ಎದೆಯಾಳದಲ್ಲಿ
ಅಡಗಿಸಿದ್ದೆ..
ಅದು ನಿನ್ನ ಕೊನೆಯ
ಉಡುಗೊರೆಯೆಂದು
ಸಂಭ್ರಮಿಸಿದ್ದೆ..
ಈಗ ನೋಡು
ಅವು ಕೊಳೆತು
ಕೊಲ್ಲುತ್ತಿವೆ …
ತೊರೆಯ ತೀರದ ಹುಡುಗನ ಜಾಡು …
ಕೋಮುವಾದ
ಆತ ಸಂಘಟನೆಯೊಂದರ ಮುಖಂಡ ಹಾಗು ಸ್ವಯಂ ಘೋಷಿತ ರಾಷ್ಟ್ರ ಭಕ್ತ ..ಭಿನ್ನ ಕೋಮಿನ ಯುವಕ ಯುವತಿಯರು ಮಾತಾಡುವುದನ್ನು ಸಂಸ್ಕೃತಿಯ ಹೆಸರಲ್ಲಿ ವಿರೋಧಿಸುತ್ತಿದ್ದ . ಅದಕ್ಕಾಗಿ ನೈತಿಕ ಪೋಲೀಸರ ಗುಂಪನ್ನೇ ಬೆಳೆಸಿದ್ದ.
ಅದೊಂದು ದಿನ ಆತ ಎಲ್ಲೋ ಹೊರಡಲು ಅಣಿಯಾಗುತ್ತಿದ್ದಂತೆ ಮೊಬೈಲ್ ರಿಂಗಣಿಸಿತು.. ಅಣ್ಣಾ.. ಇಬ್ಬರನ್ನು ಪಾರ್ಕಿನಲ್ಲಿ ಹಿಡ್ಕೊಂದಿದ್ದೀವಿ .. ಹುಡುಗಿ ನಮ್ಮ ಜಾತಿ.. ಹುಡುಗ ಬೇರೆ ಜಾತಿ.. “ಬಿಡಬೇಡಿ.. ಅವರನ್ನ .. ಸರಿಯಾಗಿ ಬುದ್ದಿ ಕಲಿಸಿ ”
ಆತ ಫೋನಿಟ್ಟ . ಸಂಜೆ ಮನೆಗೆ ಬಂದಾಗ ಕಾಲೇಜಿಂದ ಬಂದ ತನ್ನ ಮಗಳ ಬೆನ್ನಲ್ಲಿ ಬಾಸುಂಡೆ ಎದ್ದಿತ್ತು.
ಶವಪೆಟ್ಟಿಗೆ
ಆತ ಶವಪೆಟ್ಟಿಗೆ ತಯಾರಿಸಿ ಮಾರಾಟ ಮಾಡುತ್ತಿದ್ದ. ಮಳೆಗಾಲದಲ್ಲಿ ಆತನ ವ್ಯವಹಾರ ಕುಸಿದಿತ್ತು. ಮಾತಿನ ನಡುವೆ “ಈ ಮಳೆಗಾಲದಲ್ಲಿ ಯಾರೂ ಸತ್ತಿಲ್ಲ” ಅಂತ ತನ್ನ ತನ್ನ ಗೆಳೆಯನಲ್ಲಿ ಅಳಲು ತೋಡಿಕೊಳ್ಳುವಷ್ಟರಲ್ಲಿ ‘ನಮ್ಮೂರಿಗೆ ಬರುತ್ತಿದ್ದ ಗವರ್ಮೆಂಟ್ ಬಸ್ಸು ಸೇತುವೆ ಕೆಳಗೆ ಬಿದ್ದು ಕೆಲವರು ಸತ್ರಂತೆ ‘ ಓಡಿ ಬಂದ ಅವನ ಸಹಾಯಕ ಏದುಸಿರು ಬಿಡುತ್ತ ಉಸುರಿದ. ಆತನಿಗೆ ಒಳಗೊಳಗೇ ಸಂಭ್ರಮ. ಕೂಡಲೇ ಕಾರ್ಯ ಪ್ರವೃತ್ತನಾದ. ಕೆಲ ಸಮಯದ ಬಳಿಕ ಮೊಬೈಲ್ ರಿಂಗಣಿಸಿತು.. “ರೀ.. ರೀ… ನಮ್ .. ನಮ್… ನಮ್ಮಗಳು ಬ.. ಬ ಬಸ್ಸು ಸೇ .. ಸೇ..ಸೇತುವೆ ” ಆತ ಫೋನಿಟ್ಟು ತನ್ನ ಮಗಳಿಗೆ ಸರಿ ಹೊಂದುವ ಶವಪೆಟ್ಟಿಗೆಯನ್ನು ಹುಡುಕಾಡ ತೊಡಗಿದ.
