ಕೊರತೆ
ಒಂದು ಕಾಲದಲ್ಲಿ ಅವರಿಬ್ಬರೂ ಕಿತ್ತು ತಿನ್ನುವ ಬಡತನದಿಂದ ಕಾಲ ಕಳೆಯಿತ್ತಿದ್ದರು.. ನಾನು ನಿನಗೆ , ನೀನು ನನಗೆ ಅಂತಿದ್ದ ಅವರ ಮನೆಯಲ್ಲಿ ಈಗ ಕೈ ಕಾಲಿಗೊಂದು ಕೆಲಸದಾಳು.. ತನ್ನ ಹಳೆಯ ನೆನಪುಗಳನ್ನೆಲ್ಲ ಮೆಲುಕು ಹಾಕಿ ಮರುಗುತ್ತಿದ್ದ ಅವನಲ್ಲಿ ಅದೊಮ್ಮೆ ಅವಳು ಕೇಳಿದಳು.. ನಿಮಗೇನಿದೆ ಇಲ್ಲಿ ಕೊರತೆ..? ಆತ ನಿಟ್ಟುಸಿರಿಡುತ್ತಾ ಉತ್ತರಿಸಿದ.. “ನಿನ್ನ ಪ್ರೀತಿ ಮತ್ತು ಅಕ್ಕರೆ”
ಅಮರ
ತನ್ನಿಂದ ಎಲ್ಲವನ್ನೂ ಕಲಿತು ಇನ್ನೂ ಆಶ್ರಮದಲ್ಲೇ ಉಳಿದಿದ್ದ ಶಿಷ್ಯನಲ್ಲಿ ಗುರುಗಳೊಮ್ಮೆ ಕೇಳಿದರು..’ಶಿಷ್ಯಾ.. ನಿನಗೆ ಸಾವಿನ ನಂತರವೂ ಬದುಕಬೇಡವೇ..?’ . ಆಶ್ಚರ್ಯಚಕಿತನಾದ ಶಿಷ್ಯ ಗುರುಗಳನ್ನೇ ದಿಟ್ಟಿಸುತ್ತ ಕೇಳಿದ.. “ಅದು ಹೇಗೆ ಸಾದ್ಯ ಗುರುಗಳೇ? ”
ಹೋಗಿ ನೀನು ಕಲಿತ ಪಾಠವನ್ನೆಲ್ಲ ಜನರಿಗೆ ಹಂಚು…ಅದು ನೀನು ಸತ್ತ ನಂತರವೂ ನಿನ್ನನ್ನು ಅವರೊಳಗೆ ಬದುಕಿಸುತ್ತದೆ.. ಗುರುಗಳು ಉತ್ತರಿಸಿದರು.
ಅಮ್ಮ
ಬಂಜೆಯೆಂದು ಊರವರಿಂದಲೂ ಕುಟುಂಬಿಕರಿಂದಲೂ ತಿರಸ್ಕೃತಳಾಗಿದ್ದ ಹೆಣ್ಣೊಬ್ಬಳು ಹೇಳಿದ ಕತೆ..
‘ಮೂರು ವರ್ಷಗಳ ಹಿಂದೆ ಅನಾಥಶ್ರಮದಿಂದ ಮಗುವನ್ನು ದತ್ತು ತೆಗೆದುಕೊಂಡಿದ್ದೆ..ಆತ ಇಂದು ನನ್ನನ್ನು ”ಅಮ್ಮ” ಅಂತ ಕರೆದ.
