅವಿನಾಭಾವವಾಗಿ ಬೆಸೆದುಕೊಂಡ 8 ಮಂದಿ ಗೆಳೆಯರಲ್ಲಿ ಒಬ್ಬನ ಮದುವೆಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದೆ. 6 ಮಂದಿಗೆ ಈಗಾಗಲೇ ಮದುವೆಯಾಗಿದ್ದಾರೂ ಕೇವಲ ಒಬ್ಬನ ಮದುವೆಗಷ್ಟೇ ಹೋಗಲು ಸಾಧ್ಯವಾಗಿತ್ತು. ಸೇರಿದ್ದ ಮಿಕ್ಕ ಗೆಳೆಯರೊಡನೆ ‘ಪುರಾತನ’ ಕಾಲದ ಮೆಲುಕುಗಳು ಮತ್ತಷ್ಟು ಮಗುತನವನ್ನು ನನ್ನೊಳಗೆ ತುಂಬಿ ಅನಿರ್ವಚನೀಯ ಖುಷಿಯನ್ನು ಮೊಗೆದು ಕೊಟ್ಟಿತು..

ದೂರದೂರಿನ ಸಾಫ್ಟ್ವೇರ್ ಬದುಕು ಮತ್ತೆ ಕರೆಯುವವರೆಗೆ ಅಮ್ಮನ ಮಡಿಲ ಮಗುವಾಗಬೇಕು… ಅಲ್ಲಿವರೆಗೆ ನಿಮ್ಮ ‘ಅಂತರ’ ‘ಜಾಲ’ದಿಂದ ಸ್ವಲ್ಪ ದೂರವೇ ..

ಹುಸೇನಿ ~

Leave a comment

ತೊರೆಯ ತೀರದ ನೆನಪುಗಳು · ವೊಹ್ ಕಾಗಝ್ ಕಿ ಕಷ್ತಿ ವೊಹ್ ಬಾರಿಶ್ ಕಾ ಪಾನೀ.. · ಸಣ್ಣ ಕತೆ · ಹುಸೇನಿ ಬರಹಗಳು

ವೊಹ್ ಕಾಗಝ್ ಕಿ ಕಷ್ತಿ ವೊಹ್ ಬಾರಿಶ್ ಕಾ ಪಾನೀ..

kagaj-1

ಕೆಲವೊಮ್ಮೆ ಎಲ್ಲದಕ್ಕೂ ಅತೀತವಾಗಿ ಬದುಕು ಕಾಡುತ್ತದೆ. ಅಪರಾತ್ರಿಗಳಲ್ಲಿ ಎದ್ದು ಕೂರುತ್ತೇನೆ, ಸಾಂತ್ವನಕ್ಕೆ ಮತ್ತದೇ ಹೆಂಚಿನ ಮನೆ, ಅಡಿಕೆ ತೋಟ, ಅದರಾಚೆಗಿನ ತೋಡು, ತೋಡು ಬದಿಯ ಪೇರಳೆ ಮರಗಳು, ಮಾವಿನ ಮರ, ಹಲಸಿನ ಮರ , ಕೊಕ್ಕೋ ಮರ, ಸೀತಾಫಲ, ನೇರಳೆ… ಪಕ್ಕದಲ್ಲೇ ಇರುವ ಆಟದ ಬಯಲು, ಅಡಿಕೆ ಗರಿಯ ಬ್ಯಾಟು, ರಬ್ಬರ್ ಚೆಂಡು, ಕೊಡ ತುಂಬಾ ನೀರು, ಆ ಉರಿ ಬಿಸಿಲು… ಆ ಹರಿದ ಬ್ಯಾಗು, ಬಟನ್ ಇರದ ಬಿಳಿ ಅಂಗಿ, ಕಲರ್ ಮಾಸಿ ಹೋದ ನೀಲಿ ಚಡ್ಡಿ, ಕಂಠಪಾಠದ ಮಗ್ಗಿ… ಇವೆಲ್ಲ ಬೇಕೆನಿಸುತ್ತದೆ. ದೊಡ್ದವನಾದಂತೆ ಬಾಲ್ಯಕ್ಕೆ ಮರಳುವ ಅಧಮ್ಯ ತುಡಿತ, ಇಷ್ಟು ವರ್ಷದ ಒಡನಾಟದ ನಂತರವೂ ಈ ಮೆಟ್ರೋ ಸಿಟಿಯು ನನಗೆ ಆಪ್ತವಾಗಲಿಲ್ಲ. ಇಲ್ಲಿರುವುದೆಲ್ಲವೂ ನನ್ನದಲ್ಲ ಎಂಬ ಕೊರಗು, ಅಥವಾ ಈ ಅತಿವೇಗಕ್ಕೆ ಒಗ್ಗಿಕೊಂಡ ಬದುಕಿನೊಂದಿಗಿರುವ ಅಸಮಾಧಾನ. ಇಲ್ಲಿಗೆ ಸಲ್ಲುವುದೇ ಇಲ್ಲ ನಾನು. ಒಂಟಿಯಾದಂತೆಲ್ಲ ಮತ್ತಷ್ಟು ಆಳದ ಪಾತಾಳಕ್ಕೆ ಇಳಿಯುತ್ತೇನೆ. ಅಲ್ಲಿ ಮೌನದ ಕಿವಿಗುಚ್ಚುವ ಕರಾಡತನ ಮತ್ತಷ್ಟು ಅಸಹನೀಯವೆನಿಸುತ್ತದೆ. ವ್ಯಾಕುಲಚಿತ್ತ ಮನಸ್ಸು ಮತ್ತೆ ಹಂಬಲಿಸುವುದೊಂದೇ .. ವೊಹ್ ಕಾಗಝ್ ಕಿ ಕಷ್ತಿ.. ವೊಹ್ ಬಾರೀಶ್ ಕ ಪಾನಿ.
kagaj-2
ಖುಷಿ ತಾನಾಗಿ ಒಲಿಯುವ ಬಾಲ್ಯಕ್ಕೂ, ಖುಷಿಯನ್ನು ಹುಡುಕಿ ಹೋಗಬೇಕಾದ ಅನಿವಾರ್ಯತೆಯ ಈ ಕಾಲಕ್ಕೂ ತುಂಬಾ ವ್ಯತ್ಯಾಸವಿದೆ. ಬಾಲ್ಯವೆಂದರೆ ಬದುಕು ಹರಳುಗಟ್ಟುವ ಕಾಲ. ಅಲ್ಲಿನ ಆಟ, ಪಾಠ, ಮುಗ್ದತೆ, ಕುತೂಹಲ, ಭಯ, ತುಂಟಾಟ, ಮೋಜು, ಮಸ್ತಿಗಳೆಲ್ಲಾ ಖುಷಿಯನ್ನು ಮೊಗೆಮೊಗೆದು ಕೊಡುತ್ತವೆ. ಅಲ್ಲಿ ಖುಶಿಯಾಗಲು ನಿರ್ದಿಷ್ಟ ಕಾರಣ ಬೇಕಿಲ್ಲ. ಬೇಲಿ ಹಾರಿ ಗೇರು ಬೀಜ ಕದಿಯುವಾಗ ತೋಟದಾಳು ಬಂದು ಓಡಿಸಿದರೂ ಖುಷಿ, ನೆಲ್ಲಿಕಾಯಿ ಹುಡುಕಿ ಕಾಡೇರಿದಾಗ ಜಾರಿ ಬಿದ್ದು ಕಾಲಿಗೆ ಪೆಟ್ಟಾದರೂ ಖುಷಿ, ತಮ್ಮನಿಗೆ ಕೀಟಲೆ ಮಾಡಿ ಅಮ್ಮನಿಂದ ಬೆನ್ನಿಗೆರೆಡು ಸಿಕ್ಕರೂ ಖುಷಿ, ಊಟ ಮಾಡದ ಹಠದಲ್ಲಿ ಬರಸೆಳೆದು ಮುತ್ತುಗೆರೆದು ಅಮ್ಮನ ಕೈತುತ್ತಿನಲ್ಲಿ ಎಂಥಾ ಖುಷಿ, ಮನೆಲೆಕ್ಕ ಮಾಡದೆ ಟೀಚರ್ ಬೆತ್ತ ತೆಗ್ಯೋ ಮುನ್ನವೇ ಕೈ ಚಾಚುವಾಗ್ಲೂ ಖುಷಿ, ಸಂಜೆ ತೋಡಲ್ಲಿ ಹುಟ್ಟುಡುಗೆಯಲ್ಲಿ ಈಜಾಡುವಾಗಲೂ ಖುಷಿ, ಅಲ್ಲಿ ಪ್ರತೀ ಒಂದು ಕ್ಷಣವು ಖುಷಿಯ ವಾಗ್ದಾನದೊಂದಿಗೆ ಬರುತ್ತದೆ. ಆ ಖುಶಿಗಳನ್ನೆಲ್ಲ ಇಲ್ಲಿ ಎಲ್ಲಿ ಹುಡುಕಲಿ?. kagaj-3 ಹಬ್ಬದ ಹೊಸ ಉಡುಗೆಯನ್ನು ಮತ್ತೆ ಮತ್ತೆ ನೋಡಿ, ಮೂಸಿ, ಮೈ ಮೇಲೆ ಇಟ್ಟು ಕನ್ನಡಿ ನೋಡುವಾಗಿನ ಖುಷಿ ತಿಂಗಳಿಗೊಂದು ಖರೀದಿಸುವ ಬ್ರಾಂಡೆಡ್ ಡ್ರೆಸ್-ಗಳಲ್ಲಿ ಹೇಗೆ ಹುಡುಕಲಿ?, ಸ್ಕೂಲಿನ ಖಾಲಿ ಬೆಂಚಿನ ತುದಿಯಲ್ಲಿ ಕೂತು ಬೆಂಚನ್ನು ಮೇಲೆಕ್ಕೆತ್ತುವ ಖುಷಿ ಸಾಫ್ಟ್ವೇರ್ ಕಂಪೆನಿಗಳ ಅರಾಮಿ ಚೆಯರ್ಗಳಲ್ಲಿ ಹೇಗೆ ಹುಡುಕಲಿ?, ಗೇರು ಬೀಜದ ಮರ, ಮಾವಿನ ಮರಗಳಿಗೆ ಚಕಚಕನೆ ಹತ್ತಿ ಹಣ್ಣು ಕೊಯ್ಯುವ ಖುಷಿಯನ್ನು, ಹಿತ್ತಿಲಿನ ಮರಕ್ಕೆ ಹತ್ತಿ ಮಂಗನಾಟವಾಡಿದ ಖುಷಿಯನ್ನು, ಕರೆಂಟಿರದ ನಮ್ಮೂರ ಸರ್ಕಾರಿ ಶಾಲೆಯ ಮರದ ಕೆಳಗಿನ ಕನ್ನಡ ಪಾಠದ ಖುಷಿಯನ್ನು ಈ ಕಾಂಕ್ರೀಟ್ ಕಾಡಲ್ಲಿ ಎಲ್ಲಿ ಹುಡುಕಲಿ?, ಕ್ರಿಕೆಟ್ ಆಟದಲ್ಲಿ, ಬೆಟ್ಟ ಹತ್ತುವಾಗ, ಮಳೆನೀರಿನ ಪಾಚಿಗೆ ಜಾರಿ ಬಿದ್ದು ಏಟು ಮಾಡಿಕೊಳ್ಳುವ ಖುಶಿಯನ್ನು ಈ ಫುಟ್ಬಾತ್ ಮತ್ತು ಆಫೀಸ್ ಕಾರಿಡಾರ್ಸಲ್ಲಿ ಹೇಗೆ ಹುಡುಕಲಿ?, ಹೊಸ ಆಟಿಕೆಯ ಆಟದ ಮಧ್ಯೆ ಅದರೊಳಗೇನಿದೆ ಎಂಬ ಕುತೂಹಲಕ್ಕೆ ಜೋತು ಬಿದ್ದು ಬಿಚ್ಚಿಡುವ, ಮತ್ತೆ ಪೋಣಿಸಲಾಗದ ಖುಶಿಯನ್ನು ಈ ಲ್ಯಾಪ್ಟಾಪ್, ಡೆಸ್ಕ್ಟಾಪ್ ಮತ್ತು ಮ್ಯಾಕ್ ಗಳಲ್ಲಿ ಹೇಗೆ ಹುಡುಕಲಿ?, ಶಾಲೆಗೆ ಚಕ್ಕರ್ ಹಾಕುವ ನೆಪದ ಹೊಟ್ಟೆನೋವಿನ, ಅಮ್ಮನ ಕಹಿ ಕಷಾಯದ ಖುಷಿಯನ್ನು ರಜಕ್ಕೆ ಒಂದು ತಿಂಗಳು ಮುಂಚೆ ಹೇಳಬೇಕಾದ ಐಟಿ ಕಂಪೆನಿಯ ಹಾಲಿಡೇ ಮಾನೇಜ್ಮೆಂಟ್ಗಳಲ್ಲಿ ಹೇಗೆ ಹುಡುಕಲಿ?, ಸೈಕಲ್ ಚಕ್ರವೊಂದನ್ನು ಕೋಲಿನಲ್ಲಿ ಬಡಿಯುತ್ತಾ ರಸ್ತೆಯಲ್ಲಿ ಓಡಿಸಿದ್ದ ಖುಷಿಯನ್ನು, ಉಜಾಲದ ಬಾಟಲಿಗೆ ಚಪ್ಪಲಿಯ ಚಕ್ರ ಮಾಡಿ ಊರಿನ ಗಲ್ಲಿಗಳಲ್ಲಿ ಮೆರವಣಿಗೆ ಹೋದ ಖುಷಿಯನ್ನು ಕಂಪೆನಿ ಕ್ಯಾಬ್-ಗಳಲ್ಲಿ ಹೇಗೆ ಹುಡುಕಲಿ?, ಮನೆ ಮುಂದಿನ ಹುಳಿ ಮರದಲ್ಲಿ ಉಯ್ಯಾಲೆಯಾಡಿದ ಖುಷಿಯನ್ನು, ಮಣ್ಣಲ್ಲೇ ಜಾರುಬಂಡಿಯ ಖುಷಿಯನ್ನು ಈ ಮೆಟ್ರೋದ ಪಾರ್ಕುಗಳಲ್ಲಿ ಹೇಗೆ ಹುಡುಕಲಿ?, ಮಕ್ಕಳ ದಿನಾಚರಣೆಗೆ ಹಾಕಿದ ಬಣ್ಣ ಬಣ್ಣದ ವೇಷದ ಖುಷಿಯನ್ನು, ಈದ್ ಮಿಲಾದಿಗೆ ಊರ ಜನರ ಮುಂದೆ ಹಾಡಿದ ಖುಷಿಯನ್ನು ಇಲ್ಲಿನ ಇವೆಂಟ್ಸ್-ಗಳಲ್ಲಿ, ಫೌಂಡೇಷನ್ ಡೇಗಳಲ್ಲಿ ಹೇಗೆ ಹುಡುಕಲಿ?, ಜೇನು ಕೊಪ್ಪೆಗೆ ಕಲ್ಲು ಹೊಡೆದದ್ದು, ಗಿಳಿ ಗೂಡಿಗೆ ಇಣುಕಿ ನೋಡಿದ್ದು, ಪಾರಿವಾಳದ ಗೂಡಿಂದ ಮೊಟ್ಟೆ ಕದ್ದದ್ದು, ನಾಟಿ ಕೋಳಿಯ ಹಸಿ ಮೊಟ್ಟೆಯನ್ನು ಕುಡಿದದ್ದು, ಅಮ್ಮ ಕೆರೆದಿಟ್ಟ ಬಿಸಿ ಹಸು ಹಾಲನ್ನು ಕುಡಿದದ್ದು, ಅಂಗಳದಲ್ಲಿ ಮನೆ ಮಾಡಿದ್ದು, ಮದುವೆ ಮಾಡಿ ಆಡಿದ್ದು, ಮಣ್ಣುಂಡೆ ಮಾಡಿ ಹಂಚಿದ್ದು, ಮಾವಿನ ಮಿಡಿಯನ್ನು ಉಪ್ಪಿನೊಂದಿಗೆ ಮುಕ್ಕಿ ತಿಂದದ್ದು, ಬೆಕ್ಕಿನ ಮರಿಗೆ ರಟ್ಟಿನ ಮನೆ ಮಾಡಿ ಕೊಟ್ಟದ್ದು, ಕಳ್ಳ ಪೋಲೀಸ್ ಆಟದಲ್ಲಿ ಮೋಸ ಮಾಡಿದ್ದು, ಮಕ್ಕಳನ್ನೆಲ್ಲ ಸಾಲಾಗಿ ಅಂಗಿಯ ತುದಿಗೆ ಹಿಡಿಯಲು ಹೇಳಿ ಬಸ್ ಆಟದಲ್ಲಿ ಡ್ರೈವರ್ ಆದದ್ದು, ಮಳೆಗಾಲದಲ್ಲಿ ನೀರಲ್ಲಿ ಮಜಾ ಮಾಡಿದ್ದು, ರಾತ್ರಿ ಕಾಲು ಹುಳ ತಿಂದ ನೋವಿಗೆ ಅತ್ತಿದ್ದು, ಜೋರು ಗಾಳಿಗೆ ಕೊಡೆ ಹಿಮ್ಮುಖವಾದಾಗ ಅದರಲ್ಲಿ ನೀರು ತುಂಬಿದ್ದು… ಈ ಖುಶಿಗಳನ್ನೆಲ್ಲ ಇಲ್ಲಿ ಹೇಗೆ ಹುಡುಕಲಿ ?. ಅದೆಲ್ಲಕ್ಕಿಂತ ಹೆಚ್ಚಾಗಿ ಅಮ್ಮನ ಎದೆಗೂಡಿನ ಕಾವಿನ ಖುಶಿಯನ್ನೂ, ಮಡಿಲ ಸಾಂತ್ವನದ ಖುಶಿಯನ್ನೂ ಇಲ್ಲಿ ಹೇಗೆ ಹುಡುಕಲಿ?.

