ಮಗ ಕಲಿಸಿದ ಜೀವನ ಪಾಠ · ಸಣ್ಣ ಕತೆ · Kannada Stories, Kannada Kathegalu

Kannada Stories, Kannada Kathegalu

ಸಣ್ಣ ಕತೆ :: ಮಗ ಕಲಿಸಿದ ಜೀವನ ಪಾಠ


ಮಗ : ಅಪ್ಪ .. ನಾನೊಂದು ಪ್ರಶ್ನೆ ಕೇಳಲೇ ..?
ಅಪ್ಪ : ಹ್ಮ್ , ಕೇಳು…
ಮಗ : ನಿಮ್ಮ ಒಂದು ಗಂಟೆಯ ಸಂಪಾದನೆಯೆಷ್ಟು ಅಪ್ಪಾ … ?!
ಅಪ್ಪ : (ಕೋಪದಿಂದ) ನಿನಗ್ಯಾಕೆ ಅದೆಲ್ಲ …?
ಮಗ : ನನಗೆ ಗೊತ್ತಾಗಬೇಕು .. ಪ್ಲೀಸ್ ಅಪ್ಪ … ಹೇಳು … ನಿಮ್ಮ ಒಂದು ಗಂಟೆಯ ಸಂಪಾದನೆಯೆಷ್ಟು ?
ಅಪ್ಪ : (ಕೋಪವನ್ನು ನಿಯಂತ್ರಿಸುತ್ತಾ)ಒಂದು ಸಾವಿರ ರೂಪಾಯಿ..
ಮಗ : ಓಹ್ (ತಲೆ ತಗ್ಗಿಸುತ್ತಾ)
ಮಗ: ಅಪ್ಪಾ , ನನಗೆ ಐನೂರು ರುಪಾಯಿ ಕೊಡ್ತ್ಯಾ ಪ್ಲೀಸ್..
ಮಗನ ಈ ಪ್ರಶ್ನೆ ಕೇಳಿದ್ದೆ ತಡ ತಂದೆ ಕೆಂಡಾಮಂಡಲನಾದ.ಅಪ್ಪ : (ಏರು ದನಿಯಲ್ಲಿ) ಓಹೋ .. ಗೊತ್ತಾಯ್ತು … ಯಾವುದೊ ಅಂಗಡಿಯಲ್ಲಿ ನೋಡಿದ ಆಟಿಕೆ ಖರೀದಿಸಲು ನಿನಗೆ ದುಡ್ಡು ಬೇಕು ಆಲ್ವಾ .. ಹೋಗು .. ತಾಯಿ ಹತ್ರ ಹೋಗಿ ಬಿದ್ಕೋ … ಏನು ಅಂತ ಅನ್ಕೊಂಡಿದ್ದೀಯ .. ಎರಡು ದಿವಸದಲ್ಲಿ ಮುರಿದು ಹಾಕ್ಲಿಕ್ಕೆ ನಾನು ಕಷ್ಟಪಟ್ಟು ಸಂಪಾದಿಸಿದ ಹಣ ಬೇಕಾ ನಿಂಗೆ…?. ಆ ದುಡ್ಡಿನ ಹಿಂದಿನ ಶ್ರಮ ಏನು ಅಂತ ನಿಂಗೆ ಗೊತ್ತಾ…? ನನ್ನ ತಲೆ ಕೆಡಿಸ್ಬೇಡ.. ಹೋಗು…

ಮಗು ಮರುಮಾತನಾಡದೆ ನೇರ ಬೆಡ್ರೂಮ್ ಗೆ ಹೋಗಿ ಬಾಗಿಲು ಹಾಕಿಕೊಂಡ .

ಅಪ್ಪ ಮಗ ಏನೋ ಕೇಳಬಾರದನ್ನು ಕೇಳಿದನೆಂದು ನಖಶಿಖಾಂತ ಉರಿದುಹೋದ.. ‘ಅವನಿಗೆ ಧೈರ್ಯ ಆದರೂ ಹೇಗೆ ಬಂತು ಅಂತಹ ಪ್ರಶ್ನೆ ಕೇಳಿ ನನ್ನಿಂದ ದುಡ್ಡು ಪಡೆಯಲು….’ ಅವನ ಮತ್ತಷ್ಟು ಉದ್ರಿಕ್ತನಾದ ..

ಕೆಲ ಸಮಯದ ಬಳಿಕ ಅವನ ಕೋಪ ಕರಗಿತು.. ಅವನು ಯೋಚಿಸಲು ಆರಂಭಿಸಿದ.. ನನ್ನ ಮಗ ಯಾವತ್ತು ನನ್ನಲ್ಲಿ ದುಡ್ಡು ಕೇಳಿದವನಲ್ಲ.. ಐನೂರು ರುಪಾಯಿ ಏನಾದ್ರೂ ತುಂಬಾ ಅವಶ್ಯ ವಸ್ತುವನ್ನು ಖರೀದಿಸಲು ಆಗಿರಬಹುದೇನೋ… ಅವನು ಯೋಚಿಸುತ್ತಲೇ ಇದ್ದ. ನನ್ನ ಮಗನಲ್ಲಿ ನಾನು ಆ ರೀತಿ ನಡೆದುಕೊಳ್ಳಬಾರದಿತ್ತು … ಛೆ ! ಎಂತಹಾ ತಪ್ಪು ಮಾಡಿಬಿಟ್ಟೆ…

ತಂದೆ ಮೆಲ್ಲ ಮಗನ ಬೆಡ್ರೂಮಿನ ಬಾಗಿಲ ತೆರೆದು ಒಳಹೊಕ್ಕ.

ಅಪ್ಪ : ಮಲಗಿದ್ದೀಯ ಮಗು… ?!
ಮಗ : ಇಲ್ಲಪ್ಪ .. ನಿದ್ದೆ ಬರ್ತಾ ಇಲ್ಲ ಅಪ್ಪಾ ..
ಅಪ್ಪ : ನಾನು ತುಂಬಾ ಕೆಟ್ಟದಾಗಿ ನಡೆದುಕೊಂಡೆ ಮಗೂ.. ಈ ಕೆಲಸದ ಒತ್ತಡ…. ಯಾರದೋ ಮೇಲಿನ ಕೋಪವನ್ನು ನಿನ್ನ ಮೇಲೆ ತೀರಿಸಿಬಿಟ್ಟೆ.. ಹೋಗ್ಲಿ ಬಿಡು…. ತಗೋ ಮಗು.. ನೀನು ಕೇಳಿದ ಐನೂರು ರೂಪಾಯಿ…

ಮಗು ಛಕ್ಕನೆ ಎದ್ದು ಕುಳಿತ… ಅವನ ಕಂಗಳು ಇಷ್ಟಗಲ ಅರಳಿದವು. ನೋಟನ್ನು ಎದೆಗೆ ಅವಚಿಕೊಳ್ಳುತ್ತಾ “ಥಾಂಕ್ ಯೂ ವೆರಿ ಮಚ್ ಅಪ್ಪಾ ..!” ಎಂದವನೇ ಅವಸರದಿಂದ ತನ್ನ ತಲೆ ದಿಂಬಿನ ಕೆಳಗಿನಿಂದ ಹರಕಲಾಗಿ ಮಡಚಿಟ್ಟಿದ್ದ ಮತ್ತಷ್ಟು ನೋಟನ್ನು ಹೊರ ತೆಗೆದು ಮುಗ್ಧವಾಗಿ ಎಣಿಸತೊಡಗಿದ. ಮಗನಲ್ಲಿ ಇನ್ನಷ್ಟು ದುಡ್ಡನ್ನು ಕಂಡ ತಂದೆಯ ಮುಖ ಮತ್ತ್ತೆ ಕೆಂಪೇರಿತು.

ಅಪ್ಪ : ನಿನ್ನಲ್ಲಿ ದುಡ್ಡು ಇದ್ದರೂ ಮತ್ಯಾಕೆ ನನ್ನಲ್ಲಿ ಕೇಳಿದೆ…?