ದೂರ
ಆಗಷ್ಟೇ ಯಶಸ್ವಿಯಾಗಿ ಚಂದ್ರಯಾನ ಮುಗಿಸಿ ಬಂದ ಭಾರತೀಯ ಮೂಲದ ನಾಸಾ ವಿಜ್ಞಾನಿಯ ತಾಯಿಯನ್ನು ಮಾತನಾಡಿಸಲು ಪತ್ರಕರ್ತರು ಅವರ ಮನೆಗೆ ಬಂದಿದ್ದರು. “ನಿಮ್ಮ ಮಗ ಕೊನೆಯ ಬಾರಿಗೆ ನಿಮ್ಮನ್ನು ನೋಡಲು ಬಂದದ್ದು ಯಾವಾಗ ?” . ಮಾತಿನ ನಡುವೆ ತೂರಿ ಬಂದ ಪ್ರಶ್ನೆಗೆ ಉತ್ತರಿಸಲಾರದೆ ಆಕೆಗೆ ದುಃಖ ಒತ್ತರಿಸಿ ಬಂದಿತ್ತು. ಬಹುಶಃ ಚಂದ್ರ ಲೋಕಕ್ಕಿಂತ ತಾಯಿ ಮನೆ ಮಗನಿಗೆ ದೂರವಾಗಿದ್ದಿರಬೇಕು.
ಭಕ್ತಿ
ಇಬ್ಬರು ಗೆಳೆಯರಲ್ಲಿ ಒಬ್ಬ ಅಪ್ಪಟ ದೈವ ಭಕ್ತನಾಗಿದ್ದ. ಏನೇ ಕೆಲಸಕ್ಕೂ ದೇವರ ಮೊರೆ ಹೋಗುತ್ತಿದ್ದ. ಅವರಿಬ್ಬರೂ ಮಾವಿನ ಮರದ ಕೆಳಗಡೆಯಿಂದ ಹಾದು ಹೋಗಲು ಅದರ ಹಣ್ಣು ಅವರ ಕಣ್ಣು ಕುಕ್ಕಿತು. ದೈವ ಭಕ್ತ ಅಲ್ಲೇ ದೇವರಿಗೆ ಮೊರೆಯಿಟ್ಟ .”ಭಗವಂತಾ.. ಒಂದು ಹಣ್ಣನ್ನಾದರೂ ಬೀಳಿಸು…! ” ಮತ್ತೊಬ್ಬ ಕಲ್ಲೆತ್ತಿ ಎಸೆದ .. ಹಣ್ಣು ಬಿತ್ತು .. ಹಣ್ಣನ್ನು ಚಪ್ಪರಿಸುತ್ತ ಆತ ಗೆಳೆಯನನ್ನು ದಿಟ್ಟಿಸಿದ.. ಅವನು ಪ್ರಾರ್ಥಿಸುತ್ತಲೇ ಇದ್ದ.
ವಿಚಿತ್ರ
“ಸಹನೆಯನ್ನು ಬೆಳೆಸಿ ..ಹಿಂಸೆಯಿಂದ ಸಾಧಿಸುವುದೆನಿಲ್ಲ …” ಎಂದು ಟ್ವೀಟ್ ಮಾಡಿ ಶಾಂತಿದೂತನಾದ ಬಾಲಿವುಡ್ ನಾಯಕನೊಬ್ಬ .. ಮರುದಿನ ಪಾರ್ಟಿಯಲ್ಲಿ ಗೆಳತಿಯ ಗಂಡನಿಗೆ ಕಪಾಳಮೋಕ್ಷ ಮಾಡಿದ್ದ..!
ವಿಪರ್ಯಾಸ
ಆತ ಕಟ್ಟಾ ಬ್ರಹ್ಮಚಾರಿ.. ದಿನಕ್ಕೆ ನಾಲ್ಕು ಕಡೆ ಬ್ರಹ್ಮಚರ್ಯೆಯ ಬಗ್ಗೆ ಕ್ಯಾಂಪ್ ನಡೆಸಿ ಜನರನ್ನು ಸೆಳೆಯುತ್ತಿದ್ದ. ವಿಪರ್ಯಾಸವೆಂದರೆ ಆತನ ತಂದೆಯೂ ಅವನ ಹಾದಿ ಹಿಡಿದಿದ್ದರೆ ಇಂದು ಆತ ಇರುತ್ತಿರಲಿಲ್ಲ ಎಂಬುದನ್ನು ಮರೆತಿದ್ದ.
