Long Live Kejriwal. · Politics

Long Live Kejriwal..

aap
ಆಫೀಸಿಗೆ ಬಂದು ಕುಳಿತಾಗಿನಿಂದ ವಿಲಕ್ಷಣ ಖುಷಿ ಅನುಭವಿಸುತ್ತಿದ್ದೇನೆ. ಈ ಮೌಸು,ಕೀ-ಬೋರ್ಡು, ಮೊನಿಟರೂ ಎನೂ ಬೇಡದಾಗಿದೆ. ಮನಸ್ಸು ದೂರದ ದೆಲ್ಲಿಯ ಬಿಳಿ ಟೋಪಿಧಾರಿ ಮಕ್ಕಳ, ಮಹಿಳೆಯರ, ಬದುಕಿಗಾಗಿ ಕಷ್ಟಪಡುವ ಕಾರ್ಮಿಕವರ್ಗ ಮತ್ತು ಸಾಮಾನ್ಯ ಜನರ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸುತ್ತಿದೆ, ಜಯಘೋಶದ ಮೆರವಣಿಗೆಯಲ್ಲಿ ಸಾಥಿಯಾಗಿದೆ. ನಾನು ಯಾವುದೇ ವ್ಯಕ್ತಿ ಅಥವಾ ಪಕ್ಷದ ವಿರೋಧಿಯಲ್ಲ. ಅಧಿಕಾರ ಎಂಬ ಏಕಮೇವ ಉದ್ದೇಶದ ಬೆನ್ನು ಬಿದ್ದು ಅವರು ಹರಡುವ, ಜನರ ಮೇಲೆ ಹೇರುವ ಕೀಳು ರಾಜಕೀಯ ಆದರ್ಶಗಳ ವಿರೋಧಿ ನಾನು. ಯಾವ ತತ್ವಾದರ್ಶಗಳು ನಮ್ಮ ದೇಶದ ಸಂವಿಧಾನದ ಮೂಲ ಪರಿಕಲ್ಪನೆಯನ್ನು ವಿರೂಪಗೊಳಿಸಲು ಪ್ರಯತ್ನಿಸುತ್ತೋ.. ಅಂಥ ರಾಜಕೀಯ ವ್ಯವಸ್ಥೆಯ, ಅಂಥಹ ರಾಜಕೀಯ ವ್ಯಕ್ತಿಯ ವಿರೋಧಿ ನಾನು. ಪ್ರಜಾಪ್ರಭುತ್ವ ಭಾರತದಲ್ಲಿ ಮೋದಿಯೆಂಬ ಸರ್ವಾಧಿಕಾರಿ ಬೆಳೆಯುತ್ತಿರುವುದು ನನಗೆ ಅಸಮಾಧಾನ ತರುತ್ತದೆ. ಇಡೀ ದೇಶದ ಆಡಳಿತ ವ್ಯವಸ್ಥೆ ವ್ಯಕ್ತಿ ಕೇಂದ್ರಿತವಾಗುವುದು ಒಂದು ಅಪಾಯಕಾರಿ ಬೆಳವಣಿಗೆ. ಒಂದು ದೇಶ, ಒಂದು ಧರ್ಮ, ಒಬ್ಬ ನಾಯಕ ಎಂಬುದು ಸಮಾನತೆ ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ವ್ಯವಸ್ಥೆಯನ್ನು ಇಲ್ಲದಾಗಿಸುತ್ತದೆ. ಇಡೀ ವ್ಯವಸ್ಥೆಯ ‘ರಿಮೋಟ್ ಕಂಟ್ರೊಲ್’ ಭಾರತದ ಸಂವಿಧಾನವನ್ನು ತಿರಸ್ಕರಿಸಿ ಮನು