ಮಗ : ಯಾಕೆಂದರೆ ನನ್ನಲ್ಲಿ ಬೇಕಾದಷ್ಟು ಹಣ ಇರಲಿಲ್ಲ. ಈಗ ಬೇಕಾದಷ್ಟಾಯಿತು.

ಈ ಮಾತನ್ನು ಹೇಳುವಾಗ ಮಗನ ಮುಖ ಸಂತಸದಿಂದ ರಂಗೇರಿತ್ತು .

ತಂದೆ ಮಗನ ಮುಖವನ್ನುಶೂನ್ಯ ಭಾವದಿಂದ ದಿಟ್ಟಿಸಿದ .

ಮಗ ತನ್ನ ಮಾತನ್ನು ಮುಂದುವರೆಸಿದ ..

“ಅಪ್ಪಾ ನನ್ನಲ್ಲೀಗ ಒಂದು ಸಾವಿರ ರೂಪಾಯಿ ಇದೆ, ನಿನ್ನ ಸಮಯದಿಂದ ಒಂದು ಗಂಟೆಯನ್ನು ನನಗೆ ಕೊಡು. ನಾಳೆ ಮನೆಗೆ ಬೇಗ ಬಾ.. ನನಗೆ ನಿನ್ನ ಜೊತೆ ಊಟ ಮಾಡ್ಬೇಕು….”

ತಂದೆ ಕುಳಿತಲ್ಲೇ ಅಚೇತನನಾದ. ಅವನು ಆ ಪ್ರಶ್ನೆಗೆ ಉತ್ತರಿಸಲಾಗದೆ ತತ್ತರಿಸಿದ. ಅವನ ದೇಹ ಪ್ರಶ್ನೆಯ ತೀಕ್ಸ್ನತೆಯನ್ನು ತಡೆಯಲಾರದೆ ಬೆವರಿತು. ಉಮ್ಮಡಿಸಿ ಗಂಟಲುಬ್ಬಿ ಮಾತು ಹೊರಡದಾಯಿತು. ಕೂಡಲೇ ತನ್ನೆರಡು ಕೈಗಳನ್ನು ಬಾಚಿ ಮಗನನ್ನು ತಬ್ಬಿಕೊಂಡ ಅವನು ಮಗನ ಹಣೆಗೆ ಮುತ್ತಿಟ್ಟು ಗೊಳೋ ಅಂತ ಅಳತೊಡಗಿದ.

son
ಹಣವೆಂಬ ಅಮೂರ್ತ ಮೌಲ್ಯದ ಹಿಂದೋಡಿ ಸಂಭಂದಗಳನ್ನು ಕಾಲಕಸದಂತೆ ಮಾಡಿದ ಎಲ್ಲ ಹೆತ್ತವರಿಗೊಂದು ಎಚ್ಚರಿಕೆಯ ಕರೆಘಂಟೆ ಇದು. ಜೀವನದ ನಾಗಾಲೋಟದಲ್ಲಿ ನಮ್ಮನ್ನು ಇಷ್ಟಪಡುವವರಿಗಾಗಿ ಒಂದಿಷ್ಟು ಕ್ಷಣವನ್ನು ಮೀಸಲಿಡಿ. ನಿಮ್ಮ ಒಂದು ದಿನದ ಸಾವಿರ ರೂಪಾಯಿ ಮೌಲ್ಯವಿರುವ ಒಂದು ಗಂಟೆಯನ್ನಾದರೂ ಹೃದಯಕ್ಕೆ ಹತ್ತಿರವಾದವರಿಗೆ ನೀಡಿ. ಅದು ಮಹತ್ತರವಾದ ಬದಲಾವಣೆಗೊಂದು ನಾಂದಿಯಾಗಬಹುದು.

ಮುಂದೆ ನೀವು ಸತ್ತಾಗ ನೀನು ನಿಮ್ಮ ಸಮಯವನ್ನೆಲ್ಲವನ್ನು, ಪರಿಶ್ರಮವನ್ನು ಕೊಟ್ಟು ಬೆಳೆಸಿದ ಕಂಪೆನಿ ಒಂದೆರಡು ದಿನದಲ್ಲಿ ಮತ್ತೊಬ್ಬರನ್ನು ನಿಮ್ಮ ಬದಲಾಗಿ ನೇಮಿಸಬಹುದು.
ಆದರೆ ನಿಮ್ಮ ಕುಟುಂಬಕ್ಕೆ, ನಿಮ್ಮ ಮಿತ್ರರಿಗೆ ನೀವಿಲ್ಲದ ನೋವು ಅವರ ಉಳಿದ ಜೀವನ ಪೂರ್ತಿ ಇರುತ್ತದೆ.

ಒಂದು ಕ್ಷಣ ಯೋಚಿಸಿ. ಈ ಅನಿಶ್ಚಿತವಾದ ಪ್ರಪಂಚದಲ್ಲಿ ನಾವ್ಯಾರೂ ಶಾಶ್ವತವಲ್ಲವೆನ್ನುವುದು ಸರ್ವವಿಧಿತ. ಹಣ,ಅಂತಸ್ತನ್ನು ಗಳಿಸುವ ಹೋರಾಟಕ್ಕೆ ತಮ್ಮ ಶಕ್ತಿಯನ್ನೆಲ್ಲಾ ವಿನಿಯೋಗಿಸಿ ಒಂದು ದಿನ ಮೃತ್ಯುವಿನ ಮನೆಯೆಡೆಗೆ ವಿಷಾದಪೂರ್ವಕವಾಗಿ ತೆರಳುವುದರಲ್ಲಿ ಯಾವುದೇ ಅರ್ಥ ಇಲ್ಲ.
ನಮ್ಮ ಬದುಕು ನಮ್ಮದು ಮಾತ್ರವಲ್ಲ. ಅದಕ್ಕೆ ಒಂದಿಷ್ಟು ಪಾಲುದಾರರಿದ್ದಾರೆ. ಅವರಿಗೂ ನಮ್ಮ ಬದುಕನ್ನು ಹಂಚೋಣ.. ಹಂಚಿದಷ್ಟು ಸಂತೋಷ ಹೆಚ್ಚಾಗುವುದು ತಾನೇ..?
ಅಂತಹ ಸಂತಸದ ಬದುಕನ್ನು ನಮ್ಮದಾಗಿಸೋಣ …

ಇತೀ ನಿಮ್ಮ ಪ್ರೀತಿಯ,
ಹುಸೇನ್
ಕಥಾ ಮೂಲ: ಅಂತರ್ಜಾಲ


ಹೇಗಿದೆ ಹೇಳಿ

ಸಣ್ಣ ಕತೆ

ಹಗಲು ಕನಸಿನ ಬೆನ್ನೇರಿ …

ಎಲ್ಲ ಆಧುನಿಕ ಭಾರತೀಯ ಹೆತ್ತವರ ಕನಸಂತೆ ನಾನು ಕೂಡ ಸಾಫ್ಟ್ವೇರ್ ಇಂಜಿನಿಯರಿಂಗ್ ನಲ್ಲಿ ಡಿಗ್ರಿ ಪಡೆದು ಅಮೇರಿಕ ಮೂಲದ MNC ಕಂಪನಿಯಲ್ಲಿ ಉದ್ಯೋಗ ಪಡೆದೆ. ಅಮೇರಿಕ ಎಂಬುದು ನನ್ನ (ನಮ್ಮ )ಪಾಲಿಗೆ ಅವಕಾಶಗಳ ಹೊಸ ಜಗತ್ತು. ಮನಸ್ಸಿನಲ್ಲಿಯೇ ಸಾವಿರಾರು ಹಗಲು ಕನಸಿನ ಗೋಪುರವನ್ನು ಕಟ್ಟಿ, ಆ ಕನಸುಗಳ ಬೆನ್ನೇರಿ ನಾನು ಅಮೆರಿಕಕ್ಕೆ ಹಾರಿದೆ.ಇಲ್ಲಿ ನಾನಂದುಕೊಂಡ ಸೌಲಭ್ಯಗಳು ನನಗೆ ಸಿಕ್ಕಿತು. ಇಲ್ಲೇ ನಾಲ್ಕೈದು ವರ್ಷ ದುಡಿದು, ಕೈ ತುಂಬಾ ಹಣ ಗಳಿಸಿ ಊರಲ್ಲಿ ಸೆಟ್ಲ್ ಆಗಬೇಕೆಂದು ತೀರ್ಮಾನಿಸಿದೆ . ನನ್ನ ತಂದೆಯವರು ಸರ್ಕಾರಿ ಉದ್ಯೋಗಿ. ವರ್ಷಗಳ ಕಾಲ ದುಡಿದು ರಿಟೈರ್ ಆದ ನಂತರ ಅವರು ಗಳಿಸಿದ ಆಸ್ತಿ ಕೇವಲ ಒಂದು ಬೆಡ್ ರೂಂ ಮನೆ ಮಾತ್ರ.