ಮನ ಬಾಲ್ಯದ ಓಣಿಯೇರಿದಾಗ ಎಲ್ಲೆ ಮೀರಿ ಚಡಪಡಿಸುತ್ತದೆ. ಯಾವ ಚಿಂತೆ,ನಿರೀಕ್ಷೆ ,ಅಸೆ ಏನೂ ಇಲ್ಲದೆ ಬಂಧನ ವಿಲ್ಲದೆ ಹಾರಾಡುತ್ತ ಕಳೆದ ಆ ದಿನಗಳು…
ನಾ ದುನಿಯಾಂಕ ಗಮ್ ಥಾ.. ನಾ ರಿಶ್ತೊಂಕೆ ಬಂಧನ್ ಬಡೀ ಖೂಬ್ ಸೂರತ್ ಥಿ ವೋ ಝಿಂದಗಾನಿ…
ಈಗಿನ ಸುಂದರ ಮುಖವಾಡದ, ಕೃತಕ ನಗುವಿನ, ಜವಾಬ್ದಾರಿಗಳ ಕುಲುಮೆಯಲ್ಲಿ ಪ್ರತೀದಿನ ನರಳಬೇಕಾದ, ನನಸಾಗದ ಕನಸುಗಳ ಬೆನ್ನೇರಿ ಓಡುವ ಹುಂಬತನದ ಯವ್ವನ ಉಸಿರುಗಟ್ಟಿಸುವಾಗ ಮತ್ತೆ ಕವಿವಾಣಿ ನೆನಪಾಗುತ್ತದೆ…
ಯೆ ದೌಲತ್ ಭಿ ಲೇಲೋ, ಯೆ ಶುಹ್ರತ್ ಭಿ ಲೇಲೋ, ಭಲೇ ಛೀನ್ ಲೋ ಮುಜ್ಹ್ ಸೇ ಮೇರೀ ಜವಾನೀ , ಮಗರ್ ಮುಜ್ಹ್ ಕು ಲೌಟಾದೋ ಬಚ್ಪನ್ ಕಾ ಸಾವನ್, ವೊಹ್ ಕಾಗಜ್ ಕಿ ಕಶ್ತೀ ವೊಹ್ ಬಾರಿಶ್ ಕಾ ಪಾನೀ”