ಭಕ್ತಿ
ಮಂದಿರದ ಮುಂದಿದ್ದ ಭಿಕ್ಷುಕರ ದಯನೀಯತೆ ಕಂಡು ಏನೂ ಕೊಡಲಾಗದ ಬಡವ ಶಿಷ್ಯನೊಬ್ಬ ತನ್ನ ಗುರುಗಳಲ್ಲಿ ತನ್ನ ಅಸಹಾಯಕತೆಯನ್ನು ತೋಡಿಕೊಂಡ..’ ಗುರುಗಳೇ ಭಗವಂತ ಇಷ್ಟು ಒಳ್ಳೆ ಅರೋಗ್ಯ ಕೊಟ್ಟರೂ ನನ್ನಿಂದ ಅವರಿಗೇನು ಸಹಾಯ ಮಾಡಲಾಗಿಲ್ಲ.. .’ . ‘ಇರುವ ಸಾವಿರದಲ್ಲಿ ಹತ್ತನ್ನು ಭಿಕ್ಷುಕರ ತಟ್ಟೆಗೆ ಎಸೆದು ಭೀಗುವ ಭೀರುಗಳಿಗಿಂತ ಏನೂ ಕೊಡಲಾಗಲಿಲ್ಲವೆಂದು ಕೊರಗುವವನೇ ದೇವರಿಗೆ ಹೆಚ್ಚು ಇಷ್ಟ..ಚಿಂತೆ ಮಾಡಬೇಡ ..’ ಗುರುಗಳು ಅವನನ್ನು ಸಮಾಧಾನಪಡಿಸಿದರು…
ವ್ಯಭಿಚಾರ
ಅವಳು ಎಂದಿನಂತೆ ಸೀರೆ ಉಟ್ಟು ಮಲ್ಲಿಗೆ ತೊಟ್ಟು ಬಸ್ ಸ್ಟ್ಯಾಂಡ್ ಬಳಿ ಗಿರಾಕಿಗಾಗಿ ಕಾಯುತ್ತಿದ್ದಳು. ‘ನನಗೆ ಅವಳನ್ನು ಅನುಭವಿಸಬೇಕು ಅನ್ನಿಸುತ್ತಿದೆ.. ಆದ್ರೆ ವ್ಯಭಿಚಾರ ತಪ್ಪು ಅಂತ ನನ್ನನ್ನು ಹತೋಟಿಗೆ ತರುತ್ತಿದ್ದೇನೆ ..’ ದೂರದಿಂದ ಅವಳನ್ನೇ ದಿಟ್ಟಿಸುತ್ತಾ ಅವನೆಂದ.. ಯಾವಾಗ ನಿನಗೆ ಅನ್ನಿಸಿತೋ ಆಗಲೇ ನೀನು ಅವಳನ್ನು ವ್ಯಭಿಚಾರ ಮಾಡಿ ಆಯಿತು.. ಪಕ್ಕದವ ಹೇಳಿದ.
ಕನ್ನಡ ಬ್ಲಾಗಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ
Published by ಹುಸೇನಿ ~
ನನ್ನ ನಾಳೆಯ ಕುರಿತು ನನಗಲ್ಲ, ಈ ಭೂಮಿ ಯಾವುದೇ ಜೀವಿಗೂ ಪ್ರವಚಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ಯಾವತ್ತೂ ಬಾರದ ನಾಳೆಯ ಬಗ್ಗೆ ನಂಗೇನು ಅಷ್ಟು ಕುತೂಹಲವಿಲ್ಲ. ಈ ಬದುಕು ಈ ಕ್ಷಣದ್ದು ಅಷ್ಟೇ ಎಂದು ನಂಬುವವನು ನಾನು. ನಾ ಈ ಪದವನ್ನು ಬೆರೆಯುವ ವೇಳೆ 