ನಾನು ಅವರಿಗಿಂತ ಹೆಚ್ಚು ಸಂಪಾದನೆ ಮಾಡಬೇಕೆಂದುಕೊಂಡೆ. ಸಮಯ ಉರುಳುತ್ತಾ ಇತ್ತು . ಜೊತೆಗೆ ನನಗೂ ಮನೆಯ ನೆನಪುಗಳು ಕಾಡ ತೊಡಗಿತು . ಇಲ್ಲಿ ಸಿಗುವ international calling card ಮೂಲಕ ವಾರಕ್ಕೊಮ್ಮೆ ನನ್ನ ತಂದೆ ತಾಯಿ ಹತ್ತಿರ ಮಾತನಾಡಿ ಸಮಾಧಾನಪಡುತ್ತಿದ್ದೆ.
ಎರಡು ವರ್ಷ ಉರುಳಿತು . ಎರಡು ವರ್ಷಗಳ ಬರ್ಗರ್, ಪಿಜ್ಜಾ ಹಟ್ ಮತ್ತು ಡಿಸ್ಕೋ …ಅಂತ ಹೇಳಬಹುದು. ಈ ಸಮಯದಲ್ಲಿ ಡಾಲರ್ ಎದುರು ರುಪಾಯಿ ಅಪಮೌಲ್ಯಕ್ಕೊಳಗಾದಾಗೆಲ್ಲ ನಾನು ಒಳಗೊಳಗೇ ಸಂಭ್ರಮಿಸುತ್ತಿದ್ದೆ.

ಕೊನೆಗೊಂದು ದಿನ ನಾನು ಮದುವೆಯಾಗಲು ತೀರ್ಮಾನಿಸಿ, ನನಗೆ ಕೇವಲ ಹತ್ತು ದಿನ ಮಾತ್ರ ರಜ ಇದೆಯೆಂದೂ ಎಲ್ಲವೂ ಅದರೊಳಗೆ ನಡೆಯಬೇಕೆಂದು ತಂದೆ ತಾಯಿಯಲ್ಲಿ ಹೇಳಿದೆ. ಹೋಗುವ ದಿನಾಂಕವನ್ನು ಗೊತ್ತುಪಡಿಸಿ ವಿಮಾನದಲ್ಲಿ ಟಿಕೇಟ್ ಬುಕ್ ಮಾಡಿದೆ. ಮನೆಮಂದಿಗೆ ಮತ್ತು ಗೆಳೆಯರಿಗೆಲ್ಲ ಉಡುಗೊರೆಯನ್ನು ಖರೀದಿಸಿದೆ. ಅವರೆಲ್ಲರನ್ನು ಸಂತೋಷಗೊಳಿಸಬೇಕೆಂಬ ಹಂಬಲ ನನ್ನಲ್ಲಿತ್ತು. ಮನೆಗೆ ಬಂದವನೇ ಒಂದು ವಾರ ರಾಶಿಬಿದ್ದ ಹುಡುಗಿಯರ ಫೋಟೋದಲ್ಲಿ ಯಾರನ್ನು ಆರಿಸಬೇಕೆಂಬ ಗೊಂದಲದಲ್ಲಿ ಕಳೆದೆ. ನನ್ನ ರಜೆ ಮುಗಿತಾ ಬಂತು, ಕೊನೆಗೆ ಸಮಯದ ಅಭಾವನ್ನು ಅರಿತ ನಾನು ಒಬ್ಬಳನ್ನು ಆರಿಸಲೆಬೇಕಾದ ಪರಿಸ್ಥಿತಿಗೆ ತಲುಪಿದೆ.

ಮುಂದಿನ ಮೂರು ದಿನಗಳಲ್ಲಿ ಮದುವೆ ಕಳೆಯಿತು …!, ಹೆಚ್ಚಿನ ರಜ ಸಿಗದ ಕಾರಣ ನಾನು ಮತ್ತೆ ಅಮೆರಿಕಾಗೆ ಹೊರಟು ನಿಂತೆ. ಸ್ವಲ್ಪ ಹಣವನ್ನು ಹೆತ್ತವರಿಗೊಪ್ಪಿಸಿ , ನೆರೆ ಮನೆಯವರಲ್ಲಿ ಅವರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿ ಹೊರಟೆ …

ಆರಂಭದಲ್ಲಿ ನನ್ನ ಹೆಂಡತಿಗೂ ಇಲ್ಲಿಯ ವಾತಾವರಣ ಇಷ್ಟವಾಯ್ತು .. ಕ್ರಮೇಣ ಅವಳಿಗೂ ಮನೆಯ ನೆನಪುಗಳು ಕಾಡತೊಡಗಿತು. ಜೊತೆಗೆ ಊರಿಗೆ ಮಾಡುವ ಕಾಲ್ ಗಳ ಸಂಖ್ಯೆ ವಾರದಲ್ಲಿ ಒಂದರಿಂದ ನಾಲ್ಕು-ಐದಕ್ಕೆ ಏರಿತ್ತು. ಜೊತೆಗೆ ನಮ್ಮ ಉಳಿತಾಯವೂ ಕ್ಷೀಣಿಸುತ್ತಾ ಬಂತು .ಎರಡು ವರ್ಷಗಳ ನಂತರ ನಮಗೆಮೊದಲ ಮಗು ಹುಟ್ಟಿತು . ಇನ್ನೆರಡು ವರ್ಷದಲ್ಲಿ ಮತ್ತೊಂದು ಮಗುವಾಯ್ತು .ಒಂದು ಗಂಡು, ಒಂದು ಹೆಣ್ಣು ಮಗುವನ್ನು ದೇವರು ಕರುಣಿಸಿದ. ಪ್ರತೀ ಬಾರಿ ನಾನು ಕಾಲ್ ಮಾಡಿದಾಗಲೂ ತಂದೆ ತಾಯಿ ಅವರ ಮುದ್ದು ಮೊಮ್ಮೊಕ್ಕಳನ್ನು ನೋಡಲು, ಭಾರತಕ್ಕೆ ಬರುವಂತೆ ಒತ್ತಡ ಹೇರುತ್ತಿದ್ದರು.

ಪ್ರತೀ ವರ್ಷ ಊರಿಗೆ ಹೋಗುವ ಪ್ಲಾನ್ ಹಾಕ್ತಾ ಇದ್ದೆ. ಕೆಲವೊಮ್ಮೆ ಕೆಲಸ, ಮತ್ತೊಮ್ಮೆ ಏನಾದ್ರೂ ಅನಿವಾರ್ಯ ಕಾರಣಗಳಿಂದ ಅದು ಸಾಧ್ಯವಾಗಲೇ ಇಲ್ಲ. ಭಾರತ ನಮ್ಮ ಪಾಲಿಗೆ ದೂರವಾಗುತ್ತಾ ಬಂತು.