ಹುಸೇನಿ ~

Leave a comment

ಊರ ಗುಡ್ಡದ ಹಾದಿಯಲ್ಲಿ... · ತೊರೆಯ ತೀರದ ನೆನಪುಗಳು

ಊರ ಗುಡ್ಡದ ಹಾದಿಯಲ್ಲಿ…

children

… ಅಮ್ಮನ ಕೊನೆಯ ಕೋಪದ ಕೂಗಿಗೆ ಎದ್ದೇಳುವುದು.. ದಾರಿಯಲ್ಲಿ ಕಾಯುವ ಸಹಪಾಠಿಗಳು .. ಆಮೇಲೆ ಊರ ಗುಡ್ಡದ ಹಾದಿಯಲ್ಲಿ ನಾಗಾಲೋಟ.. ಸ್ಲೇಟಿನಲ್ಲಿ ಬರೆದ ಮೊದಲ ಅಕ್ಷರ.. ಚಿಕ್ಕ ಚಿಕ್ಕ ತಪ್ಪುಗಳನ್ನು ಸುಲಭವಾಗಿ ಮಾಯಿಸಿ ಬಿಡಬಹುದು ಎಂಬ ಪಾಠವನ್ನು ನಮಗೆಲ್ಲಾ ಕಲಿಸಿದ್ದು ಅದೇ ಸ್ಲೇಟು ಅಲ್ವಾ ?. ವರ್ಷದ ಎಷ್ಟು ಕಳೆದರೂ ಆ ಕಾಲುದಾರಿಗಳು, ಆಟದ ಅಂಗಳಗಳು ಮತ್ತೆ ಮತ್ತೆ ಕರೆಯುತ್ತಿದೆ, ಆಡಿ ನಲಿದ ಆ ತರಗತಿ ವಠಾರಗಳು, ಬೊಬ್ಬೆ ಹೊಡೆಯುತ್ತಿದ್ದ ತರಗತಿಗಳು ಅದೆಲ್ಲವನ್ನೂ ಅನುಭವಿಸಲು.. ಆ ಬೆಂಚಲ್ಲೊಮ್ಮೆ ಕುಳಿತುಕೊಳ್ಳಲು.. ಆ ನನ್ನೆಲ್ಲಾ ಪುಂಡ ಗೆಳೆಯರೊಂದಿಗೆ ಇನ್ನೂ ಒಂದು ಬಾಲ್ಯಕಾಲ ಸಿಗಬಹುದೇ….?!!!. ಮೊದಲ ಬಾರಿಗೆ ಪೆನ್ಸಿಲಿನಲ್ಲಿ, ಕೈವಾರದಲ್ಲಿ ಡೆಸ್ಕ್ ಮೇಲೆ ಗೀಚಿದ ನನ್ನ ಹೆಸರು ಇನ್ನೂ ಅಲ್ಲೇ ಇರಬಹುದಾ ?….