Leave a Comment
ಜೀವ ಭಾವಗಳ ಸಮ್ಮಿಲನ
ತೊರೆಯ ತೀರದ ಹುಡುಗನ ಜಾಡು …
The world of words
ನನ್ನ ಜೀವದ ಗೆಳೆಯ
ಮನದಿಂಗಿತಗಳ ಅವಿರತ ಸ್ವಗತ, ಆಗುವುದೆಂತೊ ನಿರಂತರ ಅಗಣಿತ ? ಲೀಲೆಯವನ ಕೈಗೊಂಬೆ ಆದರೂ ವಿಸ್ಮಯವಿದ ನಂಬೇ !
ಭಾವನೆಗಳ ವೀಣೆ ಮಿಡಿದಾಗ . . ಪದವಾಯ್ತು ಬರೆಯವ ಕನಸು. . .
ಮನವೆಂಬ ಸಾಗರದಲ್ಲಿ ಭಾವನೆಗಳ ಅಲೆಗಳು.....
ಮೌನಾಂ'ತರಂಗ'.... ಮೀಟಿದ ಭಾವ'ತರಂಗ'
ಕನ್ನಡದ ತಾಣ ಕನ್ನಡವೇ ಪ್ರಾಣ
ಎಂಟು ಜ್ಞಾನಪೀಠಗಳ ಹೆಮ್ಮೆ ನಮ್ಮ ಕನ್ನಡ ಸಾಹಿತ್ಯ ಲೋಕ..
Recipes... Articles... Crafts...
ಭಾವನೆಗಳು ಅಕ್ಷರವಾದಾಗ
journey down memory lane..
ಬದುಕಿನ ನೋಟ. ಬದುಕಿನೊಂದಿಗಿನ ಓಟ
ನೆನಪು ಭಾವನೆಗಳೊಂದಿಗೆ ಸಂಘಷ೯ ಬರೆಯುತಿರುವೆ ಚಿತ್ತಾಕಷ೯ಕವಾಗಿ, ಇದು ನಿರಂತರ.........
ನನ್ನ ಭಾವನೆಗಳ ಲಹರಿ
Just another WordPress.com site
ಶೂನ್ಯದಿಂದ-ಶೂನ್ಯದೆಡೆಗೆ
ಎಳೆ ಮನಸಿನ ಭಾವ ತೇರು..
ಸು೦ದರ ಸಾಹಿತ್ಯ ಲೋಖ.!
ನನ್ನ ಮನದ ಮಾತುಗಳು
ಮನದಾಳದ ಮಾತುಗಳು ...
ಮಾತಿಗೆ ಸಿಗದ ಶಬ್ಧಗಳು ಮಳೆಹನಿಗಳಾದಾಗ...
as it is..!
Welcome to musafir
ಭಾವ ಲೋಕದ ರಾಯಭಾರಿ. . . .
ಬರುಡಾಗಿರುವೀ ಹಸಿರಿನ ಚಿಗುರಿಗೆ!
This WordPress.com site is the cat’s pajamas
Just another WordPress.com weblog
ಜಬ್ಬಾರ್ ಪೊನ್ನೋಡಿ ಗೀಚಿದ್ದು ಅಂತರ್ಜಾಲದಲ್ಲೀಗ...
ಅಲೆಮಾರಿಯ ರೆಕ್ಕೆ ಬೀಸು....
ನೋಡಿದ, ಕೇಳಿದ, ಅನುಭವಿಸಿದ, ಆಲೋಚಿಸಿದ, ಅವಲೋಕಿಸಿದ ವಿಷಯವನ್ನು ಕಾವ್ಯ ರೂಪಕ್ಕೆ ತರುವ ನನ್ನ ಪ್ರಯತ್ನ ...
ಮನದ ಮಾತು ಹೇಳೋಕಲ್ಲ ಬರೆಯೋಕ್ ಮಾತ್ರ...
ಜಾಲ ಚರಿ
ನನ್ನ ಸವಿನೆನಪುಗಳ,ಹೊಸಕನಸುಗಳ,ಅನುಭವಗಳ ಅಬುಧಿ