ಅದೊಂದು ದಿನ ಅಚಾನಕ್ಕಾಗಿ ನನ್ನ ಮೊಬೈಲಿಗೆ ಸಂದೇಶ ಬಂತು. ಓದುತ್ತಿದ್ದಂತೆ ನಾನು ಕುಸಿದು ಬಿದ್ದೆ , ನನ್ನ ತಂದೆ ತಾಯಿ ಪಯಣಿಸುತ್ತಿದ್ದ ಕಾರು ಅಪಘಾತವಾಗಿದೆಯೆಂದೂ ತಕ್ಷಣ ನಾನು ಹೊರಡಬೇಕೆಂದು ಆಗಿತ್ತು ಆ ಸಂದೇಶ. ನಾನು ರಜೆಗೆ ಅರ್ಜಿ ಹಾಕಿದರೂ ರಜ ಸಿಗಲಿಲ್ಲ . ಮತ್ತೆ ಬಂದ ಮೆಸೇಜ್ ಅವರಿಬ್ಬರೂ ಇಹಲೋಕ ತ್ಯಜಿಸಿದ್ದಾರೆಂದಾಗಿತ್ತು . ನನಗೆ ಆಕಾಶವೇ ನನ್ನ ತಲೆಯ ಮೇಲೆ ಬಿದ್ದ ಅನುಭವ. ಅವರ ಕೊನೆಯ ಕರ್ಮಗಳನ್ನು ಮಾಡಲು ಯಾರೂ ಇಲ್ಲದೆ ಕೊನೆಗೆ ನಮ್ಮ ಸಂಬಂಧಿಗಳು ಸೇರಿ ಅದನ್ನು ನೆರವೇರಿಸಿದ್ದರು. ನಾನು ಮಾನಸಿಕವಾಗಿ ಜರ್ಜರಿತನಾದೆ. ನನ್ನ ಹೆತ್ತವರು ಅವರ ಮೊಮ್ಮಕ್ಕಳ ಮುಖವನ್ನು ನೋಡದೆ ಅಗಲಿದ್ದರು.

ಒಂದಿಷ್ಟು ವರ್ಷಗಳ ನಂತರ ನನ್ನ ಮಕ್ಕಳ ವಿರೋಧದ ನಡುವೆಯೂ ನಾವು ಭಾರತಕ್ಕೆ ಹಿಂದಿರುಗಿ ಬಂದೆವು . ನಾನು ನನ್ನದೇ ಆದ ಬಿಸಿನೆಸ್ ಶುರು ಮಾಡಲು ಪ್ರಾಪರ್ಟಿ ಖರೀದಿಸಲು ಮುಂದಾದೆ. ನನ್ನ ಉಳಿತಾಯ ಕಡಿಮೆ ಇದ್ದ ಕಾರಣ ನಾನಿಚ್ಚಿಸಿದಂಥಹ ಪ್ರಾಪರ್ಟಿ ಸಿಗಲಿಲ್ಲ . ಅದಲ್ಲದೆ ಈ ವರ್ಷಗಳಲ್ಲಿ ಭಾರತದಲ್ಲೂ ಪ್ರತೀ ವಸ್ತುವಿನ ಬೆಲೆ ಗಗನಕ್ಕೇರಿದ್ದವು. ಕೊನೆಗೆ ಅನ್ಯ ಮಾರ್ಗವಿಲ್ಲದೆ ನಾನು ಅಮೆರಿಕಕ್ಕೆ ಹೊರಟೆ.

ನನ್ನ ಹೆಂಡತಿ ಅಮೆರಿಕಕ್ಕೆ ಹೊರಡಲು ಒಪ್ಪಲಿಲ್ಲ . ಮಕ್ಕಳು ಭಾರತದಲ್ಲಿರಲು ಒಪ್ಪಲಿಲ್ಲ. ಎರಡು ವರ್ಷಗಳ ನಂತರ ನಾವು ಹಿಂದಿರುಗುವುದಾಗಿ ಹೆಂಡತಿಗೆ ಮಾತು ಕೊಟ್ಟು ನಾನು ಮಕ್ಕಳೊಂದಿಗೆ ಅಮೆರಿಕಕ್ಕೆ ಬಂದೆ.
ಕಾಲ ಉರುಳಿತು. ನನ್ನ ಮಗಳು ಮದುವೆಯಾಗಲು ತೀರ್ಮಾನಿಸಿ, ಅಮೇರಿಕ ಹುಡುಗನನ್ನು ವರಿಸಿದಳು. ನನ್ನ ಮಗನೂ ಅಮೆರಿಕವನ್ನು ಬಿಟ್ಟಿರುವ ಪರಿಸ್ಥಿತಿಯಲ್ಲಿರಲಿಲ್ಲ.
ನನಗೂ ವಯಸ್ಸಾಗುತ್ತಾ ಬಂತು. ಜೀವನದಲ್ಲಿ ಬಹಳಷ್ಟು ನೋವನ್ನೂ ಅನುಭವಿಸಿದ ನಾನು ಕೊನೆಗೆ ಎಲ್ಲವನ್ನು ತೊರೆದು ಭಾರತಕ್ಕೆ ಹೊರಟೆ.
ಊರಿಗೆ ಬಂದವನೇ ನನ್ನ ಉಳಿತಾಯದಿಂದ, ನಗರದ ಹೃದಯ ಭಾಗದ ಅಪಾರ್ಟ್ಮೆಂಟ್ ಒಂದರಲ್ಲಿ ಎರಡು ಬೆಡ್ರೂಮ್ ಫ್ಲಾಟ್ ಖರೀದಿಸಿದೆ.

ನನಗೀಗ ಅರುವತ್ತು ವರ್ಷ. ನಾನು ಮನೆಯಿಂದ ಹೊರಗೆ ಹೋಗುವುದು ಹತ್ತಿರದ ದೇವಸ್ಥಾನಕ್ಕೆ ಮಾತ್ರ. ನನ್ನ ಪ್ರಿಯ ಧರ್ಮಪತ್ನಿ ಕೂಡ ನನ್ನ ತೊರೆದು ಸ್ವರ್ಗ ಸೇರಿದ್ದಾಳೆ.

ಈ ಏಕಾಂತತೆಯ ಕತ್ತಲಲ್ಲಿ ಒಬ್ಬನೇ ಇರುವಾಗ ನಾನು ಯೋಚಿಸುತ್ತೇನೆ. ನನ್ನ ಜೀವನ… ನನ್ನ ಜೀವನವನ್ನು ನಾನು ಜೀವಿಸಿದ್ದೀನ..?
ನನ್ನ ತಂದೆ .. ನನ್ನ ತಂದೆ ತಾಯ್ನೆಲದಲ್ಲೇ ಇದ್ದು ತನ್ನ ಸ್ವಂತ ಹೆಸರಲ್ಲೇ ಮನೆಯನ್ನು ಹೊಂದಿದ್ದ . ನನ್ನಲ್ಲೂ ಅದೇ ಇದೆ.. ಏನು ಹೆಚ್ಚಿಲ್ಲ..

ನನ್ನ ತಂದೆಯನ್ನು ಹಾಗೂ ಮಕ್ಕಳನ್ನು ಕಳೆದುಕೊಂಡಿದ್ದೇನೆ …. ಯಾಕೆ ..?! “ಯಾಕೆ ನಾನು ಇಷ್ಟೆಲ್ಲಾ ಅನುಭವಿಸಿದ್ದು ..?” ಕೇವಲ ಒಂದು ಹೆಚ್ಚುವರಿ ಬೆಡ್ ರೂಮಿಗಾಗಿ …?!.
ಕಿಟಕಿಯಿಂದ ನಾನು ಆಡುವ ಮಕ್ಕಳನ್ನು ನೋಡುತ್ತಿದ್ದೇನೆ.. ನನಗೂ ಭಯವಾಗುತ್ತಿದೆ. ಈ ಡಿಜಿಟಲ್ ಸೆಟಪ್ ಬಾಕ್ಸ್ TV ಗಳು, ಇಂಟರ್ನೆಟ್’ಗಳು , 3G ,4G ಟೆಕ್ನಾಲಜಿಗಳು ನಮ್ಮ ಹೊಸ ತಲೆಮಾರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ನಮ್ಮಆಚಾರ , ವಿಚಾರ, ಸಂಸ್ಕೃತಿಗಳಿಂದ ಅವರನ್ನು ವಿಮುಖರನ್ನಾಗಿ ಮಾಡಿವೆ. ಆಧುನಿಕತೆಯ ಭರಾಟೆಯಲ್ಲಿ ಸಿಲುಕಿಕೊಂಡಿರುವ ನಾವು ನಮ್ಮ ಬದುಕನ್ನು ಹೇಗೆ ಕಟ್ಟಬೇಕೆಂದು ತಿಳಿಯದಷ್ಟು ವಿವೇಚನಾಶೂನ್ಯರಾಗಿದ್ದೇವೆ. ಅಸ್ಥಿರ ಮತ್ತು ವೇಗವಾದ ಜೀವನವೇ ಬದುಕಿನ ವೌಲ್ಯ ಎಂದು ಪರಿಗಣಿಸಿರುವ ನಾವು ಸಂಯಮ ಮತ್ತು ಸರಳತೆಯಿಂದ ಕೂಡಿದ ಜೀವನ ವ್ಯವಸ್ಥೆಯಿಂದ ದೂರವಾಗಿದ್ದೇವೆ. ಹಣ ಮತ್ತು ನಗರ ಕೇಂದ್ರೀಕೃತ ಯಾಂತ್ರಿಕ ಸಂಸ್ಕೃತಿಗೆ ಮಾರು ಹೋಗಿ ಬರೀ ದುಡ್ಡು ಗಳಿಸುವ ಯಂತ್ರಗಳಾಗಿದ್ದೇವೆ.