ಅಂದ ಹಾಗೆ 12 ಗಂಟೆಗೆ ಒಂದು ಇಂಟರ್ವ್ಯೂ ಇದೆ. ಓದಕ್ಕೆ ಅಂತ ಕೂತಿದ್ದೇನೆ. ಬೆಳ್ಳಂಬೆಳಿಗ್ಗೆ 16 ಮಿಸ್ ಕಾಲ್ ಮಾಡಿ ಎಬ್ಬಿಸಿದವಳ ಒತ್ತಾಯಕ್ಕೆ… 🙂
ಈ ಮೌಸು, ಕೀ ಬೋರ್ಡು, ಮೊನಿಟರೂ, ಜಾವ, ಯುನಿಕ್ಷ್.. ಕರ್ಮ ಕಾಂಡಕ್ಕಿಂತ ಹರಿದ ನೀಲಿ ಬಿಳಿ ಅಂಗಿ.. ಹರಕಲು ಜೋಳಿಗೆ ಬ್ಯಾಗು.. ಪಾದದ ಅಂಚಲಿ ಸವೆದ ಚಪ್ಪಲಿ.. ಅರ್ದಂಬರ್ದ ಮುಗಿಸುವ ಮನೆ-ಲೆಕ್ಕಗಲೇ ವಾಸಿ ಅಂತ ಅವಳಿಗೇನು ಗೊತ್ತು…

~ ಹುಸೇನಿ

Leave a comment

ಏ ರೂಹಿ...! ನೀ ತಾಯಿಯಾಗುವಾಗೆಲ್ಲ... · ತೊರೆಯ ತೀರದ ನೆನಪುಗಳು · ಯಾ ರೂಹಿ ....