'ಈ ಕ್ಷಣ' ಆಗಿದ್ದ ಈ ಹೊತ್ತನ್ನು ಇನ್ನೈದು ನಿಮಿಷದ ಬಳಿಕ ನಾ ತಿರುಗಿ ನೋಡಬಹುದು. ಅಂಥಹ ನನ್ನ ದೃಷ್ಟಿ ಪರದೆಯಲ್ಲಿ ಶಾಶ್ವತವಾಗಿ ಉಳಿಯುವ, ನನ್ನನ್ನು ಸದಾ ಜೀವಂತವಿರಿಸುವ ಪ್ರೇರಣೆಯಾಗಿ, ಒಂಟಿಯಾದಾಗ ದಿಕ್ಕಾಗಿ, ದುಃಖಕ್ಕೆ ಸಾಂತ್ವನವಾಗಿ, ಭಾರಕ್ಕೊಂದು ಹೆಗಲಾಗಿ, ಅತ್ತ ಕ್ಷಣವ ನಗುವಾಗಿ, ನಕ್ಕ ಕ್ಷಣ ಅಳುವಾಗಿ, ಮಳೆಯ ನಂತರ ತೊಟ್ಟಿಕ್ಕುವ ಹನಿಯಾಗಿ, ಬದುಕು ಇಷ್ಟೆಯಾ ಎಂದೆನಿಸುವ ವೇಳೆ ನೀಲಾಗಸದ ತುಂಬಾ ಕಾಮನಬಿಲ್ಲಾಗಿ ಮೂಡುವ ನನ್ನ ನೆನಪುಗಳು, ಅಂತಹ ನೆನಪುಗಳ ವ್ಯಸನಿ ನಾನು. ಆ ಕಾರಣಕ್ಕೇ ಇರಬಹುದು ನಿನ್ನೆಗಳಲ್ಲೇ ಹೆಚ್ಚು ಬದುಕುತ್ತೇನೆ. ಅಂತಹ ಒಂದಿಷ್ಟು ಬೊಗಸೆ ನೆನಪುಗಳನ್ನು ಈ ಸಂಚಿಯೊಳಗೆ ತುಂಬಿದ್ದೇನೆ..
ನನ್ನ ಬಗ್ಗೆ ನನ್ನ ಬರಹಗಳೇ ಹೆಚ್ಚು ಮಾತನಾಡುವುದರಿಂದ ಇಲ್ಲಿ ಹೇಳಲು ಹೆಚ್ಚು ಉಳಿದಿಲ್ಲ. ಇಳಿಸಂಜೆಯಲ್ಲಿ ಕಾಡುಮಧ್ಯೆಯೋ, ಕಡಲ ತೀರದಲ್ಲೋ ಕಳೆದುಹೋಗಲು ಸದಾ ಹಂಬಲಿಸುವ ಮನ, ಬಾನ ಮಡಿಲಿನಿಂದ ಒಂದಿಷ್ಟು ವರ್ಷಧಾರೆಯೂ ಸೇರಿಕೊಂಡರೆ ಕಥೆ ಮುಗಿಯುತು;ನೆನಪುಗಳನ್ನೆಲ್ಲ ನೇವರಿಸಿ ಮಾತಿಗೆ ಕೂತು, ಮನಸ್ಸು ಮೌನವಾಗಿ ಅದ್ಯಾವುದೋ ಲೋಕದ ವಾಸಿಯಾಗುತ್ತದೆ. ಅಲ್ಲಿ ಬದುಕಿನ ಜಂಜಡವಿಲ್ಲ. ಗಾಳಿ, ನೀರು, ಬೆಳಕು ಉಚಿತವಾಗಿ ಸಿಗೋ ಜಗದಲಿ ಬದುಕನ್ನು ದುಸ್ತರ ಮಾಡಿಕೊಂಡ ನಿಮ್ಮಗಳ ಸಿನಿಕ ಜಗದಾಚೆಯ ಅನೂಹ್ಯ ಲೋಕವದು. ಹಕ್ಕಿಗಳ ಕಲರವಕ್ಕೆ ಸಾಥಿಯಾದ ಜೀರುಂಡೆಗಳ ನಾದ. ಪಕ್ಕದಲ್ಲೇ ಹರಿವ ತೋಡಿನ ಝುಳು-ಝುಳು. ರಾತ್ರಿಯ ನಿಶೀಥತೆ, ದೂರದಲ್ಲಿ ಒದರುವ ಗೂಬೆ, ಊಳಿಡುವ ನರಿ. ನನ್ನದೇ ಲೋಕವದು. ಕತ್ತಲಿಗೂ ಬೆಳಕನ್ನು ತೊಡಿಸಿ ಉನ್ಮಾದವನ್ನು ಉಣ್ಣುವ ಬೆಳಕಿನ ಜನರ ವಿಕ್ಷಿಪ್ತತೆಗೆ ಅಲ್ಲಿ ಜಾಗವಿಲ್ಲ. ಕತ್ತಲನ್ನು ಕತ್ತಲಾಗಿಯೂ ಬೆಳಕನ್ನು ಬೆಳಕಾಗಿಯೂ ಆಸ್ವಾದಿಸುತ್ತೇನೆ, ಅಲ್ಲಷ್ಟೇ ನಾನು ನಾನಾಗಿ ಹೆಚ್ಚು ಬದುಕುತ್ತೇನೆ. ಅದರಿಂದಲೋ ಏನೋ ನಾನು ಎಂದೂ ಸಲ್ಲದ ಈ ಬೆಳಕಿನ ಜಗದ ಬಗ್ಗೆ ತೀರದ ಅಸಹ್ಯತನವಿದೆ. ಕೋಪವಿದೆ, ಪರಿತಾಪವಿದೆ. ಆದರೇನು ? ಒಲ್ಲದೆಯೂ ನಾನು ಕೂಡ ಈ ಜಗದ ಕ್ಷುಲ್ಲಕತೆಯ ಭಾಗವಾಗಿದ್ದೇನೆ. ಅದರಿಂದಾಚೆ ಹೊರಬರಲು ಪ್ರಯತ್ನಿಸಿದಷ್ಟೂ ತೀವ್ರವಾಗಿ ನನ್ನನ್ನು ಸೆಳೆಯುತ್ತದೆ ಅದು. ಮನುಷ್ಯನೊಂದಿಗೆ ಹುಟ್ಟಿದ ಅಥವಾ ಹೇರಲ್ಪಟ್ಟ ಒಂದಷ್ಟು ಜವಾಬ್ದಾರಿಗಳೆಂಬ ಕಟ್ಟುಪಾಡುಗಳು, ಸಂಭಂದಗಳೆಂಬ ಬೇಲಿ. ಖುಷಿಯನ್ನು ವಸ್ತುಗಳ ಗಾತ್ರಕ್ಕೂ ಬೆಲೆಗೂ ನಿಗುದಿಗೊಳಿಸಿ, ಆ ವಸ್ತು ಸಿಕ್ಕರೆಷ್ಟೇ ಖುಷಿ ಎಂದು ಬದುಕಿಗೆ ನಿಯಮ ಹಾಕಲಾಗಿದೆ ಇಲ್ಲಿ. ಭೌತ ವಸ್ತುಗಳ ವ್ಯಾಮೋಹದಲ್ಲಿ ಬಾಲ್ಯವನ್ನೂ, ಕೌಮಾರವನ್ನೂ, ಯವ್ವನವನ್ನೂ ಅನುಭವಿಸಲು ಸಾಧ್ಯವಿಲ್ಲವಾಗಿದೆ. ಇದೆಲ್ಲದರಿಂದ ಮುಕ್ತಿಗಾಗಿ ಸದಾ ಹಂಬಲಿಸುತ್ತೇನೆ. ನೀ ಕಟ್ಟಿಕೊಂಡ ಸೌಧವೋ, ಕೋಟೆವೋ, ನೀನುಡುವ ವಸ್ತ್ರದ ಬೆಲೆಯೋ, ಸಂಚರಿಸುವ ವಾಹನದ ಮೌಲ್ಯವೋ, ಬ್ಯಾಂಕಿನ ಲಾಕರಿನಲ್ಲಿಟ್ಟಿರುವ ಒಡವೆಯೊ, ನಿನ್ನ ಹಿಂಬಾಲಕ ಪಡೆಯೋ ನಿನ್ನ ಮನಸಿನ ಸಂತೃಪ್ತಿಯನ್ನೂ ಖುಷಿಯನ್ನೂ ಅಲೆಯುವ ಮಾಪಕವಲ್ಲ. ಇದ್ಯಾವುದರಲ್ಲೂ ಪೂರ್ಣ ಸಂತೋಷವನ್ನು