ನನ್ನ ಮಕ್ಕಳಿಂದ ಪ್ರತೀ ಹಬ್ಬಕ್ಕೆ ಕಾರ್ಡ್ಸ್ ಬರುತ್ತೆ .. ಅವರಾದರೂ ನನ್ನ ನೆನಪು ಮಾಡಿಕೊಳ್ಳುತ್ತಾರೆಂಬ ಸಮಾಧಾನವಿದೆ . ನನಗೆ ಗೊತ್ತು, ನಾನು ಸತ್ತಾಗ ನನ್ನ ನೆರೆಹೋರೆಯವರೇ ನನ್ನ ಅಂತ್ಯ ಸಂಸ್ಕಾರ ಮಾಡುತ್ತಾರೆ. ದೇವರು ಅವರನ್ನು ಅನುಗ್ರಹಿಸಲಿ …!

ಆದರೆ .. ಆದರೆ ಆ ಪ್ರಶ್ನೆ ಇನ್ನು ಬಾಕಿ ಉಳಿದಿದೆ … “ಯಾಕಾಗಿ ನಾನು ಇದೆಲ್ಲವನ್ನು ಮಾಡಿದ್ದು ..?”
“ಒಂದು ಹೆಚ್ಚುವರಿ ಬೆಡ್ ರೂಮಿಗಾಗಿ…?!”
ಸ್ಪಷ್ಟ ಉತ್ತರ ಇನ್ನು ಸಿಕ್ಕಿಲ್ಲ ….

ಒಂದು ಕ್ಷಣ ಯೋಚಿಸಿ ….!
“ಕೇವಲ ಒಂದು ಹೆಚ್ಚುವರಿ ಬೆಡ್ ರೂಮಿಗಾಗಿ ನಾನು ಎಲ್ಲವನ್ನು ಕಳೆದುಕೊಂಡದ್ದು” .
ಜೀವನ ಇದಕ್ಕಿಂತ ಎಷ್ಟೋ ದೊಡ್ಡದು. ಜೀವನವನ್ನು ಸುಮ್ಮನೆ ಕಳೆದುಕೊಳ್ಳಬೇಡಿ..
ಜೀವಿಸಿ. ಪ್ರತೀಕ್ಷಣ …ನಿಮಗೆ ಇಷ್ಟವಾದಂತೆ .., ಜೀವಕ್ಕೆ ವರ್ಷಗಳನ್ನು ತುಂಬಬೇಡಿ..ವರ್ಷಗಳಿಗೆ ಜೀವ ತುಂಬಿ ……!!
ಆಲ್ ದ ಬೆಸ್ಟ್ ….!

ಹುಸೇನ್
ಮೂಲ : ಅಂತರ್ಜಾಲ


ಹೇಗಿದೆ ಹೇಳಿ

ನ್ಯಾನೋ ಕಥೆಗಳು

ಒಂದಿಷ್ಟು ನ್ಯಾನೋ ಕತೆಗಳು

ZSDEMAU EC001
ಹೊಸತು
ಯಾವತ್ತೂ ಹೊಸತನವನ್ನು ಇಷ್ಟಪಡುತ್ತಿದ್ದ ಅವನು ಹೊಸದಾಗಿ ಬಂಗಲೆಯನ್ನು ಕಟ್ಟಿದ. ಅದರಲ್ಲಿ ಎಲ್ಲಾ ವಸ್ತುಗಳೂ ಹೊಸತಾಗಿದ್ದವು. ಹಳೆ ಮನೆಯ ಸಾಮಾಗ್ರಿಗಳನ್ನೆಲ್ಲವನ್ನೂ ಹಳೆಯದು ಎಂಬ ಕಾರಣಕ್ಕೆ ಅಲ್ಲೇ ಬಿಟ್ಟಿದ್ದ. ಕೊನೆಗೆ ಹೆಂಡತಿಯ ಅಣತಿಯಂತೆ ವಯಸ್ಸಾದ ತಾಯಿಯನ್ನೂ ವೃದ್ಧಾಶ್ರಮಕ್ಕೆ ಸೇರಿಸಿದ.

ಧರ್ಮ
“ಧರ್ಮಗಳು ಮನುಷ್ಯರನ್ನು ಒಗ್ಗೂಡಿಸಲೇ ಹೊರತು ಬೇರ್ಪಡಿಸುವುದಕ್ಕಲ್ಲ” ಅಂತ ಭಾಷಣ ಮಾಡಿದ ಧರ್ಮ ಗುರುಗಳು ಅನ್ಯ ಜಾತಿಯವನನ್ನು ಪ್ರೀತಿಸಿದ ತನ್ನ ಮಗಳನ್ನು “ಮರ್ಯಾದ ಹತ್ಯೆ” ಮಾಡಿದ ತಪ್ಪಿಗೆ ಜೀವಿತಾವಧಿ ಜೈಲು ಶಿಕ್ಷೆ ಅನುಭವಿಸಿತ್ತಿದಾನೆ.

ನೆನಪು
ಒಂದನೇ ತರಗತಿಯಲ್ಲಿದ್ದಾಗ ತನ್ನ ಶಾಲೆಯಲ್ಲಿ ಮೊದಲ ಬಾರಿಗೆ ಏರ್ಪಡಿಸಿದ್ದ ಚಲನ ಚಿತ್ರ ಪ್ರದರ್ಶನ ನೋಡುತ್ತಿದ್ದ ಹುಡುಗನನ್ನು ತಂದೆ ತೀರಿ ಹೋಗಿದ್ದಾರೆ ಅಂತ ಎಳೆದುಕೊಂಡು ಹೋಗಿದ್ದರು. ಈಗ ಯುವಕನಾದ ಆತನಿಗೆ ಸತ್ತ ತಂದೆಯ ಮುಖಕ್ಕಿಂತ ಅರ್ಧ ನೋಡಿದ ಆ ಚಿತ್ರವೇ ಹೆಚ್ಚು ನೆನಪಾಗುತ್ತಿತ್ತು.

ಕಲೆ
ಅವನೊಬ್ಬ ಸಾಧ್ವಿ. ಬದುಕುವ ಕಲೆಯನ್ನು ಬೋಧಿಸುತ್ತಿದ್ದ.. ದೇಶ ವಿದೇಶದಲ್ಲಿ ಸಾವಿರಾರು ಶಿಷ್ಯಗಣವನ್ನೂ ಹೊಂದಿದ್ದ. ಕೊನೆಗೊಮ್ಮೆ ಆತ ಸತ್ತ. ಅಂದ ಹಾಗೆ ಸಾವು ಸಹಜವಲ್ಲಂತೆ.. ಆತ್ಮಹತ್ಯೆಯಂತೆ..!