ಏ ರೂಹಿ…! ನೀ ತಾಯಿಯಾಗುವಾಗೆಲ್ಲ…

Huseni

…. ನೀನು ಮಗುವಾಗ್ತಾ ಇದ್ದೀಯಾ …
…. ನೀನು ತಾಯಿಯಾದಂತೆಲ್ಲಾ ನಾನು ಮಗುವಾಗುತ್ತಿದ್ದೇನೆ…

ಹೌದು.. ನೀನು ಮಮತೆಯ ಮಡಿಲಾದಂತೆಲ್ಲಾ ನಾನು ಮಗುವಾಗುತ್ತೇನೆ… ಮತ್ತೆ ಮತ್ತೆ.. ಹಾಗೆ ಮಗುವಾದಾಗೆಲ್ಲ ನನ್ನ ಮಗುತನ ಸುಮ್ಮನೆ ಗರಿ ಬಿಚ್ಚುತ್ತದೆ.. ಮಗುತನದಲ್ಲೇ ಏನೇನೋ ಹುಚ್ಚು ಆಸೆಗಳು..
ಪೆಪ್ಪರ್ಮೆಂಟಿಗೆ ಸೋಗುಹಾಕಿ ಅತ್ತು ಕರೆದು ರಚ್ಚೆ ಹಿಡಿದು ಇಷ್ಟಗಲ ಬೊಚ್ಚು ಬಾಯಲ್ಲಿ ಆಆ ಅಂತ ಅಳಬೇಕು. ಬೆಳಿಗ್ಗೆ ನಿನ್ನ ಕೂಗನ್ನು ಲೆಕ್ಕಿಸದೆ ಹಾಗೆ ಮಲಗಬೇಕು, ನೀ ಮೂರು ಬಾರಿ ಎಬ್ಬಿಸಿ ಹೋದರು ಅಲುಗಾಡದೆ ರಗ್ಗು ಹೊದ್ದು ಮತ್ತೆ ಮಲಗಬೇಕು, ಆಮೇಲೆ ಕೋಪದಲ್ಲೇ ನೀ ಬಂದು ದಿಂಬನ್ನೂ ರಗ್ಗನ್ನೂ ಬಲವಂತವಾಗಿ ಬಿಸಾಕಿ ನನ್ನನ್ನು ಹೆಗಲ ಮೇಲೆ ಎತ್ಕೊಂಡು ಬಾತ್ರೂಮಲ್ಲಿ ಇಳಿಸಿ ಬ್ರಶ್ಶಿಗೆ ಪೇಸ್ಟ್ ಹಾಕಿ ಬಾಯಿಗೆ ತುರುಕಿ ಹೋಗಿ ಒಂದೈದು ನಿಮಿಷದ ನಂತರ ಬಂದು ನೋಡುವಾಗ ಹಾಗೆಯೆ ಬಾಯಲ್ಲಿ ಬ್ರಶ್ಶಿಟ್ಟು ಕೂತಲ್ಲೇ ನಿದ್ದೆ ಮಾಡಬೇಕು.. ಆಮೇಲೆ ನಿನ್ನ ಕೈಯಾರೆ ಹಲ್ಲುಜ್ಜಿಸಬೇಕು. ಹೊಟ್ಟೆನೋವೆಂಬ ಸುಳ್ಳು ನೆಪ ಹೇಳಿ ಶಾಲೆಗೇ ಚಕ್ಕರ್ ಹಾಕಬೇಕು. ಆಮೇಲೆ ಕಹಿ ಕಷಾಯದೊಂದಿಗೆ ನೀ ಬಂದಾಗ ಶರ್ಟು ಎತ್ತಿ ಹೊಟ್ಟೆ ನೋವೇ ಇಲ್ಲ ನೋಡು ಅಂತ ಮುಗುಮ್ಮಾಗಿ ಸಾಗ ಹಾಕಬೇಕು. ನೀ ತಟ್ಟೆಯಲ್ಲಿ ಊಟ ಹಿಡಿದು ಬಂದಾಗೆಲ್ಲ ನಿನ್ನ ಕೈಗೆ ಸಿಗದೇ ಓಡಿಹೋಗಬೇಕು, ನೀ ಅಟ್ಟಾಡಿಸಿ ಬಾಯಿಗೆ ತುರುಕುವ ಅನ್ನವನ್ನೆಲ್ಲ ಅರ್ಧ ತಿಂದು ಅರ್ಧ ಪಿಚಕ್ಕನೆ ಉಗುಳಿ ನಿನ್ನ ಬಟ್ಟೆಯನ್ನೆಲ್ಲ ಕೊಳೆಯಾಗಿಸಬೇಕು. ಬಾಗಿಲ ಸಂಧಿಯಲ್ಲಿ ಅಡಗಿ ನೀ ಒಳ ಬರುವಾಗ ಬ್ಹೋ ಅಂತ ನಿನ್ನ ಹೆದರಿಸಬೇಕು. ಅಟ್ಟದಲ್ಲಿ ಅಡಗಿ ಕೂತು ನೀ ಹೆದರಿ ಹುಡುಕುವ ಪರಿಯ ನೋಡಬೇಕು. ನೀನು ಮನೆಕೆಲಸದಿಂದ ದಣಿವಾದಾಗ ಬಣ್ಣದ ಕಾಗದವನ್ನು ನೀರಲ್ಲಿ ಹಾಕಿ ಬಾಟಲಿಯಲ್ಲಿ ತುಂಬಿಸಿ ಬಣ್ಣ ಬಣ್ಣದ ಶರಬತ್ತು ನಿನಗೆ ಕೊಡಬೇಕು. ಭಾನುವಾರದ ದಿನ ಹಬ್ಬದ ಕುಶಿಯಲ್ಲಿ ನಿನ್ನ ಜೊತೆ ಜೊತೆಗೇ ಇರಬೇಕು. ನೀ ತೆಂಗಿನ ಕಾಯಿ ಒಡೆಯುವಾಗ ಅದರ ನೀರಿಗೆ ಓಡಿ ಬರಬೇಕು. ಆ ಕಾಯಿಯನ್ನು ತುರಿದ ಮೊದಲ ಭಾಗವನ್ನೆತ್ತಿ ಬಾಯಿಗಿಡಬೇಕು. ಕೋಳಿ ಸಾರಿನ ದಿನ ನಿನ್ನ ಜೊತೆ ಅಡುಗೆಮನೆಯಲ್ಲೇ ಗಿರಕಿ ಹೊಡೆಯಬೇಕು. ಒಲೆಯಿಂದಲೇ ಒಂದು ಚಿಕ್ಕ ತುಂಡು ಎತ್ತಿ ನೀ ಕೊಟ್ಟಾಗ ಅದನ್ನು ತಿಂದು ಕೈಯನ್ನೂ ಚಪ್ಪರಿಸಬೇಕು. ಗೆಳೆಯರೊಂದಿಗೆ ಜಗಳ ಮಾಡ್ಕೊಂಡು ಇದ್ದ ಎರಡು ಬಿಳಿ ಅಂಗಿಯಲ್ಲಿ ಒಂದನ್ನು ಹರಿದು ಬಂದು ಪೆಚ್ಚು ಮೋರೆ ಹಾಕಿ ನಿಲ್ಲಬೇಕು. ನೀನದನ್ನ ನೋಡಿ ಸಿಟ್ಟಿನಿಂದ ಕಣ್ಣು ಕೆಂಪು ಮಾಡುವುದನ್ನು ನೋಡಬೇಕು. ಮಳೆಗಾಲದಲ್ಲಿ ದಾರಿಯಲ್ಲಿರುವ ಹೊಂಡಗಳ ಕೆಸರನ್ನು ಬೆನ್ನುವರೆಗೂ ಮೆತ್ತಿಸಿಕೊಂಡು ಬರಬೇಕು. ಹಾಗೆ ಬರುವಾಗೆಲ್ಲ ನನಗೂ ಮಳೆಗೂ ಬಯ್ಯುತ್ತಾ ಸೆರಗಿನಲ್ಲೆ ತಲೆ ಒರೆಸಬೇಕು. ಹುಳ ತಿಂದ ಕಾಲಿಗೆ ನಿನ್ನ ಕಯ್ಯಾರೆ ಸೀಮೆ ಎಣ್ಣೆ ಹಚ್ಚಬೇಕು. ಸಂಜೆ ಸ್ನಾನಕ್ಕೆ ನೀ ಕರೆವಾಗೆಲ್ಲ ಭೂಮಿಗೆ ಬೇರು ಬಿಟ್ಟವನಂತೆ ಕದಲದೆ ಕೂರಬೇಕು, ಕಾದು ಸುಸ್ತಾಗಿ ನೀ ನನ್ನನ್ನೆತ್ತಿ ಬಚ್ಚಲು ಮನೆಗೆ ಓಡುವಾಗ ಕೊಸರಿ ತೊಳಲಾಡಿ ಜಾರಿ ಬಿದ್ದು ಎದ್ದು ಓಡಿಹೊಗಬೇಕು. ಮಳೆಗಾಲಕ್ಕೆ ನೀ ಮಾಡಿಟ್ಟ ಹಲಸಿನ ಪಪ್ಪಡಕ್ಕಾಗಿ ಅದು ಮುಗಿಯುವವರೆಗೂ ಕಾಡಿಸಬೇಕು. ಆಟವಾಡುವಾಗ ಕಾಲು ಗುದ್ದಿ ತೋರು ಬೆರಳಿನ ಉಗುರು ಕಿತ್ತು ಹೋಗಿ, ಅದು ಒಣಗುವ ಮೊದಲೇ ಮತ್ತೊಮ್ಮೆ ಇನ್ನೊಂದು ಕಾಲಿಗೆ ಗಾಯ ಮಾಡ್ಕೊಂಡು ನಿನ್ನ ಹತ್ರ ಬೈಸ್ಕೋಬೇಕು. ರಾತ್ರಿ ಗುಡುಗಿಗೆ ನಿನ್ನ ಮಡಿಲೊಳಗೆ ಬಚ್ಚಿಟ್ಟುಕೊಳ್ಳಬೇಕು. ಆ ತೊರೆಯಲ್ಲಿ ನೀ ಬಟ್ಟೆ ಒಗೆಯುವಾಗ, ನಿನ್ನ ಸೀರೆಯಲ್ಲಿ ಮೀನು ಹಿಡಿದು ಬಾಟಲಿಯಲ್ಲಿ ಹಾಕಿ ರಾತ್ರಿಯಿಡೀ ಅದನ್ನು ನೋಡುವಾಗ ಹತ್ತಿರ ಬಂದು ಮುಗುಳ್ನಕ್ಕು ತಲೆ ನೇವರಿಸಿ ನಿಯಾಳಿಸಬೇಕು. ಗುಮ್ಮನ ನೋಡಿ ಹೆದರಿ ಅಳಬೇಕು, ಆಗ ನೀ ‘ಅಲ್ಲಿ ಎನೂ ಇಲ್ಲ ರಾಜ.. ‘ ಅಂತೇಳಿ ಮಡಿಲಲ್ಲಿ ಬರಸೆಳೆದು ಅಪ್ಪಿ ಮುದ್ದಾಡುವ ಸವಿಯನ್ನು ಅನುಭವಿಸಬೆಕು. ನಿನ್ನ ಹತ್ತಿರ ಮಲಗಲು ಇಲ್ಲದ ಹೊಟ್ಟೆನೋವು, ತಲೆನೋವಿನ ನೆಪ ಹುಡುಕಬೇಕು. ಕರೆಂಟಿಲ್ಲದ ರಾತ್ರಿ ನಿನ್ನ ಕತೆ ಕೇಳಬೇಕು. ನಿನ್ನ ಲಾಲಿಹಾಡಿಗೆ ತಲೆದೂಗಿ ನಿನ್ನ ಪ್ರೀತಿಯ ಮಡಿಲಲ್ಲಿ ನಾ ಬೆಚ್ಚಗೆ ನಿದ್ರಿಸಬೇಕು….