ಪಡೆದವರ್ಯಾರು ನಾನು ಕಂಡದ್ದಿಲ್ಲ, ಕೇಳಿದ್ದಿಲ್ಲ. "ಮನಃಶಾಂತಿಯೇ ಅತ್ಯುನ್ನತ ಶ್ರೀಮಂತಿಕೆ", ಈ ಬೆಳಕಿನ ಜಗದ ತುಂಬೆಲ್ಲಾ ಯಾವುದೊ ಕರ್ಕಶ ಸಂಗೀತಕ್ಕೆ ಕಿವುಡಾದ ಮಂದಿಯ ಮಧ್ಯೆ ಈ ಸತ್ಯವನ್ನು ಕೂಗಿ ಕೂಗಿ ಹೇಳುವ ಪ್ರಯತ್ನದಲ್ಲಿದ್ದೇನೆ..
ನಿಮ್ಮನೆ ಹುಡುಗ,
ಹುಸೇನಿ ~
ನೆನಪಿನ ಸಂಚಿಯ ಕುರಿತಾದ ನಿಮ್ಮ ಅಭಿಪ್ರಾಯವನ್ನು ಕಳುಹಿಸಿ : nenapinasanchi@gmail.com
View all posts by ಹುಸೇನಿ ~
ಬಹಳ ಆಳವಾದ ಚಿಂತನೆಗಳು ಬಹುಷಃ ಈ ಕತೆಯ ಬುನಾದಿಯಾಗಿವೆ. ಹುಸೇನ್, ಹಲವು ದಿನಗಳಿಂದ ನನ್ನ ಓದು ಸ್ವಲ್ಪ ಕುಂಠಿತಗೊಂಡಿತ್ತು. ಇವತ್ತು ನಿಮ್ಮ ಬ್ಲಾಗ್ ಸುತ್ತಾಡಿ ಖುಷಿಪಟ್ಟೆ. ಬರುತ್ತಲಿರಲಿ ಹೀಗೆ… ಮಗದಷ್ಟು ಮೊಗೆಯುತ್ತಿರಿ.
LikeLike
ದೊಡ್ದರ್ಥದ ಸಣ್ಣ ಕತೆಗಳು..
ಬದುಕಿಗೆ ಆದರ್ಶವಾಗಬಲ್ಲ ಕತೆಗಳು…
ಚೆನ್ನಾಗಿದೆ…
LikeLike
ಹುಸ್ಸೈನ್ ಭಾಯ್ ಹೆಚ್ಚೂಕಡಿಮೆ ಆ ಅಮ್ಮ ಎಂಬ ನ್ಯಾನೋ ಕಥೆ ಓದುತ್ತಿದ್ದಂತೆ ಕಣ್ಣೀರಾಗಲಿದ್ದೆ.. ಒಂದೊಂದು ಮನಕ್ಕೆ ಹಚ್ಚೆ ಹಾಕಿಸುವ ಹಾಗಿವೆ.. ಹಿಡಿಸಿದವು..:)
LikeLike
super boss
LikeLike
my god u r awesome super line ….ur line composition super …..i took all ur line updated in my face book without ur permission ….hats off ur awesome guy …all r heart touching lines
LikeLike
tumba chennaide 2 matalli nuru arta anno aage
LikeLike