ಪ್ರೀತಿ
ಪ್ರೀತಿಯೆಂದರೆ ಬೆಸುಗೆ, ಬಂಧ, ಬಂಧನ, ಅದೇ ಬದುಕು ಅಂತಿದ್ದ ಪ್ರೇಮಿಯೊಬ್ಬ ಅಕಾಲ ಮರಣವನ್ನಪ್ಪಿದ. ಅಂದ ಹಾಗೆ ಅವನು ಪ್ರೇಯಸಿ ಕೈ ಕೊಟ್ಟಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡದ್ದಂತೆ.

ಭಾಗ್ಯ
ಮದುವೆಯ ಮುಂಚಿನ ದಿನ ಓಡಿ ಹೋದ ಮಗಳನ್ನು ನೆನಪಿಸಿ ಕಂಬನಿ ಮಿಡಿಯುತ್ತಿದ್ದ ತಾಯಿಗೆ, ಇಷ್ಟಪಟ್ಟವನೊಂದಿಗೆ ಬಾಳಲಾಗದ ತನ್ನ ಬಾಳು ಒಮ್ಮೆಲೇ ನೆನಪಾಗಿ ತನಗೆ ಸಿಗದ ಭಾಗ್ಯ ಮಗಳಿಗೆ ದೊರೆಯಿತೆಂದು ಮರುಕ್ಷಣದಿಂದ ಸಂತೋಷಪಟ್ಟಳಂತೆ..!


Leave a Comment

ಕನ್ನಡ ಬ್ಲಾಗಲ್ಲಿ ಓದಲು ಇಲ್ಲಿ ಕ್ಲಿಕ್ಕ್ಕಿಸಿ

ನ್ಯಾನೋ ಕಥೆಗಳು

ಇನ್ನಷ್ಟು ನ್ಯಾನೋ ಕತೆಗಳು


ಕೋಮುವಾದ
ಆತ ಸಂಘಟನೆಯೊಂದರ ಮುಖಂಡ ಹಾಗು ಸ್ವಯಂ ಘೋಷಿತ ರಾಷ್ಟ್ರ ಭಕ್ತ ..ಭಿನ್ನ ಕೋಮಿನ ಯುವಕ ಯುವತಿಯರು ಮಾತಾಡುವುದನ್ನು ಸಂಸ್ಕೃತಿಯ ಹೆಸರಲ್ಲಿ ವಿರೋಧಿಸುತ್ತಿದ್ದ . ಅದಕ್ಕಾಗಿ ನೈತಿಕ ಪೋಲೀಸರ ಗುಂಪನ್ನೇ ಬೆಳೆಸಿದ್ದ.
ಅದೊಂದು ದಿನ ಆತ ಎಲ್ಲೋ ಹೊರಡಲು ಅಣಿಯಾಗುತ್ತಿದ್ದಂತೆ ಮೊಬೈಲ್ ರಿಂಗಣಿಸಿತು.. ಅಣ್ಣಾ.. ಇಬ್ಬರನ್ನು ಪಾರ್ಕಿನಲ್ಲಿ ಹಿಡ್ಕೊಂದಿದ್ದೀವಿ .. ಹುಡುಗಿ ನಮ್ಮ ಜಾತಿ.. ಹುಡುಗ ಬೇರೆ ಜಾತಿ.. “ಬಿಡಬೇಡಿ.. ಅವರನ್ನ .. ಸರಿಯಾಗಿ ಬುದ್ದಿ ಕಲಿಸಿ ”
ಆತ ಫೋನಿಟ್ಟ . ಸಂಜೆ ಮನೆಗೆ ಬಂದಾಗ ಕಾಲೇಜಿಂದ ಬಂದ ತನ್ನ ಮಗಳ ಬೆನ್ನಲ್ಲಿ ಬಾಸುಂಡೆ ಎದ್ದಿತ್ತು.

ಶವಪೆಟ್ಟಿಗೆ
ಆತ ಶವಪೆಟ್ಟಿಗೆ ತಯಾರಿಸಿ ಮಾರಾಟ ಮಾಡುತ್ತಿದ್ದ. ಮಳೆಗಾಲದಲ್ಲಿ ಆತನ ವ್ಯವಹಾರ ಕುಸಿದಿತ್ತು. ಮಾತಿನ ನಡುವೆ “ಈ ಮಳೆಗಾಲದಲ್ಲಿ ಯಾರೂ ಸತ್ತಿಲ್ಲ” ಅಂತ ತನ್ನ ತನ್ನ ಗೆಳೆಯನಲ್ಲಿ ಅಳಲು ತೋಡಿಕೊಳ್ಳುವಷ್ಟರಲ್ಲಿ ‘ನಮ್ಮೂರಿಗೆ ಬರುತ್ತಿದ್ದ ಗವರ್ಮೆಂಟ್ ಬಸ್ಸು ಸೇತುವೆ ಕೆಳಗೆ ಬಿದ್ದು ಕೆಲವರು ಸತ್ರಂತೆ ‘ ಓಡಿ ಬಂದ ಅವನ ಸಹಾಯಕ ಏದುಸಿರು ಬಿಡುತ್ತ ಉಸುರಿದ. ಆತನಿಗೆ ಒಳಗೊಳಗೇ ಸಂಭ್ರಮ. ಕೂಡಲೇ ಕಾರ್ಯ ಪ್ರವೃತ್ತನಾದ. ಕೆಲ ಸಮಯದ ಬಳಿಕ ಮೊಬೈಲ್ ರಿಂಗಣಿಸಿತು.. “ರೀ.. ರೀ… ನಮ್ .. ನಮ್… ನಮ್ಮಗಳು ಬ.. ಬ ಬಸ್ಸು ಸೇ .. ಸೇ..ಸೇತುವೆ ” ಆತ ಫೋನಿಟ್ಟು ತನ್ನ ಮಗಳಿಗೆ ಸರಿ ಹೊಂದುವ ಶವಪೆಟ್ಟಿಗೆಯನ್ನು ಹುಡುಕಾಡ ತೊಡಗಿದ.

ದೂರ
ಆಗಷ್ಟೇ ಯಶಸ್ವಿಯಾಗಿ ಚಂದ್ರಯಾನ ಮುಗಿಸಿ ಬಂದ ಭಾರತೀಯ ಮೂಲದ ನಾಸಾ ವಿಜ್ಞಾನಿಯ ತಾಯಿಯನ್ನು ಮಾತನಾಡಿಸಲು ಪತ್ರಕರ್ತರು ಅವರ ಮನೆಗೆ ಬಂದಿದ್ದರು. “ನಿಮ್ಮ ಮಗ ಕೊನೆಯ ಬಾರಿಗೆ ನಿಮ್ಮನ್ನು ನೋಡಲು ಬಂದದ್ದು ಯಾವಾಗ ?” . ಮಾತಿನ ನಡುವೆ ತೂರಿ ಬಂದ ಪ್ರಶ್ನೆಗೆ ಉತ್ತರಿಸಲಾರದೆ ಆಕೆಗೆ ದುಃಖ ಒತ್ತರಿಸಿ ಬಂದಿತ್ತು. ಬಹುಶಃ ಚಂದ್ರ ಲೋಕಕ್ಕಿಂತ ತಾಯಿ ಮನೆ ಮಗನಿಗೆ ದೂರವಾಗಿದ್ದಿರಬೇಕು.

ಭಕ್ತಿ
ಇಬ್ಬರು ಗೆಳೆಯರಲ್ಲಿ ಒಬ್ಬ ಅಪ್ಪಟ ದೈವ ಭಕ್ತನಾಗಿದ್ದ. ಏನೇ ಕೆಲಸಕ್ಕೂ ದೇವರ ಮೊರೆ ಹೋಗುತ್ತಿದ್ದ. ಅವರಿಬ್ಬರೂ ಮಾವಿನ ಮರದ ಕೆಳಗಡೆಯಿಂದ ಹಾದು ಹೋಗಲು ಅದರ ಹಣ್ಣು ಅವರ ಕಣ್ಣು ಕುಕ್ಕಿತು. ದೈವ ಭಕ್ತ ಅಲ್ಲೇ ದೇವರಿಗೆ ಮೊರೆಯಿಟ್ಟ .”ಭಗವಂತಾ.. ಒಂದು ಹಣ್ಣನ್ನಾದರೂ ಬೀಳಿಸು…! ” ಮತ್ತೊಬ್ಬ ಕಲ್ಲೆತ್ತಿ ಎಸೆದ .. ಹಣ್ಣು ಬಿತ್ತು .. ಹಣ್ಣನ್ನು ಚಪ್ಪರಿಸುತ್ತ ಆತ ಗೆಳೆಯನನ್ನು ದಿಟ್ಟಿಸಿದ.. ಅವನು ಪ್ರಾರ್ಥಿಸುತ್ತಲೇ ಇದ್ದ.