ನನ್ನ ಕೋಪಕ್ಕೆ ನೀ ಮಣಿಯುವಾಗ, ನನ್ನ ಆಸೆಗಳಿಗೆ, ಬಯಕೆಗಳಿಗೆ ನೀರೆರೆಯುವಾಗ, ನನ್ನ ಅಂತರಂಗದ ಕತ್ತಲ ಕೋಣೆಗೆ ದೀಪ ಹಚ್ಚುವಾಗ, ನಿನ್ನೆಲ್ಲ ಕನಸುಗಳ ಮಧ್ಯೆ ನನ್ನ ಕನಸುಗಳನ್ನೂ ಸಲಹುವಾಗ, ಅದಕ್ಕಾಗಿ ತುಡಿಯುವಾಗ, ನನ್ನೆಲ್ಲಾ ನೋವನ್ನೂ, ನಲಿವನ್ನೂ ನಿನ್ನದೇ ಅಂತ ಮಡಿಲೊಡ್ಡಿ ಸಂತೈಸುವಾಗ ನಿನ್ನಲ್ಲಿ ತಾಯಿಯನ್ನು ಕಾಣುತ್ತೇನೆ..
ಏ ರೂಹಿ…!
ನೀ ತಾಯಿಯಾಗುವಾಗೆಲ್ಲ ನಾ ಮಗುವಾಗುತ್ತೇನೆ.

~ಹುಸೇನಿ

Leave a comment

ಕಾಡುವ ಹನಿಗಳು · ಖಾಲಿ ಗೆರೆಯಲ್ಲಿ · ತೊರೆಯ ತೀರದ ನೆನಪುಗಳು · ಯಾ ರೂಹಿ .... · ಸಣ್ಣ ಕತೆ

ಖಾಲಿ ಗೆರೆಯಲ್ಲಿ….

line

…ಒಂದು ಪ್ರಶ್ನೆ, ಅದರ ಉತ್ತರದಲ್ಲಿ ಮೂಡಿದ ಮತ್ತೆರಡು ಪ್ರಶ್ನೆ, ಈಗ ಎಷ್ಟೆಂದರೆ ಒಳಗಿನ ದನಿಯೇ ಕೇಳದಷ್ಟು ಪ್ರಶ್ನೆಗಳ ಸಂತೆಗೂಡು, ಹೊರತೆಗೆದು ನಿರಾಳವಾಗಲಾರದ ವಿಕ್ಷಿಪ್ತ ಮನಸ್ಥಿತಿ, ಜೊತೆಗೂಡಿ ಮತ್ತಷ್ಟು ನಿರ್ಲಿಪ್ತತೆಗೆ ತಳ್ಳುವ ತಲ್ಲಣಗಳು, ದ್ವಂದ್ವಗಳು. ಉತ್ತರ ಕಂಡುಕೊಳ್ಳಲು ಪ್ರಯಾಣ ಆರಂಭಿಸಿ ದಿನಗಳೇ ಕಳೆಯಿತು. ಕಾಲವೇ ಎಲ್ಲದಕ್ಕೂ ಉತ್ತರ ಎಂದರು.. ಅಂಥದ್ದೊಂದು ಕಾಲಕ್ಕೆ ನಾನು ಕಾಯುತ್ತಿದ್ದೆ. ಬತ್ತಿದ ತೀರ ಮುಂಗಾರಿಗೆ ಕಾಯುವಂತೆ. ಪೊರೆ ಪೊರೆಗಳಾಗಿ ಸುತ್ತಿಕೊಂಡ ನನ್ನೆಲ್ಲಾ ಪ್ರಶ್ನೆಗಳನ್ನು ಹರವಿಟ್ಟು ಒಂದೊಂದೇ ಉತ್ತರವನ್ನು ತುಂಬಿಕೊಂಡು ಕೊನೆಗೆ ಶೂನ್ಯವಾಗುವ ಕಾಲದ ಅಧಮ್ಯ ಕಾತರಿಕೆಯದು. ಅಂಥದ್ದೊಂದು ಕಾಲ ಕೊನೆಗೂ ಆಗತವಾಯಿತು. ಆ ವಸಂತ ಕಾಲಕ್ಕೆ ನಿನ್ನ ಹೆಸರಿತ್ತು.