ಸ್ಮೃತಿಯನ್ನು ಎತ್ತಿ ಹಿಡಿಯುವ, ಮತ್ತು ಹಿಟ್ಲರ್-ಮುಸೊಲಿನಿ ಫ್ಯಾಸಿಸ್ಟ್ ಚಳುವಳಿಯಿಂದ ಸ್ಪೂರ್ತಿ ಪಡೆದ ಆರೆಸ್ಸೆಸ್ ಎಂಬ ಸಂಘಟನೆಗೆ ಕೈಯಲ್ಲಿ.. !. ಅಲ್ಲೊಂದು ಸಾದ್ವಿ ನೆರೆದ ಜನರೆದುರು ತನ್ನ ಹರಕು ಬಾಯಲ್ಲಿ “ನಿಮಗೆ ದೆಹಲಿಯಲ್ಲಿ ರಾಮನಿಗೆ ಹುಟ್ಟಿದ ಮಕ್ಕಳ ಸರ್ಕಾರ ಬೇಕೋ ಅಥವಾ ಅನೈತಿಕವಾಗಿ ಹುಟ್ಟಿದ ಮಕ್ಕಳ ಸರ್ಕಾರ ಬೇಕೋ..” ಎಂದು ಕಿರುಚುತ್ತಾಳೆ. ಆ ಪಕ್ಷದ ಹೊಣೆ ಹೊತ್ತ ಘನ ಸಚಿವೆ ಅದು.. !. ಇಂಥ ಹೇಳಿಕೆಗಳು ನೀಡಲು ಅವರಿಗೆ ಕೊಟ್ಟ ಪ್ರಚೋದನೆ ಏನು..?. ಒಂದಲ್ಲಾ ಎರಡಲ್ಲಾ ಹಲವಾರು ಸಮಾಜ ವಿರೋಧಿ ಹೇಳಿಕೆಗಳು, ಘರ್ ವಾಪಸಿ ಅಂಥಹ ಸಾಮಾಜಿಕ ಅನಿಷ್ಟಗಳಿಗೆ ಮಣೆ ಹಾಕಿದ್ದು.. ಇದೆಲ್ಲ ಸಮಾಜಕ್ಕೆ ಯಾವ ಸಂದೇಶವನ್ನು ಕೊಡುತ್ತದೆ?.
ಈ ಎಲ್ಲಾ ಬೆಳವಣಿಗೆಗಳು ಪ್ರಜ್ಞಾವಂತರನ್ನು ಕಾಡಿದ್ದು ಸುಳ್ಳಲ್ಲ. ಅವರೇ ಹೇಳುವ ಹಾಗೆ “ಅನೈತಿಕವಾಗಿ” ಹುಟ್ಟಿದ ಜನರು ಅವರನ್ನು ಪೊರಕೆಯಿಂದ ಅಟ್ಟಿ ಓಡಿಸಿದ್ದಾರೆ. ಓಡಿಸಲೇಬೇಕು..
ಪೊಳ್ಳು ಅಭಿವೃದ್ದಿಯ ಮಂತ್ರಗಳು, ಭೂ ಸ್ವಾಧೀನ ಕಾಯಿದೆಯ ಮೂಲಕ ದೇಶದ ಬೆನ್ನೆಲುಬಾದ ರೈತರ ಭೂಮಿಯನ್ನು ಅಂಬಾನಿ, ಅದಾನಿಗಳಿಗೆ ಅಡವಿಡುವ ಪ್ರಯತ್ನಗಳಿಗೆ ಇನ್ನಾದರೂ ಕಡಿವಾಣ ಬೀಳಲೇಬೇಕು. ಕೇಜ್ರಿವಾಲ ಎಂಬ ಶಕ್ತಿ ಇನ್ನಷ್ಟು ಬಲಿಷ್ಟವಾಗಲಿ.. ದೇಶದ ಮೂಲೆ ಮೂಲೆಗೂ ಈ ಶಕ್ತಿ ಹರಡಲಿ, ಸ್ವಚ್ಛ ಭಾರತ ಅಭಿಯಾನ ರಾಜಧಾನಿಯಿಂದಲೇ ಶುರುವಾಗಲಿ…. Long Live Kejriwal..! Long live India…!!

~ಹುಸೇನಿ

Leave a comment