ವಿಚಿತ್ರ
“ಸಹನೆಯನ್ನು ಬೆಳೆಸಿ ..ಹಿಂಸೆಯಿಂದ ಸಾಧಿಸುವುದೆನಿಲ್ಲ …” ಎಂದು ಟ್ವೀಟ್ ಮಾಡಿ ಶಾಂತಿದೂತನಾದ ಬಾಲಿವುಡ್ ನಾಯಕನೊಬ್ಬ .. ಮರುದಿನ ಪಾರ್ಟಿಯಲ್ಲಿ ಗೆಳತಿಯ ಗಂಡನಿಗೆ ಕಪಾಳಮೋಕ್ಷ ಮಾಡಿದ್ದ..!

ವಿಪರ್ಯಾಸ
ಆತ ಕಟ್ಟಾ ಬ್ರಹ್ಮಚಾರಿ.. ದಿನಕ್ಕೆ ನಾಲ್ಕು ಕಡೆ ಬ್ರಹ್ಮಚರ್ಯೆಯ ಬಗ್ಗೆ ಕ್ಯಾಂಪ್ ನಡೆಸಿ ಜನರನ್ನು ಸೆಳೆಯುತ್ತಿದ್ದ. ವಿಪರ್ಯಾಸವೆಂದರೆ ಆತನ ತಂದೆಯೂ ಅವನ ಹಾದಿ ಹಿಡಿದಿದ್ದರೆ ಇಂದು ಆತ ಇರುತ್ತಿರಲಿಲ್ಲ ಎಂಬುದನ್ನು ಮರೆತಿದ್ದ.

Leave a Comment

ನ್ಯಾನೋ ಕಥೆಗಳು

ಒಂದಿಷ್ಟು ನ್ಯಾನೋ ಕತೆಗಳು


ದುಬಾರಿ ಕಸ
ನಗರದ ತ್ಯಾಜ್ಯ ವಿಲೇವಾರಿಯನ್ನು ಸುಗಮ ಗೊಳಿಸಲು ಸರಕಾರವು ವಿದೇಶದಿಂದ ಅತ್ಯಾದುನಿಕ ಕಸದ ತೊಟ್ಟಿಗಳನ್ನು ತರಿಸಿ ಬೀದಿ ಬೀದಿಯಲ್ಲಿ ಸ್ಥಾಪಿಸಿದ್ದರು. ಅದರ ಅಂದ ನೋಡುತ್ತಾ ಇಬ್ಬರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು…’ಇದರಲ್ಲೂ ಹಾಕುವ ಕಸವು ಅಷ್ಟೇ “ದುಬಾರಿಯದ್ದಾಗಿರಬೇಕು”…’ ಮತ್ತೊಬ್ಬ ಹೌದೆನ್ನುತ್ತ ತಲೆಯಾಡಿಸಿದ.. ಮರುದಿನ ಬೆಳಿಗ್ಗೆ ಕಸದೊಂದಿಗೆ ಆಗಷ್ಟೇ ಹುಟ್ಟಿದ ನವ ಜಾತ ಹೆಣ್ಣು ಮಗು ಸಿಕ್ಕಿತ್ತು.

ಹಣ

ಆತ ಮದುವೆಯಾಗಿ ೬ ತಿಂಗಳಾಗುವಷ್ಟರಲ್ಲಿ ಉದ್ಯೋಗ ಅರಸಿ ದುಬೈಗೆ ಹೊರಟ. ಕೈ ತುಂಬಾ ಸಂಬಳದ ಕೆಲಸವೊಂದು ಸಿಕ್ಕಿತ್ತು.. ಒಂದು ವರ್ಷದಲ್ಲೇ ತನ್ನದೇ ಆದ ಬಿಸಿನೆಸ್ ಆರಂಭಿಸಿದ. ನೋಡ ನೋಡುತ್ತಲೇ ಆತ ಕೊಟ್ಯಾದಿಪತಿಯಾದ .. ವರ್ಷಗಳ ನಂತರ ಕೈ ತುಂಬು ದುಡ್ದೊಂದಿಗೆ ಆತ ಆತ ಊರಿಗೆ ಹೊರಟಿದ್ದ . ತನ್ನ ಹೆಂಡತಿಯ ಜೊತೆಗಿದ್ದ ಹಾಲುಗಲ್ಲದ ಮಗು ಆತನ್ನು ನೋಡಿದವನೇ ಕೈ ತೋರಿಸಿ “ಇದ್ಯಾರಮ್ಮ ” ಅಂತ ಕೇಳಿದ.. ಆತನಿಗೆ ಮೊತ್ತ ಮೊದಲಾಗಿ ಹಣದ ಮೇಲೆ ಜಿಗುಪ್ಸೆ ಹುಟ್ಟಿತು.

ವಿಚಿತ್ರ
ಫೇಸ್ ಬುಕ್ ನಲ್ಲಿ ಸಿಕ್ಕ ಸಿಕ್ಕವರ ವಾಲ್ ಮೇಲೆ ಪೋಸ್ಟ್ ಮಾಡಿದ ಅವನು .. ತನ್ನ ಸ್ವಂತ ಮನೆಯ ಗೋಡೆ ಮೇಲೆ ತನ್ನ ಮಗ ಕರಿ ಹಲಗೆಯಿಂದ ಚಿತ್ರ ಗೀಚಿದ್ದನ್ನು ನೋಡಿ ಕೆಂಡಾಮಂಡಲನಾದ .

ನಂಬಿಕೆ
‘ನಂಬಿಕೆಯೇ ದಾಂಪತ್ಯದ ಬುನಾದಿ’. ಧರ್ಮ ಗುರುಗಳು ದಾಂಪತ್ಯದ ಬಗ್ಗೆ ಉಪನ್ಯಾಸ ನೀಡುತ್ತಾ ನುಡಿದರು . ಹೌದು .. ಒಬ್ಬರಿಗೊಬ್ಬರು ಮಾಡಿದ ಮೋಸ ತಿಳಿದಿಲ್ಲವೆಂಬ ಅಚಲ ನಂಬಿಕೆ.. ಸಭಿಕರಲ್ಲೊಬ್ಬ ಪಿಸುಗುಟ್ಟಿದ.

ವಿಪರ್ಯಾಸ
ಬೋಳು ತಲೆಯವ ತನಗಾಗಿ ಹೆಣ್ಣು ನೋಡಲು ಹೋಗಿ .. ಹುಡುಗಿಯ ಕೂದಲು ಉದ್ದವಿಲ್ಲವೆಂದು ತಿರಸ್ಕರಿಸಿ ಬಂದಿದ್ದ..


Leave a Comment

ನ್ಯಾನೋ ಕಥೆಗಳು

ತಾಯಿ – ಮಗ

ತನ್ನ ಮಗನು ಅಮೇರಿಕಾದಲ್ಲಿ ಪ್ರತಿಷ್ಟಿತ ಕಂಪೆನಿಯಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಬಡ್ತಿ ಪಡೆದ ಖುಷಿಯಲ್ಲಿ ಆಕೆ ತನ್ನವರಿಗೆಲ್ಲರಿಗೂ ಸಿಹಿ ಹಂಚುತ್ತಿದ್ದಳು.. “ಎಲ್ಲರು ಒಳಗೆ ಬನ್ನಿ ವ್ಯಾಯಾಮದ ಸಮಯವಾಯ್ತು” ಆ ಕೂಡಲೇ ಒಳಗಿಂದ ಬಂಗ ಕೂಗಿಗೆ ಓಗೊಟ್ಟ ಅವರೆಲ್ಲರೂ ಎದ್ದು “ವೃದ್ದಾಶ್ರಮದ” ಒಳಹೊಕ್ಕರು.