ನೀನು ಸಿಕ್ಕ ದಿನ ನಿನಗೆ ನೆನಪಿರಬಹುದು. ನೀನು ನುಡಿದ ಮೊದಲ ಮಾತು ನನ್ನಲ್ಲೊಳಗೆ ಸೃಜಿಸಿದ ಅನುಭಾವಶರಧಿಯ ಆಳ ಮತ್ತು ವಿಸ್ತಾರ ನಿನ್ನ ಊಹೆಗೆ ನಿಲುಕುವಂಥದ್ದಲ್ಲ.
ನಿನಗೆ ಗೊತ್ತು ನನ್ನದು ಯಾರ ಮುಂದೆಯೂ ತೆರೆದುಕೊಳ್ಳದ, ಸ್ಪಂದನೆಯ ಹಂಗೇ ಇಲ್ಲದಂತೆ ಪರಿತ್ಯಕ್ತ ಮನಸ್ಸು. ಗಿಜಿಗಿಡುವ ಸಂತೆಯೊಳಗಿನ ಅಬ್ಬರದ ಮಾತುಗಳ ನಡುವಿಂದ ಮೌನದ ಚಿಪ್ಪಿನೊಳಗೆ ತೂರಿ ಅಡಗಿಕೊಂಡು ಬಿಡಬೇಕೆನ್ನಿಸುವ ಮೌನ-ಮೋಹಿ ಅದು. ಆ ಮನಸ್ಸು ಇಗೀಗ ಸುಮ್ಮನೆ ನಗುವುದು ಕಲಿತಿದೆ. ನೀ ಸಿಕ್ಕಿದ ಘಳಿಗೆಯಿಂದ ನೋವುಗಳನ್ನು ಒಪ್ಪಿಕೊಂಡು ಅದನ್ನು ಮೀರಿಸುವ ದಿವ್ಯ ಶಕ್ತಿಯೊಂದನ್ನು ಅವಾಹಿಸಿಕೊಂಡಿದ್ದೇನೆ. ನನ್ನ ನೆನಪುಗಳು, ಭೂತಕಾಲದ ಅತಿರೇಕಗಳು ಜೀವಧಾತು ನಗುವನ್ನು ಕಸಿದುಕೊಳ್ಳದಂತೆ ಸಮದೂರ ಕಾಯ್ದುಕೊಂಡು ಹಸನ್ಮುಖಿಯಾಗಿ ಬದುಕುವ ಕಲೆಯನ್ನು ಪಡಕೊಳ್ಳುತ್ತಿದ್ದೇನೆ. ಕನಸುಗಳೊಂದಿಗಿನ ಬಡಿದಾಟದಲ್ಲಿ ನಾನೇ ಮೇಲುಗೈ ಹೊಂದಿದವನಂತೆ ಭಾಸವಾಗುತ್ತದೆ. ನನ್ನೊಳಗಿನ ದ್ವಂದ್ವಗಳ ಒಂದೊಂದೇ ಪೊರೆ ಕಳಚುತ್ತಾ ಸಾಗುತ್ತಿದ್ದೇನೆ…ಹಾಗೆ ಕಳಚುತ್ತಾ ಕಳಚುತ್ತಾ ಶೂನ್ಯತೆಯೆಡೆಗೆ ಹತ್ತಿರವಾಗುವಂತೆನಿಸುತಿದೆ ನನಗೆ. ಶೂನ್ಯದಲ್ಲಿ ಹುಟ್ಟಿದ ‘ನಾನು’ ಮತ್ತೆ ಶೂನ್ಯತೆಗೆ ತಲುಪುವಾಗಿನ ಅಮಿತ ಆನಂದ ಅವರ್ಣನೀಯ..

………. ಈ ಖಾಲಿ ಗೆರೆಯಲ್ಲಿ ಈ ಬಂಧಕ್ಕೊಂದು ಹೊಸ ಹೆಸರಿಡಬೇಕು ಅನ್ನಿಸಿದ ಮರುಕ್ಷಣ ಹೆಸರಿನ ಹಂಗನು ಮರೆತು ಈಗಷ್ಟೇ ಚಿಗುರೊಡೆದಿಡುವ ಈ ಸ್ನೇಹದ ಜೋಪಡಿಯಲ್ಲಿ ಈ ಬಂಧದ ಹಣತೆಯೊಂದನ್ನು ಹಚ್ಚಿಟ್ಟುಕೊಂಡು ನಮ್ಮಿಬ್ಬರ ಬದುಕಿನ ಕತ್ತಲೆಯನ್ನು ಪರಸ್ಪರ ಬೆಳಗೋಣ..ಅದರಲ್ಲೇ ಹೆಚ್ಚು ಅರ್ಥವಿದೆ ಅಂದೆನಿಸುತ್ತದೆ..
ಹೌದು.. ಮತ್ತೊಮ್ಮೆ ಹೇಳುತ್ತೆನೆ.. ನೀನೆಂದರೆ ಅಪ್ಪಟ ಜೀವ ಚೈತನ್ಯ, ನೀನಂದರೆ ಎಂದೂ ಬತ್ತದ/ಬತ್ತಬಾರದ ಜೀವಜಲ.. ನೀನಂದರೆ ನನ್ನೊಳಗೆ ಮನುಷ್ಯ ಭಾವ ತುಂಬಿಕೊಟ್ಟ ಆತ್ಮ ಸಾಂಗತ್ಯ.. … … ನೀನೆಂದರೆ… ನಾನೇ !!

~ಹುಸೇನಿ

Leave a comment