Leave a Comment

ನ್ಯಾನೋ ಕಥೆಗಳು

ಗೊಂದಲ

ಈ ಇಳಿ ವಯಸ್ಸಿನಲ್ಲೂ ಅವರು ಕ್ರಿಕೆಟ್ ಅಭಿಮಾನಿ.. ಮಿಗಿಲಾಗಿ ತನ್ನ ಹುಟ್ಟೂರು ಬಗ್ಗೆ ತುಂಬು ಅಭಿಮಾನವನ್ನು ಹೊಂದಿದ್ದರು .. ಭಾರತ – ಪಾಕಿಸ್ತಾನ – ಬಾಂಗ್ಲಾದೇಶ ತ್ರಿಕೋಣ ಕ್ರಿಕೆಟ್ ಸರಣಿ ನಡೆಯುವ ವೇಳೆ ತಾನು ಯಾವ ದೇಶಕ್ಕೆ ಸಪೋರ್ಟ್ ಕೊಡಬೇಕೆಂಬ ವಿಚಾರದಲ್ಲಿ ಅವರಿಗೆ ಎಲ್ಲಿಲ್ಲದ ಗೊಂದಲ.
ಅವರು ಹುಟ್ಟೂರು ಸ್ವಾತಂತ್ರ ಪೂರ್ವದಲ್ಲಿ ಭಾರತದಲ್ಲಾದರೆ , ಅನಂತರ ಪಾಕಿಸ್ತಾನವಾಯ್ತು. ಈಗ ಅದು ಬಾಂಗ್ಲಾದೇಶದ ಒಂದು ಭಾಗ..!!


Leave a Comment

ನ್ಯಾನೋ ಕಥೆಗಳು

ಬೆನ್ನಲುಬು

ನಿನ್ನೆಯವೆರೆಗೂ ಭಾರತ ಮಾತೆ ಆರೋಗ್ಯವಾಗಿದ್ದಳು. ಇಂದು ಬೆಳಿಗ್ಗೆ ನೋಡುತ್ತೇನೆ ಬೆನ್ನಲುಬು ಮುರಿದು ವಿಕಲಾಂಗಳಾಗಿದ್ದಳು . ಕಾರಣ ಹುಡುಕಿದಾಗ ತಿಳಿಯಿತು.. ಅದೆಲ್ಲೋ  ಗೊಬ್ಬರ ಕೇಳಿ ಬೀದಿಗಿಳಿದ ರೈತರ ಮೇಲೆ ಸರ್ಕಾರ ಗೋಲಿಬಾರ್  ನಡೆಸಿತ್ತು.


Leave a Comment

ನ್ಯಾನೋ ಕಥೆಗಳು

ಜಗದ ವಿ’ಚಿತ್ರಗಳು

ವಿಧಿ
ಊರಲ್ಲಿ ಡೆಂಗ್ಯು ಜ್ವರ ವ್ಯಾಪಕವಾಗಿ ಹಬ್ಬಿತ್ತು.. ದಿನೇ ದಿನೇ ಸತ್ತವರ ಸಂಖ್ಯೆಯೂ ಹೆಚ್ಚಾಗುತ್ತಾ ಹೋಯಿತು.. ಆತ ಅದರಿಂದ ತಪ್ಪಿಸಿಕೊಳ್ಳಲು ಖುಷಿಯಿಂದಲೇ ದೂರದಲ್ಲಿರುವ ಮಾವನ ಮನೆಗೆ ಹೊರಟಿದ್ದ.
ಅಂದ ಹಾಗೆ ಆತ ಮಾವನ ಮನೆಗೆ ತಲುಪಿಲ್ಲವಂತೆ . ದಾರಿ ಮಧ್ಯೆ ಸಂಭವಿಸಿದ ಆಕ್ಸಿಡೆಂಟಲ್ಲಿ ಸತ್ತುಹೋದನಂತೆ.

ಅಭಿಪ್ರಾಯ
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗೆ ಕನ್ನಡಿ ಹಿಡಿಯುವ ಟಿ .ವಿ ನೇರಪ್ರಸಾರ ಕಾರ್ಯಕ್ರಮವದು. ಪತ್ರಕರ್ತ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಜನರ ಅಭಿಪ್ರಾಯವನ್ನು ಕೇಳುತ್ತಿದ್ದನು.ಮುಂದಿನಿಂದ ಬಂದ ಐಶಾರಾಮಿ ಕಾರನ್ನು ತಡೆದು ನಿಲ್ಲಿಸಿ ಅಭಿಪ್ರಾಯ ಪಡೆಯಲು ಮುಂದಾದ. “ನಾವು ಸಾರ್ವಜನಿಕ ಬಸ್ಸುಗಳನ್ನು ಉಪಯೋಗಿಸಬೇಕು , ಸ್ವಂತ ವಾಹನವಿದ್ದರೆ ಶೇರಿಂಗ್ ವ್ಯವಸ್ಥೆ ಯನ್ನು ಪಾಲಿಸಬೇಕು” ಆತ ಮಾತು ಮುಂದುವರೆಸುತ್ತಿದ್ದಂತೆ ಪತ್ರಕರ್ತ ಕಾರಿನ ಒಳಗೆ ಇಣುಕಿದ. ಉಳಿದ ಸೀಟ್ ಗಳೆಲ್ಲ ಖಾಲಿಯಾಗಿತ್ತು…

ಬೆಲೆ
ಆತ ಆಗರ್ಭ ಶ್ರೀಮಂತ. ಬಡವರನ್ನು ಎಂದೂ ತನ್ನ ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ.. ಅದರಿಂದ ತನ್ನ ‘ಬೆಲೆ’ ಕಡಿಮೆಯಾಗುತ್ತದೆ ಅಂತ ಹೇಳುತ್ತಿದ್ದ. ತನ್ನ ೪ ಅಂತಸ್ತಿನ ಮನೆಯ ‘ಗೃಹಪ್ರವೇಶ’ಕ್ಕೂ ಮೊನ್ನೆ ಮೊನ್ನೆ ನಡೆದ ಮಗಳ ಅದ್ದೂರಿ ‘ಮದುವೆ’ಗೂ ಊರಿನ ಯಾವುದೇ ಬಡವರನ್ನು ಆತ ಅಮಂತ್ರಿಸಿರಲಿಲ್ಲ.. ಆದರೆ ಪ್ರತೀ ಶುಕ್ರವಾರದ ನಮಾಜಿನಲ್ಲಿ ಆತನ ತಲೆ ಬಡವನೊಬ್ಬನ ಕಾಲ ಬುಡದಲ್ಲಿರುತ್ತಿತ್ತು..

ಬಡವ
ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಅವರಿಬ್ಬರ ಮದುವೆಗೆ ಆತನ ಬಡತನ ಅಡ್ಡ ಬಂತು. ಅವಳ ತಂದೆ ಬೇರೊಬ್ಬ ಶ್ರೀಮಂತನಿಗೆ ಕೊಟ್ಟು ಮದುವೆ ಮಾಡಿಸಿದರು. ಮದುವೆ ಆದ ಮರುವರ್ಷವೇ ಆತನ ವ್ಯವಹಾರವೆಲ್ಲ ನೆಲಗಚ್ಚಿದವು.. ನೋಡ ನೋಡುತ್ತಲೇ ಆತ ದರಿದ್ರನಾದ.

ವಿಪರ್ಯಾಸ
ಎಕರೆ ಗಟ್ಟಲೆ ಭೂಮಿಯಲ್ಲಿ ವಿಸ್ತಾರವಾಗಿ ಹರಡಿರುವ ಗಗನ ಚುಂಬಿ ಕಟ್ಟಡ ಕೊನೆಯ ಅಂತಸ್ತಿನಲ್ಲಿ “ಗೋ ಗ್ರೀನ್ ” ಎಂಬ ಹಸಿರು ಪೋಸ್ಟರ್ ರಾರಾಜಿಸುತ್ತಿತ್ತು ..


Leave a Comment